ಕರ್ನಾಟಕ: ಕ್ಷಯರೋಗಿಗಳಲ್ಲಿ ಶೇ.8ರಷ್ಟು ಮಂದಿ ಎಚ್ಐವಿ ಪೀಡಿತರು
ಬೆಂಗಳೂರು, ಏಪ್ರಿಲ್ 06: ಕ್ಷಯ ರೋಗ(ಟಿಬಿ) ಹಾಗೂ ಎಚ್ಐವಿ ಎರಡೂ ಇರುವ ರೋಗಿಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.
ಇಂಡಿಯಾ ಟ್ಯೂಬರ್ ಕಿಲಾಸಿಸ್ 2018 ಸಮೀಕ್ಷೆ ಪ್ರಕಾರ ಶೇ.8ರಷ್ಟು ಮಂದಿ ಕ್ಷಯರೋಗಿಗಳು ಎಚ್ಐವಿ ರೋಗದಿಂದ ಬಳಲುತ್ತಿದ್ದಾರೆ. ಕ್ಷಯ ರೋಗವನ್ನು ಪ್ರಾರಂಭದಲ್ಲಿಯೇ ತಿಳಿದುಬಂದರೆ ತಡೆಗಟ್ಟಬಹುದಾಗಿದೆ. ಆದರೆ ಅಂತಿಮ ಹಂತದಲ್ಲಿ ತಿಳಿದುಬರುತ್ತಿರುವ ಕಾರಣ ರೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕ್ಷಯ ಹಾಗೂ ಎಚ್ಐವಿ ಎರಡೂ ಇರುವ ವ್ಯಕ್ತಿಗಳು: ನಾಗಾಲ್ಯಾಂಡ್ ನಲ್ಲಿ ಶೇ. 14, ಆಂಧ್ರಪ್ರದೇಶದಲ್ಲಿ ಶೇ.10, ಒಟ್ಟಾರೆ ಕ್ಷಯ ರೋಗಿಗಳನ್ನು ಗಮನಿಸುವುದಾದರೆ ಕರ್ನಾಟಕವು 10ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 81,187 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 3,11,041 ರೋಗಿಗಳು ಇದ್ದಾರೆ.

ಕರ್ನಾಟಕದಲ್ಲಿ ಬಾಗಲಕೋಟೆಗೆ ಮೊದಲ ಸ್ಥಾನ: ಕರ್ನಾಟಕದಲ್ಲಿರುವ ಒಟ್ಟು ಕ್ಷಯ ರೋಗಿಗಳ ಪೈಕಿ ಶೇ.30ರಷ್ಟು ಮಂದಿ ಬಾಗಲಕೋಟೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಶೇ.15, ಧಾರವಾಡ, ರಾಯಚೂರು, ಉಡುಪಿಯಲ್ಲಿ ಶೇ. 11ರಷ್ಟು ಕ್ಷಯರೋಗಿಗಳು ಎಚ್ಐವಿಯಿಂದ ಬಳಲುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟ್ಯುಬರ್ ಕಿಲಾಸಿಸ್ ಪ್ರೋಗ್ರಾಮ್ನ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಅವರು ಹೇಳುವ ಪ್ರಕಾರ, ರೋಗದ ಗುಣಲಕ್ಷಗಳು ಕಂಡು ಬಂದ ತಕ್ಷಣವೇ ಸರಿಯಾದ ಚಿಕಿತ್ಸೆ ದೊರೆತರೆ ರೋಗವನ್ನು ಕಡಿಮೆ ಮಾಡಬಹುದು ಹಾಗೂ ಇನ್ಫೆಕ್ಷನ್ ತಡೆಗಟ್ಟಬಹುದು.
ಆದರೆ ಎಚ್ಐವಿ ಪೀಡಿತರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಲು ಆಸ್ಪತ್ರೆಗೆ ತೆರಳಿದಾಗ ಕ್ಷಯ ರೋಗವಿರುವ ಕುರಿತು ಮಾಹಿತಿ ತಿಳಿಯುತ್ತಿದೆ ಹಾಗಾಗಿ ಸಮರ್ಪಕ ಚಿಕಿತ್ಸೆ ನೀಡಲು ಸಾದ್ಯವಾಗುತ್ತಿಲ್ಲ ಎಂದಿದ್ದಾರೆ.
ರಾಜ್ಯಗಳು ಟಿಬಿ ರೋಗಿಗಳು ಎಚ್ಐವಿ ಪೀಡಿತ ಪ್ರಕರಣಗಳು
ಉತ್ತರ ಪ್ರದೇಶ 3,11,041 ಶೇ.1
ಮಹಾರಾಷ್ಟ್ರ 1,92,458 ಶೇ.5
ಗುಜರಾತ್ 1,49,061 ಶೇ.3
ಮಧ್ಯಪ್ರದೇಶ 1,34,333 ಶೇ.1
ರಾಜಸ್ತಾನ 1,05,953 ಶೇ.೦
ಪಶ್ಚಿಮ ಬಂಗಾಳ 97,297 ಶೇ.1
ಬಿಹಾರ 96,489 ಶೇ.1
ತಮಿಳುನಾಡು 93,327 ಶೇ.5
ಆಂಧ್ರಪ್ರದೇಶ 81,118 ಶೇ.10
ಕರ್ನಾಟಕ 81,187 ಶೇ.8
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications