ವಿವಾಹಿತೆ ಎಂಬ ಕಾರಣಕ್ಕೆ ಮಗಳಿಗೆ ಅನುಕಂಪದ ನೇಮಕಾತಿ ನಿರಾಕರಿಸುವಂತಿಲ್ಲ: ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 16: ಸಹಾನುಭೂತಿಯ ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಿಂದ ವಿವಾಹಿತ ಮಗಳನ್ನು ಪರಿಗಣಿಸದೆ ಇರುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಅನುಕಂಪದ ನೆಲೆಯಲ್ಲಿ ಮಾಡಿಕೊಳ್ಳಲಾಗುವ ನೇಮಕಾತಿಯ ಸಂದರ್ಭದಲ್ಲಿ ವ್ಯಕ್ತಿಯ ಮಗನ ವೈವಾಹಿಕ ಸ್ಥಿತಿ ಮುಖ್ಯವಾಗದೆ ಇದ್ದರೆ, ಮಗಳ ವೈವಾಹಿಕ ಸ್ಥಿತಿಯೂ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ವಿವಾಹಿತ ಮಗಳು ಕುಟುಂಬದ ಭಾಗ ಅಲ್ಲ ಎಂದಾಗುವುದಿಲ್ಲ ಮತ್ತು ಮದುವೆಯಾದ ಮಗ ಮಾತ್ರವೇ ಕುಟುಂಬದ ಭಾಗವಾಗಿ ಮುಂದುವರಿಯುತ್ತಾನೆ ಎಂಬ ಗ್ರಹಿಕೆಯನ್ನು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮಂಗಳವಾರ ತೀರ್ಪು ನೀಡಿದ್ದಾರೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭುವನೇಶ್ವರಿ ವಿ. ಪುರಾಣಿಕ್ ಎಂಬುವವರು, ತಮ್ಮ ತಂದೆಯ ಸಾವಿನ ಬಳಿಕ ಅವರ ಕೆಲಸವನ್ನು ಅನುಕಂಪದ ಆಧಾರದಲ್ಲಿ ಪಡೆದುಕೊಳ್ಳುವ ಪ್ರಯತ್ನವನ್ನು ಮಾನ್ಯ ಮಾಡದ್ದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. 'ಮದುವೆಯಾದ ಮಗಳು' ಎಂಬ ಕಾರಣಕ್ಕೆ ನೇಮಕಾತಿಗೆ ಅವರನ್ನು ಪರಿಗಣಿಸುವಂತಿಲ್ಲ ಎಂದು ತಿರಸ್ಕರಿಸಲಾಗಿತ್ತು. ಮುಂದೆ ಓದಿ.

ನಿಯಮಗಳ ಉಲ್ಲಂಘನೆ
ತಮ್ಮ ಅರ್ಜಿಯನ್ನು ತಿರಸ್ಕರಿಸಿರುವುದು ಕರ್ನಾಟಕ ನಾಗರಿಕ ಸೇವೆಗಳ (ಪರಿಹಾರದ ನೆಲೆಯಲ್ಲಿ ನೇಮಕಾತಿ) ನಿಮಯ 1996ರ ಅಡಿಯಲ್ಲಿ ವಿವಿಧ ನಿಯಮಗಳು ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಭುವನೇಶ್ವರಿ ವಿ. ಪುರಾಣಿಕ್ ಆರೋಪಿಸಿದ್ದರು.

ವಿವಾಹಿತೆ ಎಂಬ ಕಾರಣಕ್ಕೆ ತಿರಸ್ಕಾರ
ಮೃತಪಟ್ಟ ಸರ್ಕಾರಿ ಉದ್ಯೋಗಿಗೆ ಒಬ್ಬ ಮತ್ತು ಮಗಳಿದ್ದಾರೆ. ಅನುಕಂಪದ ನೆಲೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ವಿಚಾರದಲ್ಲಿ ಮಗನಿಗೆ ಆಸಕ್ತಿ ಇಲ್ಲದ ಕಾರಣ ಈ ಉದ್ಯೋಗವನ್ನು ಅವರು ತಿರಸ್ಕರಿಸಿದ್ದರು. ಆದರೆ ಆ ಕೆಲಸ ತಮಗೆ ನೀಡುವಂತೆ ಮಗಳು ಸಲ್ಲಿಸಿದ್ದ ಅರ್ಜಿಯನ್ನು, ಆಕೆ ವಿವಾಹಿತೆ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು.

ಅವಲಂಬಿತರನ್ನು ವ್ಯಾಖ್ಯಾನಿಸಬೇಕು
ಸಹಾನುಭೂತಿ ಆಧಾರಿತ ನೇಮಕಾತಿಯಲ್ಲಿ ಅನುಮತಿ ಅಥವಾ ನಿರಾಕರಣೆಗೆ ಅವಲಂಬನೆಯು ಪ್ರಮುಖವಾದ ಅಂಶವಾಗಿದೆ. ಆದರೆ ಮಗಳು ವಿವಾಹಿತೆ ಎಂಬ ಕಾರಣಕ್ಕೆ 'ಅವಲಂಬಿತರು' ಮತ್ತು 'ಕುಟುಂಬ'ವನ್ನು ಇಲ್ಲಿ ವ್ಯಾಖ್ಯಾನಿಸಿಯೇ ಇಲ್ಲ.

ಸಂಬಂಧವನ್ನು ಮದುವೆ ಬದಲಿಸುವುದಿಲ್ಲ
'ಮಗನಾಗಿರಲಿ ಅಥವಾ ಮಗಳಾಗಿರಲಿ, ಪೋಷಕರೊಂದಿಗಿನ ಮಗುವಿನ ಸಂಬಂಧದ ಮುಂದುವರಿಕೆಯನ್ನು ಮದುವೆ ನಿರ್ಧರಿಸುವುದಿಲ್ಲ. ಮದುವೆಗೂ ಮುನ್ನ ಮಗನಾಗಿದ್ದವನು ಮಗನಾಗಿಯೇ ಇರುತ್ತಾನೆ. ಹಾಗೆಯೇ ಮಗಳು ಕೂಡ ಮದುವೆಗೆ ಮುನ್ನ ಮತ್ತು ನಂತರವೂ ಮಗಳಾಗಿಯೇ ಮುಂದುವರಿಯಬೇಕು. ಮದುವೆಯ ಕಾರಣಕ್ಕೆ ಸಂಬಂಧಗಳು ಬದಲಾಗುವುದಿಲ್ಲ. ಮದುವೆಯ ಬಳಿಕ ಪೋಷಕರೊಂದಿಗಿನ ಮಗಳ ಸಂಬಂಧ ದೂರವಾಗುವುದಿಲ್ಲ. ಹಾಗೆಯೇ ಈ ಸಂಬಂಧಗಳು ವೈವಾಹಿಕ ಸ್ಥಿತಿಯ ಮೂಲಕ ವ್ಯಾಖ್ಯಾನ ಅಥವಾ ನಿರ್ಧರಿತಗೊಳ್ಳುವುದಿಲ್ಲ' ಎಂದು ಕೋರ್ಟ್ ಹೇಳಿದೆ.
Recommended Video

ಸಂವಿಧಾನದ ವಿಧಿಗಳ ಉಲ್ಲಂಘನೆ
ಮದುವೆಯಾದ ಮಗಳನ್ನು ಈ ನಿಯಮಗಳ ಅಡಿಯಲ್ಲಿ 'ಕುಟುಂಬ'ದ ಅಭಿವ್ಯಕ್ತಿಯ ಪರಿಧಿಯಿಂದ ಹೊರಗಿಡುವುದು ಅಕ್ರಮ ಮತ್ತು ಅಸಾಂವಿಧಾನಿಕ. ಸಂವಿಧಾನದ 14 ಮತ್ತು 15ನೇ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು











Click it and Unblock the Notifications