ಸನ್ ಲೈಟ್ ಅಲ್ಲ, ಸಿನ್ ಲೈಟ್: ಜರ್ಮನಿಯಲ್ಲೊಬ್ಬ ಕೃತಕ ಸೂರ್ಯ!
ಜರ್ಮನಿಯ ಕೃತಕ ಸೂರ್ಯನ ಹೊಸ ಪ್ರಯೋಗವನ್ನು ಸಿನ್ ಲೈಟ್ ಎಂದು ಕರೆಯಲಾಗಿದ್ದು, ಜರ್ಮನ್ ಏರೋಸ್ಪೇಸ್ ಸೆಂಟರ್ (ಡಿಎಲ್ ಆರ್) ವಿಜ್ಞಾನಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ.
ಯುಲಿಚ್ (ಜರ್ಮನಿ), ಮೇ 09: ಜರ್ಮನಿಯ ಯುಲಿಚ್ ಎಂಬಲ್ಲಿ ಕೃತಕ ಸೂರ್ಯನೊಬ್ಬ ತಲೆಯೆತ್ತಿದ್ದಾನೆ! ಮಾರ್ಚ್ 2017 ರಲ್ಲಿ ಪ್ರಪ್ರಥಮ ಬಾರಿಗೆ ಬೆಳಕನ್ನು ಚೆಲ್ಲಿದ ಈ ಸೂರ್ಯನನ್ನು 149 ಇಂಡಸ್ಟ್ರೀಯಲ್ ಗ್ರೇಡ್ ಫಿಲ್ಮ್ ಪ್ರಾಜೆಕ್ಟರ್ ಬೆಳಕಿನಿಂದ ನಿರ್ಮಿಸಲಾಗಿದೆ.
ಪರಿಸರ ಸ್ನೇಹಿಯಾದ ಪರ್ಯಾಯ ಶಕ್ತಿ ಮೂಲದ ಹುಡುಕಾಟದ ಪ್ರತಿಫಲವೇ ಈ ಕೃತಕ ಸೂರ್ಯ!
ಈ ಹೊಸ ಪ್ರಯೋಗವನ್ನು ಸಿನ್ ಲೈಟ್ ಎಂದು ಕರೆಯಲಾಗಿದ್ದು, ಜರ್ಮನ್ ಏರೋಸ್ಪೇಸ್ ಸೆಂಟರ್ (ಡಿಎಲ್ ಆರ್) ವಿಜ್ಞಾನಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಇದು ಸಾಮಾನ್ಯ ಬಲ್ಬ್ ವೊಂದು ನೀಡುವ ಸರಾಸರಿ ಬೆಳಕಿನ 4000 ಪಟ್ಟು ಹೆಚ್ಚು ಬೆಳಕನ್ನು ನೀಡಬಲ್ಲದು![ಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕು]

ಈ ಸೂರ್ಯನ ಶಾಖ ಗರಿಷ್ಠ 3000 ಡಿಗ್ರಿ ಸೆಲ್ಷಿಯಸ್ ಅನ್ನೂ ತಲುಪಬಲ್ಲದು. ಸಿನ್ ಲೈಟ್ ಎಷ್ಟು ಕಡಿಮೆ ಪ್ರಮಾಣದ ವಿದ್ಯುತ್ ಬಳಸುತ್ತದೆ ಎಂದರೆ ನಾಲ್ಕು ವ್ಯಕ್ತಿಗಳು ತಮ್ಮ ನಿತ್ಯದ ಉಪಯೋಗಕ್ಕೆ ಬಳಸುವ ವಿದ್ಯುತ್ ಅಷ್ಟನ್ನೇ ಇದು ಬಳಸಿಕೊಳ್ಳುತ್ತದೆ! ಇದರಲ್ಲಿ ಮೂರು ವಿಕಿರಣ ಕೋಣೆಗಳಿವೆ. ಈ ಕೋಣೆಗಳು 380 ಕಿ.ವ್ಯಾ. ನಷ್ಟು ಸೌರ ವಿಕಿರಣಗಳನ್ನು ಉತ್ಪತ್ತಿ ಮಾಡಬಲ್ಲದು.[ನಾಸಾ ಪ್ರಕಟಿಸಲಿರುವ ಹೊಸ ಆವಿಷ್ಕಾರಕ್ಕೆ ಕಾದು ಕುಳಿತಿದೆ ಜಗತ್ತು]
ಸಿನ್ ಲೈಟ್ ಅನ್ನು ಅಗತ್ಯಕ್ಕೆ ತಕ್ಕಂತೆ ಸಣ್ಣ ಮತ್ತು ಬೃಹತ್ ಉಪಯೋಗಕ್ಕೆ ಬಳಸಬಹುದಾಗಿದೆ. ಮಧ್ಯ ಯುರೋಪಿನಲ್ಲಿ ಸೂರ್ಯ ಕಿರಣದ ಅಭಾವ ಹೆಚ್ಚಿರುವುದರಿಂದ ಈ ಕೃತಕ ಸೂರ್ಯ ಹೆಚ್ಚು ಉಪಯೋಗಕ್ಕೆ ಬರುತ್ತಾನೆ!
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications