ಟ್ರಂಪ್ ವಲಸೆ ನೀತಿ : 3 ಲಕ್ಷ ಭಾರತೀಯ ಅಮೆರಿಕನ್ನರಿಗೆ ಕುತ್ತು
ವಾಷಿಂಗ್ಟನ್, ಫೆಬ್ರವರಿ 23: ಅಮೆರಿಕದಲ್ಲಿ ಅಕ್ರಮ ವಲಸೆಗಾರರನ್ನು ಗಡಿಪಾರು ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದು ತಿಳಿದಿರಬಹುದು, ಟ್ರಂಪ್ ಅವರ ವಲಸೆ ನೀತಿಯ ಪರಿಣಾಮವಾಗಿ ಸುಮಾರು 3 ಲಕ್ಷ ಭಾರತೀಯ ಅಮೆರಿಕನ್ನರು ಸೇರಿ 11 ಮಿಲಿಯನ್ ಮಂದಿ ಗಂಟು ಮೂಟೆ ಕಟ್ಟಬೇಕಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆಯ ಬಗ್ಗೆ ಪ್ರಾಥಮಿಕ ರೂಪುರೇಷೆ ಸಿದ್ದಗೊಳಿಸಲು ಟ್ರಂಪ್ ಸೂಚಿಸಿದ್ದಾರೆ., ವಲಸೆ ಕಾನೂನು ಜಾರಿಗೊಳಿಸುವ ಕುರಿತಂತೆ ಹೊಸ ಮಾರ್ಗದರ್ಶಿ ಸೂತ್ರವನ್ನು ಜಾರಿಗೊಳಿಸಲಾಗಿದೆ. ಇಲಾಖೆಯು ಇನ್ನು ಮುಂದೆ ಗಡಿಪಾರು ಮಾಡಬಹುದಾದ ವಿದೇಶಿಯರನ್ನು ವರ್ಗ ಅಥವಾ ಗುಂಪುಗಳ ಆಧಾರದಲ್ಲಿ ವಿನಾಯಿತಿಗೆ ಪರಿಗಣಿಸುವುದಿಲ್ಲ ಎಂದು ಭದ್ರತಾ ಇಲಾಖೆ ಕಳುಹಿಸಿರುವ ಕಡ್ಡಾಯ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

ವಲಸೆ ನೀತಿ ಉಲ್ಲಂಘಿಸಿದ್ದಾನೆ ಎಂದು ಓರ್ವ ವಿದೇಶಿ ವ್ಯಕ್ತಿಯ ಬಗ್ಗೆ ವಲಸೆ ಅಧಿಕಾರಿಗೆ ನಂಬಲರ್ಹ ಪುರಾವೆ ಸಿಕ್ಕಿದರೆ ಆತನನ್ನು ವಶಕ್ಕೆ ಪಡೆಯಲು ಅಥವಾ ಬಂಧಿಸಲು ಅಧಿಕಾರಿಗೆ ಪೂರ್ಣ ಅಧಿಕಾರವಿದೆ ಎಂದು ಜ್ಞಾಪನ ಪತ್ರ(ಮೆಮೊ)ದಲ್ಲಿ ತಿಳಿಸಲಾಗಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಕುರಿತಂತೆ ದೇಶೀಯ ಭದ್ರತಾ ಇಲಾಖೆ ಎರಡು ಕಡ್ಡಾಯ ಮೆಮೊಗಳನ್ನು ಜಾರಿಗೊಳಿಸಿದ್ದು ಇದು ಇತರ ವಿಷಯಗಳ ಜೊತೆಗೆ, ಗಡಿಪಾರು ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.
ವಶಕ್ಕೆ ಪಡೆದುಕೊಳ್ಳಲಾದ ಅಕ್ರಮ ವಿದೇಶಿಯರು ಮುಂದೆ ಮತ್ತೊಮ್ಮೆ ಅಕ್ರಮ ಪ್ರವೇಶಿಸುವ ಅಪಾಯ ಇಲ್ಲ ಎಂದು ಖಚಿತವಾದರೆ ಅವರನ್ನು ಅವರು ಎಲ್ಲಿಂದ ಬಂದರೋ ಅದೇ ರಾಷ್ಟ್ರಕ್ಕೆ ವಾಪಾಸು ಕಳಿಸುವ ಮೂಲಕ , ಸರಕಾರದ ನ್ಯಾಯತೀರ್ಮಾನ ಸಂಪನ್ಮೂಲವನ್ನು ಇತರ ಪ್ರಮುಖ ವಿದೇಶಿಯರತ್ತ ಗಮನ ಹರಿಸಲು ಸಾಧ್ಯವಾಗಿಸಬೇಕು ಎಂದು ಮೆಮೊದಲ್ಲಿ ತಿಳಿಸಲಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications