ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಥೆರಪಿ: ನಿಯಂತ್ರಣಕ್ಕೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು ಅ.9: ಇನ್ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ನಾಯಿಕೊಡೆಗಳಂತೆ ಕಾಣಿಸಿಕೊಳ್ಳುತ್ತಿರುವ ಆನ್ಲೈನ್ ಥೆರಪಿಗಳು ಮತ್ತು ಚಿಕಿತ್ಸೆ ಕ್ರಮಗಳ ಬಗ್ಗೆ ಪರಿಶೀಲಿಸಲು ಸರ್ಕಾರವು ಕೆಲವು ನಿಯಂತ್ರಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
36 ವರ್ಷದ ವ್ಯಕ್ತಿಯೊಬ್ಬರು ನೀಡಿದ ವಂಚನೆಯ ದೂರಿನ ಆಧಾರದ ಮೇಲೆ ಪೊಲೀಸರು ತಮ್ಮ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯನ್ನು ಪ್ರಶ್ನಿಸಿ 28 ವರ್ಷದ ವೆಲ್ನೆಸ್ ಥೆರಪಿಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ಹೊರಡಿಸಿದೆ.
ಯಾವುದೇ ನಿಯಂತ್ರಣವಿಲ್ಲ: ಪ್ರಕರಣದ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯಾಯಪೀಠವು, ಸಾರ್ವಜನಿಕ ಡೊಮೇನ್ನಲ್ಲಿ ಅವರೆಲ್ಲರೂ "ಇನ್ಸ್ಟಾಗ್ರಾಮ್ ಪ್ರಭಾವಿಗಳು'', "ನಕಲಿ ಚಿಕಿತ್ಸಕರು''. ಪ್ರಸ್ತುತ ಪ್ರಕರಣವು ಮನೋದೈಹಿಕ ಚಿಕಿತ್ಸೆ ಅಥವಾ ಕ್ಷೇಮ ಚಿಕಿತ್ಸೆಗೆ ಸಂಬಂಧಿಸಿದೆ, ಆದರೆ ಈ ರೀತಿಯ ಚಿಕಿತ್ಸಕರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ವಾಸ್ತವದಲ್ಲಿ ಅವರು ಯಾವುದೇ ನೈತಿಕತೆಗೆ ಬದ್ಧರಾಗಿಲ್ಲ ಅಥವಾ ಯಾವುದೇ ಮಾನದಂಡಗಳಿಂದ ನಿಯಂತ್ರಿಸಲ್ಪಟ್ಟಿಲ್ಲ ಎಂದು ನ್ಯಾಯಾಲಯವು ಹೇಳಿದೆ.
''ಆರೋಪ ಪಟ್ಟಿಯಲ್ಲಿನ ಅಂಶಗಳು ಅರ್ಜಿದಾರರ ವಿರುದ್ಧ ಯಾವುದೇ ತಂಡ ಅಥವಾ ಯಾವುದೇ ಅರ್ಹತೆ ಇಲ್ಲದೆ ವಂಚನೆ ಪ್ರಕರಣವನ್ನು ಸ್ಪಷ್ಟವಾಗಿ ಮಾಡುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ. ಜತೆಗೆ ಅರ್ಜಿದಾರರು ದೂರುದಾರರನ್ನು ಆಮಿಷವೊಡ್ಡಲು ವೆಬ್ ಪುಟವನ್ನು ರಚಿಸಿದ್ದಾರೆ ಮತ್ತು ಅರ್ಜಿದಾರರು ಆರಂಭದಲ್ಲಿ ತಾನು "ಕ್ಷೇಮ ಚಿಕಿತ್ಸಕ" ಮತ್ತು ಆಕೆಯ ತಂಡವು ದೂರುದಾರರನ್ನು ನೋಡಿಕೊಳ್ಳುತ್ತದೆ'' ಎಂದು ಚಾಟ್ಗಳು ಬಹಿರಂಗಪಡಿಸುತ್ತವೆ ಎಂದು ಕೋರ್ಟ್ ತಿಳಿಸಿದೆ.

"ಯಾವುದೇ ದಾಖಲೆಗಳಿಲ್ಲ ಅಥವಾ ಅರ್ಜಿದಾರರಿಗೆ ಯಾವುದೇ ರೀತಿಯ ಕ್ಷೇಮ ಚಿಕಿತ್ಸೆಯ ಕ್ಷೇತ್ರದಲ್ಲಿ ಇರಲು ಯಾವುದೇ ಅರ್ಹತೆ ಇಲ್ಲ ಎಂದು ಒಪ್ಪಿಕೊಳ್ಳಲಾಗಿದೆ. ಇದು ಯಾವುದೇ ಅರ್ಹತೆ ಇಲ್ಲದೆ, ಆಕೆಯದೇ ಆದ ವೆಬ್ ಪುಟವಾಗಿದೆ. ಆದ್ದರಿಂದ ಅರ್ಜಿದಾರರು ಯಾವುದೇ ವಸ್ತು ಅಥವಾ ಅರ್ಹತೆ ಇಲ್ಲದೆ ವೆಬ್ ಪುಟದ ಮೂಲಕ ಗ್ರಾಹಕರನ್ನು ಕ್ಷೇಮ ಚಿಕಿತ್ಸೆಯ ವೆಬ್ಗೆ ಆಮಿಷವೊಡ್ಡಿದ ಪ್ರಕರಣವಾಗಿದೆ'' ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಒಪ್ಪಿಗೆ ಪತ್ರ: ಕುತೂಹಲಕಾರಿ ಅಂಶವೆಂದರೆ, ದೂರುದಾರರು ಸಹಿ ಮಾಡಿದ ಸಮ್ಮತಿಯ ನಮೂನೆಯು ಹೀಗೆ ತಿಳಿಸಲಾಗಿದೆ "ಸಮಾಲೋಚನೆಯ ಅವಧಿಯಲ್ಲಿ ಹಂಚಿಕೊಳ್ಳಲಾದ ವಿಷಯ ಅಥವಾ ಮಾಹಿತಿಯು ಯಾವುದೇ ರೀತಿಯಲ್ಲಿ ಸರ್ಕಾರಿ ದಾಖಲೆಯಾಗಿ ಅಥವಾ ನ್ಯಾಯಾಲಯದಲ್ಲಿ ಅಥವಾ ಯಾವುದೇ ಮಧ್ಯಮ-ಆಧಾರದ ಸಾಕ್ಷ್ಯವಾಗಿ ಸ್ವೀಕಾರಾರ್ಹವಲ್ಲ'' ಎಂದು. ಆದರೆ ಇದು ಅರ್ಜಿದಾರರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಬಹುದು ಎಂದು ಅರ್ಥವಲ್ಲ ಎಂದು ನ್ಯಾಯಾಲಯ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಥೆರಪಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಜಾಹೀರಾತುಗಳು ಬರುತ್ತಿರುವುದರಿಂದ ಅವುಗಳನ್ನು ನಿರ್ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ದೇಶವು ತೀವ್ರವಾದ ಕೋವಿಡ್-19 ಸಾಂಕ್ರಾಮಿಕ ರೋಗ ಎದುರಿಸುತ್ತಿರುವಾಗ ಅರ್ಜಿದಾರರಾದ ಸಂಜನಾ ಮತ್ತು ದೂರುದಾರರಾದ ಶಂಕರ್ ಅವರು ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡರು. ದೂರುದಾರರು, ರಾತ್ರಿಯಲ್ಲಿ ಅಕೆಯೊಂದಿಗೆ ಚಾಟ್ ಮಾಡುವಾಗ, ಒತ್ತಡವನ್ನು ವ್ಯಕ್ತಪಡಿಸಿದಂತೆ, ಅವಳು ತನ್ನ ಇನ್ಸ್ಟಾಗ್ರಾಮ್ ಪುಟಕ್ಕೆ - "ಪಾಸಿಟಿವಿಟಿ-ಫಾರ್-ಎ-360-ಲೈಫ್" ಗೆ ಆಹ್ವಾನಿಸುವ ಮೂಲಕ ಅತನಿಗೆ ತಾನು ಚಿಕಿತ್ಸಕಿ ಎಂದು ಹೇಳಿಕೊಂಡಳು ಮತ್ತು ಅತನಿಗೆ "ರಿಶ್ತಾ" ಎಂಬ ಹೆಸರಿನ ಸಂದೇಶವನ್ನು ಕಳುಹಿಸಿದಳು, ಅದರೆ ಆದು ಆಕೆಯ ಹೆಸರಲ್ಲ.
ತನ್ನ 3.15 ಲಕ್ಷಕ್ಕೆ ವರ್ಗಾವಣೆ ಮಾಡಿ ವಂಚನೆಗೊಳಗಾದ ದೂರುದಾರರು, ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಹಲವು ನಕಲಿ ಹೆಸರುಗಳಲ್ಲಿ ಆಕೆ ಕನಿಷ್ಠ 15 ನಕಲಿ ಪ್ರೊಫೈಲ್ಗಳನ್ನು ನಿರ್ವಹಿಸುತ್ತಿದ್ದಾರೆಂದು ದೂರಿದ್ದರು.
ಆಕೆಯನ್ನು ಭೇಟಿಯಾಗಲು ನಿರಾಕರಿಸಿದ ನಂತರ ಆತ ಅವಳ ಖಾತೆಗಳ ಹಿನ್ನೆಲೆಯನ್ನು ಪರಿಶೀಲಿಸಲು ಪ್ರಾರಂಭಿಸಿದನು, ಅದಕ್ಕಾಗಿ ಅತ ಆಕೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದನು, ಇದರಿಂದಾಗಿ ಆಕೆ ಆತನ ಖಾತೆಯನ್ನು ನಿರ್ಬಂಧಿಸಿದ್ದಳು, ಬಳಿಕ ಆತನ ವಿರುದ್ಧ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದಳು.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications