ಚಿಕ್ಕಮಗಳೂರಿನ ನೂರು ಸ್ಥಳಗಳಲ್ಲಿ ವೈ ಫೈ ಹಾಟ್ ಸ್ಪಾಟ್
ಚಿಕ್ಕಮಗಳೂರು, ಜುಲೈ 09: ಚಿಕ್ಕಮಗಳೂರು ಜಿಲ್ಲೆಯಲ್ಲಿ 3ಜಿ ಸೇವೆಯನ್ನು ಒದಗಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ ಎಲ್ ಸಂಸ್ಥೆ ಈಗ ಜಿಲ್ಲೆಯ ನೂರು ಸ್ಥಳಗಳಲ್ಲಿ ವೈ-ಫೈ ಹಾಟ್ಸ್ಪಾಟ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಬಿಎಸ್ಎನ್ಎಲ್ನ ಕರ್ನಾಟಕ ವಿಭಾಗದ ಜನರಲ್ ಮ್ಯಾನೇಜರ್ ಸತ್ಯನಾರಾಯಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 32 ಮೊಬೈಲ್ ಟವರ್ಗಳಿಗೆ ಬೇಡಿಕೆಯಿದ್ದು, ಹತ್ತು ಟವರ್ಗಳು ಸದ್ಯದಲ್ಲೇ ಮಂಜೂರಾಗಲಿವೆ ಎಂದಿದ್ದಾರೆ.
3ಜಿ ಸೇವೆ ಹಾಗೂ ವೈಫೈ ಹಾಟ್ ಸ್ಪಾಟ್ ಗಳನ್ನು ಶೀಘ್ರದಲ್ಲೇ ತಾಲೂಕು ಹಾಗೂ ಗ್ರಾಮಪಂಚಾಯಿತಿ ಮಟ್ಟಕ್ಕೂ ಕೊಂಡೊಯ್ಯಲಾಗುವುದು ಎಂದರು. ಚಿಕ್ಕಮಗಳೂರಿಗೂ ಮೊದಲು ಕರ್ನಾಟಕದ ಮಂಡ್ಯ, ಮಂಗಳೂರು, ತುಮಕೂರು, ದಾವಣಗೆರೆ-ಚಿತ್ರದುರ್ಗ ನಗರಗಳಲ್ಲಿ ಬಿಎಸ್ ಎನ್ಎಲ್ 3ಜಿ ಸೇವೆ ಒದಗಿಸಿದೆ.
ನಗರದ ಬೋಳರಾಮೇಶ್ವರ ವೃತ್ತ, ಹೊಸಮನೆ ಬಡಾವಣೆ ಅಲ್ಲದೆ ಹಿರೇಮಗಳೂರು, ಹಲಸು ಮನೆ, ತೆಂಗಿನ ಮನೆ, ಬಾಳೆಹೊನ್ನೂರು, ಮೂಡಿಗೆರೆ ಟೌನ್, ಭೂತನ ಕಾಡು ಹಾಗೂ ಕೂಡ್ಲುವಳ್ಳಿಯಲ್ಲಿ ಟವರ್ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ.

2ಜಿ ಸೇವೆ, ಬಿಟಿಎಸ್ ಟವರ್ಗಳು, 3ಜಿ ಟವರ್ಗಳು, ಸಿಡಿಎಂಎ ಟವರ್ಗಳನ್ನು ನಿರ್ಮಿಸಲಾಗುತ್ತದೆ. ಜಿಲ್ಲೆಯಲ್ಲಿ ಕೊಪ್ಪ, ಶೃಂಗೇರಿ, ಮೂಡಿಗೆರೆ ಈ ಮೂರು ತಾಲೂಕುಗಳು ಅತಿ ಹೆಚ್ಚು ಗ್ರಾಹಕರನ್ನು ಹೊಂದಿವೆ. ಬಿಎಸ್ಎನ್ಎಲ್ಗೆ ಶೇ.70ರಷ್ಟು ಆದಾಯ ಮೂರು ತಾಲೂಕುಗಳಿಂದಲೇ ಬರುತ್ತಿದೆ ಎಂದು ತಿಳಿಸಿದರು.
ನೆಟ್ವರ್ಕ್ ಜಾಲ: ಕೇಂದ್ರ ಸರ್ಕಾರದ ಹೈ ಸ್ಪೀಡ್ ಆಪ್ಟಿಕ್ ಫೈಬರ್ ಜಾಲ ಸಂಪರ್ಕ ಯೋಜನೆ ಮೂಲಕ ಕರ್ನಾಟಕದ 5,600 ಗ್ರಾಮ ಪಂಚಾಯಿತಿಗಳನ್ನು ಬೆಸೆಯಲು ಯೋಜನೆ ರೂಪಿಸಲಾಗಿದೆ.
ಸುಮಾರು 1,300 ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಸಾಧಿಸಲಾಗಿದೆ, ಮಂದ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೈಸ್ಪೀಡ್ ಸಂಪರ್ಕ ಸಾಧ್ಯವಿದೆ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಸುಮಾರು 64ಕ್ಕೂ ಅಧಿಕ ವೈಫೈ ಹಾಟ್ ಸ್ಪಾಟ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಎಂಜಿ ರಸ್ತೆ ಟ್ರೀನಿಟಿ ಮಾಲ್, ಲಾಲ್ ಬಾಗ್ ನಂತರ ಕಬ್ಬನ್ ಪಾರ್ಕ್ ಮುಂತಾದೆಡೆ ವೈಫೈ ಲಭ್ಯವಾಗಲಿದೆ ಎಂದು ಬಿಎಸ್ ಎನ್ ಎಲ್ ಪ್ರಕಟಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications