ಕೊವಿಡ್ 19 ಹಗರಣ: ಉತ್ತರ ಕೊಡಿ ಬಿಜೆಪಿ ಟ್ವಿಟ್ಟರಲ್ಲಿ ಟ್ರೆಂಡಿಂಗ್
ಬೆಂಗಳೂರು, ಜುಲೈ 23: ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆ ಸೇರಿ ಒಟ್ಟು ₹4167 ಕೋಟಿ ರು ಗಳನ್ನು ಮಾರ್ಚ್ ತಿಂಗಳಿನಿಂದ ಇಲ್ಲಿ ತನಕ ಖರ್ಚು ಮಾಡಲಾಗಿದೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾಧ್ಯಮ ಗೋಷ್ಠಿಯಲ್ಲಿ ₹324 ಕೋಟಿ ಎಂದಿದ್ದಾರೆ. ಸರ್ಕಾರ ಯಾಕೆ ಸುಳ್ಳು ಹೇಳುತ್ತಿದೆ ? ಕೊವಿಡ್ 19 ಸಂಬಂಧಿಸಿದ ಖರೀದಿಯಲ್ಲಿ ಸರ್ಕಾರ 2000 ಕೋಟಿ ರು ನುಂಗಿ ಹಾಕಿದೆ ಎಂದು ಸಿದ್ದರಾಮಯ್ಯ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
Recommended Video
ಸುದ್ದಿಗೋಷ್ಠಿ ಬೆನ್ನಲ್ಲೇ ಮೆಡಿಕಲ್ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ #ಉತ್ತರಕೊಡಿಬಿಜೆಪಿ ಎಂದು ಕಾಂಗ್ರೆಸ್ಸಿನ ವಿವಿಧ ಸೆಲ್, ಸಮಿತಿ, ನಾಯಕರು ಟ್ವೀಟ್ ಮಾಡಿ ಪ್ರಶ್ನಿಸತೊಡಗಿದ್ದಾರೆ. ಇದರಿಂದ ಟ್ವಿಟ್ಟರ್ ನಲ್ಲಿ ಟ್ರೆಂಡ್ ಶುರುವಾಗಿದೆ.
ಮೆಡಿಕಲ್ ಸಾಮಾಗ್ರಿ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಏನೇ ಮಾಹಿತಿ ಕೇಳಿದರೂ ನಾವು ಕೊಡುತ್ತೇವೆ ಎಂದು ಸಂಬಂಧಪಟ್ಟ ಸಚಿವರಾದ ಡಾ. ಅಶ್ವಥ್ ನಾರಾಯಣ, ಡಾ. ಸುಧಾಕರ್ ಹಾಗೂ ಬಿ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಈ ಟ್ರೆಂಡಿಂಗ್ ಸಂಬಂಧಿಸಿದಂತೆ ಆಯ್ದ ಟ್ವೀಟ್ಸ್ ಇಲ್ಲಿದೆ...

ರೋಗಿಗಳನ್ನು ಬೀದಿಯಲ್ಲಿ ಬಿಡುವುದು ಆತ್ಮ ನಿರ್ಭರ್
ಆತ್ಮ ನಿರ್ಭರ್ ಎಂದರೆ ರೋಗಿಗಳನ್ನು ಬೀದಿಯಲ್ಲಿ ಬಿಡುವುದಲ್ಲ, ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು. ಸೂಕ್ತ ಚಿಕಿತ್ಸೆ ಇಲ್ಲದೇ ಪೌರ ಕಾರ್ಮಿಕರು ತೊಂದರೆಯಲ್ಲಿದ್ದಾರೆ. ಆಶಾ ಕಾರ್ಯಕರ್ತೆಯರ ದುಡಿಮೆ ನದಿಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆ.
ಯಾರಿಗೆ ಬಂತು ಎಲ್ಲಿಗೆ ಬಂತು ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್? ವೆಂಟಿಲೇಟರ್ ಖರೀದಿಯಲ್ಲಿ ಹಗರಣ, ಕೊರೊನಾ ಆರೋಗ್ಯ ಸಾಮಾಗ್ರಿ ಖರೀದಿಯಲ್ಲಿ ಹಗರಣದ ನಡುವೆ ಸರ್ಕಾರಕ್ಕೆ ಮುಖ್ಯವಾಗಿರುವುದು ಜನರ ಪ್ರಾಣವೋ ಲೂಟಿಯ ವ್ಯಾಮೋಹವೋ? ಎಂದು ಪ್ರಶ್ನಿಸಲಾಗಿದೆ.
|
ಕಳ್ಳರ ಕೈಗೆ ಬೀಗ ಕೊಡುವುದೂ ಒಂದೇ ಬಿಜೆಪಿ ಅಧಿಕಾರವೂ ಒಂದೇ
ಕಳ್ಳರ ಕೈಗೆ ಬೀಗ ಕೊಡುವುದೂ ಒಂದೇ, ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಡುವುದೂ ಒಂದೇ ಎಂಬ ಸಂಗತಿಯನ್ನು ಈ ಕರೋನಾ ಸಂದರ್ಭವು ಸಾಬೀತುಪಡಿಸಿದೆ.
ಜನರ ಜೀವವೆಂಬುದು ವ್ಯಾಪಾರದ ಸರಕಾಗಿ ಹೋಗಿದೆ. #ಉತ್ತರಕೊಡಿಬಿಜೆಪಿ
|
ಇಲ್ಲಿಯವರೆಗೂ ನನಗೆ ಉತ್ತರ ಬಂದಿಲ್ಲ
ಇದುವರೆಗೂ ಸರ್ಕಾರಕ್ಕೆ 2 ಪತ್ರ ಬರೆಯಲಾಗಿದೆ. 10-07-2020 ರಂದು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ 20 ಪತ್ರ ಬರೆದಿರುವೆ.ಇವರು ಪ್ರಾಮಾಣಿಕರಾಗಿದ್ದರೆ ಉತ್ತರ ಕೊಡಲು ಏನು ತೊಂದರೆ? ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
|
ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕೂಗು
ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಕೋವಿಡ್ ಸೇವೆಯಲ್ಲಿ ಮನೆ ಮನೆಗೆ ತೆರಳಿ ದುಡಿಯುತ್ತಿರುವರು ಅವರ ಮೇಲೆ ಹಲ್ಲೆಯಾದರು ಅವರ ಕೆಲಸ ಬಿಡಲಿಲ್ಲ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕೂಗು ಕೇಳುತ್ತಿಲ್ಲ ಸರ್ಕಾರ ನಿದ್ರೆಯಲ್ಲಿದೆ, ಅವರಿಗೆ ನ್ಯಾಯ ಒದಗಿಸುವುದು ನಿಮ್ಮ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಲಾಗಿದೆ.
|
ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ
ಕೊವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೇಂದ್ರ ಸರ್ಕಾರವು ರಾಜಸ್ಥಾನ ಸರ್ಕಾರವನ್ನು ಉರುಳಿಸುವುದರಲ್ಲಿ ನಿರತವಾಗಿದೆ. ಕರ್ನಾಟಕದ ಬಿಜೆಪಿ ಸರಕರವು ಕೊವಿಡ್ 19 ಉಪಕರಣ ಸಾಮಾಗ್ರಿ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದೆ.
|
ದಿನಗೂಲಿ ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ
ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು, ಮಡಿವಾಳರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲರೂ ಸಮಸ್ಯೆಯಲ್ಲಿದ್ದಾರೆ. ಯಾರಿಗೂ ಸರಿಯಾದ ಆರ್ಥಿಕ ನೆರವು ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
|
ಜನರ ಅನಾರೋಗ್ಯವನ್ನು ಲಾಭಕ್ಕಾಗಿ ಬಳಸುತ್ತಿದೆ
ಇತ್ತೀಚೆಗೆ ಕರೋನಾ ಸೋಂಕಿನ ವಿಷಯವನ್ನು ಬಳಸಿಕೊಂಡು ನಕಲಿ ವೈದ್ಯಕೀಯ ಬಿಲ್ಲಿಂಗ್ ಮಾಡಿಸುವ ಸಲುವಾಗಿಯೇ ಸರ್ಕಾರವು ಸೋಂಕಿನ ಲಕ್ಷಣ ಇಲ್ಲದವರನ್ನೂ ಕೂಡಾ ಸರ್ಕಾರೀ ಸ್ಥಳದಲ್ಲಿ ಕ್ವಾರಂಟೈನ್ ಗೆ ಒಳಪಡಿಸಲು ಪ್ರಯತ್ನಿಸುತ್ತಿದೆ.ಜನರ ಅನಾರೋಗ್ಯವೆಂಬುದೂ ಕೂಡಾ ಪಕ್ಷಕ್ಕೆ ಲೂಟಿ ಮಾಡುವ ಸಂಗತಿಯಾಗಿದೆ, ಉತ್ತರಕೊಡಿ ಬಿಜೆಪಿ ಎಂದು ಪ್ರಶ್ನಿಸಲಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications