ಸಿಂಗಪುರದ ಬಜೆಟ್ಟಿನಲ್ಲಿ ನೌಕರರಿಗೆ ಭರ್ಜರಿ ಬೋನಸ್
ಸಿಂಗಪುರ, ಫೆಬ್ರವರಿ 20 : ಪ್ರತಿಯೊಬ್ಬ ನಾಯಕನೂ ತನ್ನ ರಾಜ್ಯ ಸಿಂಗಪುರದಂತೆ ಕಂಗೊಳಿಸಬೇಕು ಎಂದು ನಿರೀಕ್ಷಿಸುತ್ತಾನೆ. ಆದರೆ, ಅಭಿವೃದ್ಧಿಯ ವಿಷಯಕ್ಕೆ ಬಂದರೆ ಮಾತ್ರ ಸಿಂಗಪುರದ ಸಹವಾಸವೇ ಬೇಡ ಎಂದೂ ಹೇಳುತ್ತಾನೆ.
ಆದರೆ, ಭಾರತದಲ್ಲಿಯ ಪ್ರತಿಯೊಬ್ಬ ನೌಕರನೂ ತಾನು ಸಿಂಗಪುರದ ಪ್ರಜೆಯಂತಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ವಾ ಎಂದು ಇಂದು ಅಂದುಕೊಂಡರೆ ಅಚ್ಚರಿಯಿಲ್ಲ. ಏಕೆಂದರೆ, ಅಂತಹದೊಂದು ಸಿಹಿ ಸುದ್ದಿಯನ್ನು ಸಿಂಗಪುರ ಸರಕಾರ ತನ್ನ ನೌಕರರಿಗೆ ನೀಡಿದೆ.
ಅದೇನೆಂದರೆ, 21 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನೌಕರನೂ ತನ್ನ ಸಂಬಳದ ಆಧಾರದ ಮೇಲೆ 100 ಸಿಂಗಪುರ ಡಾಲರ್ ನಿಂದ ಹಿಡಿದು 300 ಸಿಂಗಪುರ ಡಾಲರ್ ವರೆಗೆ ಬೋನಸ್ ಪಡೆಯಲಿದ್ದಾನೆ. ಇದನ್ನು ಸಿಂಗಪುರದ ಬಜೆಟ್ಟಿನಲ್ಲಿ ಘೋಷಿಸಲಾಗಿದೆ.

ಇದಕ್ಕಾಗಿ 700 ಸಿಂಗಪುರ ಡಾಲರ್ ಅನ್ನು ಬೋನಸ್ ನೀಡಲು ಸರಕಾರ ಅನುಮೋದನೆ ನೀಡಿದ್ದು, ವಾರ್ಷಿಕ 28 ಸಾವಿರ ಡಾಲರ್ ಗಿಂತ ಕಡಿಮೆ ಸಂಬಳವಿರುವವರಿಗೆ 300 ಡಾಲರ್, 28 ಸಾವಿರದಿಂದ 1 ಲಕ್ಷ ಡಾಲರ್ ಇರುವವರಿಗೆ 200 ಡಾಲರ್ ಮತ್ತು 1 ಲಕ್ಷ ಡಾಲರ್ ಸಂಬಳವಿರುವವರು ಅಥವಾ ಒಂದಕ್ಕಿಂತ ಹೆಚ್ಚು ಸ್ಥಿರಾಸ್ತಿ ಇರುವವರಿಗೆ 100 ಡಾಲರ್ ಬೋನಸ್ ದೊರೆಯಲಿದೆ.
2020ರವರೆಗೆ ದೇಶದ ಖರ್ಚುವೆಚ್ಚವನ್ನು ನೋಡಿಕೊಳ್ಳುವಷ್ಟು ಸಂಪನ್ಮೂಲಗಳು ಇದ್ದು, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವೆಚ್ಚ ಮಾಡಬೇಕು. ಅಲ್ಲದೆ, ಮುಂದಿನ 2021ರಿಂದ 2030ರ ದಶಕದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲ ಇರುವುದಿಲ್ಲ ಎಂದು ಸಿಂಗಪುರದ ಹಣಕಾಸು ಸಚಿವ ಹೆಂಗ್ ಅವರು ಬಜೆಟ್ಟಿನಲ್ಲಿ ಎಚ್ಚರಿಸಿದ್ದಾರೆ.
ಆರೋಗ್ಯ, ಮೂಲಭೂತ ಸೌಕರ್ಯ ಮತ್ತು ಭದ್ರತೆಗಾಗಿ ಹೆಚ್ಚಿನ ಬಂಡವಾಳ ವ್ಯಯಿಸಬೇಕಾಗಿರುವುದರಿಂದ, ದೇಶದ ಹಣಕಾಸು ಸ್ಥಿತಿಯನ್ನು ಮತ್ತಷ್ಟು ಸುಭದ್ರಗೊಳಿಸುವ ಅಗತ್ಯವಿದೆ ಮತ್ತು ಅನಿರೀಕ್ಷಿತ ಸಂದರ್ಭಗಳಿಗೆ ಸಿದ್ಧರಾಗಿರಬೇಕಾಗಿದೆ ಎಂದೂ ಹಣಕಾಸು ಸಚಿವ ಹೆಂಗ್ ಸ್ವೀ ಕೀಟ್ ಅವರು ತಿಳಿಸಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications