ಮಹದಾಯಿ ಕಳಸಾಬಂಡೂರಿ ಶೀಘ್ರವೇ ಅಧಿಸೂಚನೆ ಹೊರಡಿಸಿ: ಎಎಪಿ
ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ, ಗದಗ್, ಬೆಳಗಾವಿ ಭಾಗದ ರೈತರುಗಳ ಸತತ 4 ವರ್ಷಗಳ ನಿರಂತರ ಧರಣಿ - ಸತ್ಯಾಗ್ರಹಗಳು ಹಾಗೂ ಅನೇಕಾನೇಕ ಹೋರಾಟಗಳ ಫಲಶ್ರುತಿಯೆಂಬಂತೆ ಕಳೆದ ವರ್ಷದ 2018ರ ಆಗಸ್ಟ್ 14ರಂದು ಮಹದಾಯಿ ಕಳಸಾ ಬಂಡೂರಿ ನ್ಯಾಯಾಧೀಕರಣದ ಮಹತ್ವದ ತೀರ್ಪು ಬಂದು ಕರ್ನಾಟಕ ರಾಜ್ಯದ ಈ ಎಲ್ಲಾ ಜಿಲ್ಲೆಗಳು 13.5 ಟಿ.ಎಂ.ಸಿ. ಯಷ್ಟು ನೀರನ್ನು ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದೆಂದು ಮಹತ್ವದ ತೀರ್ಪನ್ನು ನೀಡಿತು.
ಈ ಮಹತ್ವದ ತೀರ್ಪು ಬಂದು 14 ತಿಂಗಳುಗಳು ಕಳೆದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನೀರನ್ನು ಬಳಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸದಿರುವುದು ತೀರಾ ದುರದೃಷ್ಟಕರ ಹಾಗೂ ದುರ್ದೈವದ ಸಂಗತಿಯೆಂದೇ ಹೇಳಬಹುದು. ಈ ಹಿಂದೆ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಈ ಭಾಗದ ರೈತರಿಗೆ ಕೂಡಲೇ ನೀರನ್ನು ಪೂರೈಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆಂದು ಭರವಸೆಯನ್ನು ನೀಡಿ ಮತಯಾಚಿಸಿದ್ದರು.
ಆದರೂ ಸಹ ಕೇಂದ್ರವು ಈ ಬಗ್ಗೆ ಇನ್ನೂ ಸಹ ಅಧಿಸೂಚನೆಯನ್ನೇ ಹೊರಡಿಸದ ರೈತರುಗಳನ್ನು ಅನೇಕ ವರ್ಷಗಳ ಸಂಕಷ್ಟಗಳಿಂದ ಪಾರುಮಾಡದೆ ಮತ ನೀಡಿದ ಜನತೆಗೆ ಮೋಸವನ್ನು ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರಸ್ತುತ ಈ ವಿಚಾರದಲ್ಲಿ ಸದಾ ಖ್ಯಾತೆ ತೆಗೆಯುತ್ತಿದ್ದ ಗೋವಾ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ರಾಜದಲ್ಲಿಯೂ ಸಹ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಸಹ ಕೇಂದ್ರವು ಈ ಬಗ್ಗೆ ಅಧಿಸೂಚನೆಯನ್ನೇ ಹೊರಡಿಸದಿರುವುದು ಅತ್ಯಂತ ಬೇಸರ ಹಾಗೂ ದುಃಖದಾಯಕ ಸಂಗತಿಯಾಗಿದೆ. ಈ ನಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಇದುವರೆವಿಗೂ ಯಾವ ರಾಜ್ಯದವರೂ ಸಹ ಮೇಲ್ಮನವಿಯನ್ನು ಸಲ್ಲಿಸದಿದ್ದರೂ ಸಹ ಇದೇ ಸುಳ್ಳು ನೆಪವನ್ನು ಹೇಳಿಕೊಂಡು ರಾಜ್ಯದ ಈ ಹಿಂದಿನ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಮತ್ತು ಈಗಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಗಳು ರೈತರ ಹಾದಿ ತಪ್ಪಿಸುತ್ತಿರುವುದು ಕಳವಳಕಾರಿಯಾಗಿದೆ.

ಈ ನೀರಿನ ವ್ಯಾಜ್ಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿ ಇರಾದೆ ಈ ಮೂರು ಪಕ್ಷಗಳಿಗೆ ಇದ್ದಂತಿದೆ. ನಿನ್ನೆಯಿಂದ ರೈತರು ಧರಣಿ ನಡೆಸುತ್ತಿದ್ದರೂ ಸಹ ಸ್ಥಳಕ್ಕೆ ಸರ್ಕಾರದ ಯಾವುದೇ ಮಂ ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ಜೀವಂತವಾಗಿಟ್ಟುಕೊಳ್ಳಬೇಕೆಂಬ ಗಳಿಗೆ ಇದ್ದಂತಿದೆ. ನಿನ್ನೆಯಿಂದ ರೈತರುಗಳು ನಗರದ ರೈಲು ನಿಲ್ದಾಣದಲ್ಲಿ ಆಹೋರಾತ್ರಿ ಸಹ ಸಳಕ್ಕೆ ಸರ್ಕಾರದ ಯಾವುದೇ ಮಂತ್ರಿ ಮಹೋದಯರುಗಳು ಭೇಟಿ ನೀಡಿಲ್ಲ.
ಯಡಿಯೂರಪ್ಪನವರು ಒಂದು ಹೆಜ್ಜೆ ಮುಂದೆ ಹೋಗಿ ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನೀರು ಹರಿಸುತೇನೆಂಬ ರಾಜಕೀಯ ಕುಚೋದ್ಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ರಾಜ್ಯದ 28 ಸಂಸದರು ಅದರಲೂ 25 ಬಿಜೆಪಿ ಸಂಸದರು ಹಾಗೂ ಮುಖ್ಯ ಮಂತ್ರಿ ಯಡಿಯೂರಪ್ಪನವರು ಕೇಂದ್ರದ ಮುಂದೆ ಇನ್ನೂ ಒತ್ತಾಯಪಡಿಸದೇ ತಮ್ಮರಾಜಕೀಯ ಹೊಣೆಗೇಡಿತನ ಹಾಗೂ ಸೋಮಾರಿತನವನ್ನು ಮೆರೆಯುತ್ತಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರವು ಈ ಬಗ್ಗೆ ಕೂಡಲೇ ಅಧಿಸೂಚನೆಯನ್ನು ಹೊರಡಿಸುವುದರ ಮೂಲಕ ಉತ್ತರ ಕರ್ನಾಟಕದ ಈ ಭಾಗದ ರೈತರುಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಮ್ ಆದ್ಮ ಪಕ್ಷವು ಒತ್ತಾಯಿಸುತ್ತದೆ.
ಪತ್ರಿಕಾ ಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ವಿ.ಸದಂ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಮುಖಂಡರಾದ ಬಸವರಾಜ್ ಮುದಿಗೌಡರ್, ಜ್ಯೋತಿ ಕುಮಾರ್ ಭಾಗವಹಿಸಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications