ಕ್ವೆಟ್ಟಾದಲ್ಲಿ ಭೀಕರ ಹತ್ಯಾಕಾಂಡ : 57 ಕೆಡೆಟ್ಗಳ ಮಾರಣಹೋಮ
ಇನ್ನೆಷ್ಟು ಇಂಥ ಹತ್ಯಾಕಾಂಡ ನೋಡಬೇಕು, ಇನ್ನೆಷ್ಟು ವಿಧವೆಯರು ಹುಟ್ಟಿಕೊಳ್ಳಬೇಕು, ಇನ್ನೆಷ್ಟು ತಾಯಂದಿರು ಕಣ್ಣೀರು ಹಾಕಬೇಕು, ಇನ್ನೆಷ್ಟು ಅಮಾಯಕರು ತಬ್ಬಲಿಯಾಗಬೇಕು, ಇನ್ನೆಷ್ಟು ಜನರು ಕಣ್ಣೀರಿನ ಕೋಡಿ ಹರಿಸಬೇಕು?
ಕ್ವೆಟ್ಟಾ (ಪಾಕಿಸ್ತಾನ), ಅಕ್ಟೋಬರ್ 25 : ಪಾಕಿಸ್ತಾನದ ಕ್ವೆಟ್ಟಾದಲ್ಲಿ ಅಕ್ಟೋಬರ್ 24ರ ಮಧ್ಯರಾತ್ರಿ ಭೀಕರ ಹತ್ಯಾಕಾಂಡ ನಡೆದಿದ್ದು, ಪೊಲೀಸ್ ತರಬೇತಿ ಕಾಲೇಜಿಗೆ ನುಗ್ಗಿದ ಮೂವರು ಉಗ್ರರು ಕನಿಷ್ಠ 57 ಕೆಡೆಟ್ ಗಳನ್ನು ಹತ್ಯೆಗೈದಿದ್ದಾರೆ.
ಈ ದುರ್ಘಟನೆ ನಡೆಯುತ್ತಿದ್ದಂತೆ, ಇನ್ನೆಷ್ಟು ಇಂಥ ಹತ್ಯಾಕಾಂಡ ನೋಡಬೇಕು, ಇನ್ನೆಷ್ಟು ವಿಧವೆಯರು ಹುಟ್ಟಿಕೊಳ್ಳಬೇಕು, ಇನ್ನೆಷ್ಟು ತಾಯಂದಿರು ಕಣ್ಣೀರು ಹಾಕಬೇಕು, ಇನ್ನೆಷ್ಟು ಅಮಾಯಕರು ತಬ್ಬಲಿಯಾಗಬೇಕು, ಇನ್ನೆಷ್ಟು ಜನರು ಕಣ್ಣೀರಿನ ಕೋಡಿ ಹರಿಸಬೇಕು ಎಂದು ಟ್ವಿಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಕ್ವೆಟ್ಟಾದಲ್ಲಿ ಈ ವರ್ಷ ಉಗ್ರರ ದಾಳಿಯಲ್ಲಿ ಸತ್ತವರು 227 ಮಂದಿ]

ಕೆಲ ವರದಿಗಳ ಪ್ರಕಾರ, ಉಗ್ರರು ಸತತವಾಗಿ ಅಫಘಾನಿಸ್ತಾನದಲ್ಲಿರುವ ತಮ್ಮ ನಾಯಕರ ಜೊತೆ ಸಂಪರ್ಕದಲ್ಲಿದ್ದರು. ಮೂವರು ಭಯೋತ್ಪಾದಕರು ಆತ್ಮಹತ್ಯಾ ಸಾಧನವನ್ನು ಅಳವಡಿಸಿಕೊಂಡಿದ್ದರು. ಈ ದಾಳಿಯಲ್ಲಿ ಕನಿಷ್ಠ 97 ಕೆಡೆಟ್ ಗಳು ಗಾಯಗೊಂಡಿದ್ದಾರೆ.
ಸುಮಾರು 600 ಕೆಡೆಟ್ ಗಳಿರುವ ಪೊಲೀಸ್ ಟ್ರೇನಿಂಗ್ ಕಾಲೇಜನ್ನು ಸೋಮವಾರ ರಾತ್ರಿ 9.30ರ ಸುಮಾರಿಗೆ ಉಗ್ರರು ಹೊಕ್ಕಿದ್ದಾರೆ. ಮುಂಭಾಗದ ಗೇಟ್ ನಿಂದ ಇಬ್ಬರು ಪ್ರವೇಶಿಸಿದ್ದರೆ, ಒಬ್ಬ ಹಿಂಬದಿಯ ಗೇಟ್ ಜಿಗಿದು ಕಾಲೇಜನ್ನು ಪ್ರವೇಶಿಸಿದ್ದಾನೆ. ಮೊದಲಿಗೆ ಭದ್ರತಾ ಸಿಬ್ಬಂದಿಯನ್ನು ಕೊಂದು ನಂತರ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. [ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಸ್ಫೋಟ, 93 ಸಾವು]

ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಸಂಭವಿಸಿದೆ. ಉಗ್ರ ಬಳಿ ಎಕೆ 47 ಮತ್ತು ಗ್ರೆನೇಡುಗಳು ಇದ್ದವು. ಮೂರನೇಯವನನ್ನು ಭದ್ರತಾ ಸಿಬ್ಬಂದಿಗಳು ಗುಂಡಿಟ್ಟು ಕೊಂದಿದ್ದಾರೆ. ಈ ಕಾರ್ಯಾಚರಣೆ ನಡೆಸಲು ಭದ್ರತಾ ಸಿಬ್ಬಂದಿಗೆ ನಾಲ್ಕು ಗಂಟೆ ತಗುಲಿದೆ ಎಂದು ದಿ ಡಾನ್ ವರದಿ ಮಾಡಿದೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications