ಅಲ್ ಖೈದಾ ಸಂಘಟನೆಯ ಹಮ್ಜಾ ಬಿನ್ ಲಾಡೆನ್ ಕಪ್ಪು ಪಟ್ಟಿಗೆ
ವಿಶ್ವಸಂಸ್ಥೆಯ ಭದ್ರತಾ ಸಭೆಯು ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ನನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆತನ ಮೇಲೆ ನಿರ್ಬಂಧಗಳನ್ನು ಹೇರಿದೆ. ಪ್ರವಾಸ ನಿಷೇಧ, ಆಸ್ತಿ ಮೇಲೆ ದಿಗ್ಬಂಧನಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ತಡೆಯೊಡ್ಡಿದೆ. ಅಲ್ ಖೈದಾ ಉಗ್ರ ಸಂಘಟನೆಯ ಸದ್ಯದ ನಾಯಕ ಅಲ್-ಜವಾಹಿರಿಯ ಸಂಭವನೀಯ ಉತ್ತರಾಧಿಕಾರಿ ಎಂಬಂತೆ ನೋಡಲಾಗುತ್ತಿದೆ.
ವಿಶ್ವ ಸಂಸ್ಥೆಯ ಭದ್ರತಾ ಸಭೆ ಐಎಸ್ ಐಎಸ್ ಹಾಗೂ ಅಲ್ ಖೈದಾದ ದಿಗ್ಬಂಧನ ಸಮಿತಿಯು ಗುರುವಾರ ಇಪ್ಪತ್ತೊಂಬತ್ತು ವರ್ಷದ ಹಮ್ಜಾನ ಮೇಲೆ ಈ ಘೋಷಣೆ ಮಾಡಿದೆ. ಆತನ ಬಗ್ಗೆ ಮಾಹಿತಿ ನೀಡುವವರಿಗೆ ಅಮೆರಿಕದ ಸರಕಾರವು ಏಳು ಕೋಟಿ ರುಪಾಯಿ (ಒಂದು ಮಿಲಿಯನ್ ಡಾಲರ್) ಬಹುಮಾನ ಘೋಷಣೆ ಮಾಡಿದೆ.
ಇನ್ನು ಸೌದಿ ಅರೇಬಿಯಾವು ಹಮ್ಜಾ ಲಾಡೆನ್ ನ ಪೌರತ್ವವನ್ನು ಶುಕ್ರವಾರ ರದ್ದುಗೊಳಿಸಿದೆ. ಭದ್ರತಾ ಸಭೆಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಸೌದಿ ಅರೇಬಿಯಾದಲ್ಲಿ ಹುಟ್ಟಿದ ಹಮ್ಜಾ ಬಿನ್ ಲಾಡೆನ್ ಅನ್ನು ಅಲ್ ಖೈದಾದ ಅಧಿಕೃತ ಸದಸ್ಯ ಎಂದು ಅಲ್-ಜವಾಹಿರಿ ಘೋಷಣೆ ಮಾಡಿದ್ದಾನೆ ಎಂದು ತಿಳಿಸಲಾಗಿದೆ.

ಅಲ್ ಖೈದಾದ ಅನುಯಾಯಿಗಳು ದಾಳಿ ಸಂಘಟಿಸಬೇಕು ಎಂದು ಹಮ್ಜಾ ಕರೆ ನೀಡಿದ್ದಾರೆ. ಆತನು ಅಲ್-ಜವಾಹಿರಿಯ ಸಂಭವನೀಯ ಉತ್ತರಾಧಿಕಾರಿ ಎಂದು ಸಭೆಯ ಮೂಲಕ ತಿಳಿಸಲಾಗಿದೆ. ಹಮ್ಜಾಗೆ ಸೇರಿದ ಎಲ್ಲ ಆಸ್ತಿಯ ಮೇಲೆ ದಿಗ್ಬಂಧನ ಹೇರಲು ಸೂಚಿಸಲಾಗಿದೆ. ಆತನಿಗೆ ಯಾವುದೇ ಆರ್ಥಿಕ ಮೂಲ ಮತ್ತು ಇತರ ಅಸ್ತಿ ದೊರೆಯದಂತೆ ತಡೆ ಹಾಕಬೇಕು ಎಂದು ಸೂಚನೆ ನೀಡಲಾಗಿದೆ.
ಆತನ ಮೇಲೆ ಪ್ರವಾಸ ನಿರ್ಬಂಧಗಳನ್ನು ಹೇರಲಾಗಿದೆ. ಯಾವುದೇ ದೇಶಕ್ಕೆ ಪ್ರವೇಶ ಅಥವಾ ಅ ದೇಶದ ಮೂಲಕ ತೆರಳುವುದಕ್ಕೆ ನಿಷೇಧವಿದೆ. ಪ್ರತ್ಯಕ್ಶವಾಗಿಯೋ ಅಥವಾ ಪರೋಕ್ಷವಾಗಿಯೋ ತಮ್ಮ ರಾಷ್ಟ್ರಗಳಿಂದ ಯಾವುದೇ ಶಸ್ತ್ರಾಸ್ತ್ರ ಪೂರೈಕೆ ಮಾಡುವಂತಿಲ್ಲ. ಅಷ್ಟೇ ಅಲ್ಲ, ಯಾವುದೆ ದೇಶದ ವಿಮಾನ, ಶಸ್ತ್ರಾಸ್ತ್ರ, ಬಿಡಿ ಭಾಗಗಳು, ತಾಂತ್ರಿಕ ಸಲಗೆ, ನೆರವು, ಸೇನೆ ಚಟುವಟಿಕೆ ತರಬೇತಿಯನ್ನು ಕೂಡ ಒದಗಿಸುವಂತಿಲ್ಲ.
ಎರಡು ವರ್ಷದ ಹಿಂದೆ ಅಮೆರಿಕದ ಇಲಾಖೆಯು ಹಮ್ಜಾ ಬಿನ್ ಲಾಡೆನ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಅಮೆರಿಕದಲ್ಲಿ ಆತನ ಹೆಸರಲ್ಲಿರುವ, ಆತನಿಗೆ ಸಂಬಂಧಿಸಿದ ವ್ಯಕ್ತಿಗಳ ಬಳಿ ಇರುವ ಆಸ್ತಿಗಳ ಮೇಲೆ ದಿಗ್ಬಂಧನ ಹೇರಿತ್ತು. ಅಮೆರಿಕದ ನಾಗರಿಕರು ಹಮ್ಜಾನ ಜತೆ ಯಾವುದೇ ವ್ಯವಹಾರ ನಡೆಸಬಾರದು ಎಂಬ ನಿಷೇಧ ಕೂಡ ಹೇರಿತ್ತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications