ಚಿತ್ರಗಳಲ್ಲಿ: ಅಫ್ಘಾನ್ ನಿರಾಶ್ರಿತರ ದೈನ್ಯತೆ, ಭಾರತದ ನೆರವು
ಬೆಂಗಳೂರು, ಮೇ.6: ಅಫ್ಘಾನಿಸ್ತಾನದ ಈಶಾನ್ಯ ಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತದಿಂದ ನಿರಾಶ್ರಿತರಾದವರ ನೆರವು ಹಲವು ರಾಷ್ಟ್ರಗಳು ಧಾವಿಸುತ್ತಿವೆ. ಮೃತರ ಸಂಖ್ಯೆ 2700ಕ್ಕೂ ಅಧಿಕವಾಗಿದ್ದರೆ, ಹಲವಾರು ಮಂದಿ ಕೆಸರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಸುಮಾರು 300 ಹಳ್ಳಿಗಳ 4 ಸಾವಿರಕ್ಕೂ ಅಧಿಕ ಮಂದಿಗೆ ರಕ್ಷಣೆ ನೀಡುವಲ್ಲಿ ವಿಶ್ವಸಂಸ್ಥೆ ಅಧಿಕಾರಿಗಳು ನಿರತರಾಗಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ. ಭಾರತದ ಸರ್ಕಾರ ಕೂಡಾ ಸಹಾಯ ಹಸ್ತ ಚಾಚಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅವರು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯಿ ಅವರಿಗೆ ಕರೆ ಮಾಡಿ 1 ಮಿಲಿಯನ್ ಯುಎಸ್ ಡಾಲರ್ ನೆರವು ಘೋಷಿಸಿದ್ದಾರೆ.
ಉಳಿದಂತೆ, ವಿಮಾನ ನಿಲ್ದಾಣದಲ್ಲೇ ಫುಟ್ಬಾಲ್ ಆಡಿದ ಜಾನ್ ಕೆರಿ, ವೋಗ್ ಎಡಿಟರ್ ಗೆ ಆತ್ಮೀಯ ಅಪ್ಪುಗೆ ನೀಡಿದ ಅಮೆರಿಕದ ಪ್ರಥಮ ಮಹಿಳೆ, ನವದೆಹಲಿಯಲ್ಲಿ ಮಳೆಯ ತಂಪು, ಮುಂಬೈನಲ್ಲಿ ಸಂತಸ್ತರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಅಜ್ಮೇರ್ ನಲ್ಲಿ ಪ್ರಾರ್ಥನೆ, ಥೈಲ್ಯಾಂಡ್ ನಲ್ಲಿ ಭೂಕಂಪ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಅಫ್ಘಾನ್ ನಿರಾಶ್ರಿತರ ದೈನ್ಯತೆ, ಭಾರತದ ನೆರವು
ಅಫ್ಘಾನಿಸ್ತಾನದ ಈಶಾನ್ಯ ಭಾಗ(Badakhshan)ದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತದಿಂದ ನಿರಾಶ್ರಿತರಾದವರ ನೆರವು ಹಲವು ರಾಷ್ಟ್ರಗಳು ಧಾವಿಸುತ್ತಿವೆ. ಮೃತರ ಸಂಖ್ಯೆ 2700ಕ್ಕೂ ಅಧಿಕವಾಗಿದ್ದರೆ, ಹಲವಾರು ಮಂದಿ ಕೆಸರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ರಕ್ಷಣೆ ನೀಡುವಲ್ಲಿ ವಿಶ್ವಸಂಸ್ಥೆ ನಿರತ
ಸುಮಾರು 300 ಹಳ್ಳಿಗಳ 4 ಸಾವಿರಕ್ಕೂ ಅಧಿಕ ಮಂದಿಗೆ ರಕ್ಷಣೆ ನೀಡುವಲ್ಲಿ ವಿಶ್ವಸಂಸ್ಥೆ ಅಧಿಕಾರಿಗಳು ನಿರತರಾಗಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ.

ಥೈಲ್ಯಾಂಡ್ ನಲ್ಲಿ ಭೂಕಂಪ
ಥೈಲ್ಯಾಂಡ್ phn ಜಿಲ್ಲೆಯ ಚಿಯಾಂಗ್ ರೈ ಪ್ರಾಂತ್ಯದಲ್ಲಿ ಭೂಕಂಪದ ನಂತರ ಹಾಳಾಗಿರುವ ರಸ್ತೆ ವೀಕ್ಷಿಸುತ್ತಿರುವ ವ್ಯಕ್ತಿ AP/PTI

ವಿಮಾನ ನಿಲ್ದಾಣದಲ್ಲೇ ಫುಟ್ಬಾಲ್
SAL ದ್ವೀಪ ವಿಮಾನ ನಿಲ್ದಾಣದಲ್ಲೇ ಫುಟ್ಬಾಲ್ ಆಡಿದ ಯುಎಸ್ ಕಾರ್ಯದರ್ಶಿ ಜಾನ್ ಕೆರಿ, ವಿಮಾನ ಇಂಧನ ತುಂಬಿಸಿಕೊಂಡ ನಂತರ ವಾಷಿಂಗ್ಟನ್ ಗೆ ತೆರಳಿದರು. AP/PTI

ನವದೆಹಲಿಯಲ್ಲಿ ಮಳೆಯ ತಂಪು
ನವದೆಹಲಿಯಲ್ಲಿ ಮಳೆಯ ತಂಪು ವಾತಾವರಣದಲ್ಲಿ ಇಂಡಿಯಾ ಗೇಟ್ ಕಾಣಿಸಿದ್ದು ಹೀಗೆ PTI Photo by Manvender Vashist












Click it and Unblock the Notifications