KSRP ಆಯ್ಕೆ ವೇಳೆ ಹೃದಯಾಘಾತದಿಂದ ಯುವಕ ಸಾವು
ಕಲಬುರಗಿ, ಜನವರಿ 31 : ಕೆಎಸ್ ಆರ್ ಪಿ ಆಯ್ಕೆ ಪ್ರಕ್ರಿಯೆಗೆ ಬಂದ ಯುವಕ ವಿಕಾಸ್ ಗಾಯಕ್ ವಾಡ್ ಮೃತಪಟ್ಟಿರುವ ಘಟನೆ ಬುಧವಾರ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಪೆರೇಡ್ ಮೈದಾನಲ್ಲಿ ಬುಧವಾರ ಕೆಎಸ್ ಆರ್ ಪಿ ಆಯ್ಕೆ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಬೀದರ್ ಜಿಲ್ಲೆಯ ಬಸವ ಕಲ್ಯಾಣದ ವಿಕಾಸ್ ಗಾಯಕ ವಾಡ ಕೂಡ ಪಾಲ್ಗೊಂಡಿದ್ದರು. ರನ್ನಿಂಗ್ ಮುಗಿಸಿ ದೈಹಿಕ ಪರೀಕ್ಷೆ ವೇಳೆ ಕುಸಿದುಬಿದ್ದಿದ್ದಾರೆ. ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಕಲಬುರಗಿ ಈಶಾನ್ಯ ವಲಯದ ಐಜಿಪಿ ಮುರುಗನ್ ಹಾಗೂ ಎಸ್ ಪಿ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಈಶಾನ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಕಾಸ್ ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications