ನೇತ್ರದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಪತ್ರ
ಬೆಂಗಳೂರು, ನ.29 : 'ವರನಟ ಡಾ.ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು ಕಣ್ಣುಗಳನ್ನು ದಾನ ಮಾಡಿ' ಎಂದು ಕರೆ ನೀಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರಣ ನಂತರ ನೇತ್ರದಾನ ಮಾಡುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನ
ಕಂಠೀರವ
ಸ್ಟುಡಿಯೋದಲ್ಲಿ
ಶನಿವಾರ
ಡಾ.ರಾಜ್
ಸ್ಮಾರಕವನ್ನು
ಲೋಕಾರ್ಪಣೆ
ಮಾಡಿ
ಮಾತನಾಡಿದ
ಸಿಎಂ
ಸಿದ್ದರಾಮಯ್ಯ
ಅವರು,
ಎಲ್ಲರೂ
ನೇತ್ರದಾನ
ಮಾಡಿ,
ಕಣ್ಣಿಲ್ಲದವರಿಗೆ
ಬೆಳಕು
ನೀಡಿ,
ಆ
ಸಂತೋಷವನ್ನು
ಹಂಚಿಕೊಳ್ಳಿ
ಎಂದು
ಕರೆ
ನೀಡಿದರು.
ಡಾ.ರಾಜ್ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಕಣ್ಣಿಲ್ಲದವರಿಗೆ ಬೆಳಕು ನೀಡಿದ್ದಾರೆ. ನಾವು ನೇತ್ರದಾನ ಮಾಡುವ ಮೂಲಕ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲೇ
ಮರಣದ
ನಂತರ
ತಾವು
ನೇತ್ರದಾನ
ಮಾಡುವುದಾಗಿ
ಘೋಷಿಸಿದ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು,
ಆ
ಕುರಿತ
ಪತ್ರಕ್ಕೆ
ಸಹಿ
ಹಾಕಿದರು.
ನೇತ್ರದಾನ
ಮಾಡುವ
ಮೂಲಕ
ನಾನು
ರಾಜ್ಗೆ
ಗೌರವ
ಸಲ್ಲಿಸುತ್ತಿದ್ದೇನೆ
ಎಂದರು.
[ರಾಜ್
ಸ್ಮಾರಕ
ಉದ್ಘಾಟನೆಯ
ವಿವರಗಳು
ಇಲ್ಲಿವೆ]
ಡಾ.ರಾಜ್ ಕುಮಾರ್ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವಿತ್ತು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಹೇಳಿದರು. ರಾಜ್ ಕುಮಾರ್ ಅವರಿಗೆ ಅವರೇ ಸಾಟಿ, ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ ಅವರು, ತಮ್ಮ ನಟನೆ ಮೂಲಕ ಜನರನ್ನು ತಲುಪುವುದರ ಜೊತೆ ತಮ್ಮ ಸರಳತೆ ಮೂಲಕ ಜನರಿಗೆ ಹತ್ತಿರವಾದರು ಎಂದು ಸಿಎಂ ಬಣ್ಣಿಸಿದರು.
ಡಾ.ರಾಜ್
ಅವರಿಗಿದ್ದ
ವಿನಯ,
ಸರಳ
ವ್ಯಕ್ತಿತ್ವ
ಎಲ್ಲರಿಗೂ
ಮಾದರಿಯಾಗಬೇಕು
ಎಂದು
ಕರೆ
ನೀಡಿದ
ಸಿಎಂ,
ಡಾ.ರಾಜ್
ನಮ್ಮ
ಜಿಲ್ಲೆಯವರು
ಎಂದು
ಹೇಳಿಕೊಳ್ಳಲು
ಹೆಮ್ಮೆಯಾಗುತ್ತಿದೆ.
ನಾನು
ಸಿಎಂ
ಆಗಿರುವಾಗಲೇ
ಅವರ
ಸ್ಮಾರಕ
ಲೋಕಾರ್ಪಣೆಯಾಗುತ್ತಿದೆ
ಎಂದರು.
ನಮ್ಮ ಕಾಡಿನವರು : 'ನಾವು ಡಾ.ರಾಜ್ ಅವರನ್ನು ಭೇಟಿ ಮಾಡಿದರೆ ಬನ್ನಿ..ಬನ್ನಿ ನಮ್ಮ ಕಾಡಿನವರು ಬಂದಿದ್ದೀರಿ' ಎಂದು ಪ್ರೀತಿಯಿಂದ ಹೇಳುತ್ತಿದ್ದರು. ರಾಜ್ಗೆ ಅವರ ಊರಿನವರೆಂದರೆ ಬಹಳ ಪ್ರೀತಿ ಇತ್ತು. ಮೈಸೂರಿನವರನ್ನು ನಮ್ಮ ಕಾಡಿನವರು ಎಂದು ಹೇಳುತ್ತಿದ್ದರು ಎಂದು ಸಿದ್ದರಾಮಯ್ಯ ಅವರು ಹಳೆಯ ನೆನಪನ್ನು ಹಂಚಿಕೊಂಡರು.