"ಪಪ್ಪಾ ದಯವಿಟ್ಟು ಮನೆಗೆ ಬಾ" : ಮಗಳ ಆರ್ತನಾದ
ಬೆಂಗಳೂರು, ಡಿ. 29: "ಪಪ್ಪಾ ಮನೆಗೆ ಬಾ. ನನಗೆ ನೀನು ಇನ್ನೂ ಕೆಲವು ಕಾಲ ಬೇಕು. ನನ್ನ ಪಪ್ಪನನ್ನು ವಾಪಸ್ ಕರೆತನ್ನಿ. ಪಪ್ಪಾ ದಯವಿಟ್ಟು ಮನೆಗೆ ಬಾ."
ಇದು ಕಾಣೆಯಾಗಿರುವ ಏರ್ಏಷಿಯಾ ವಿಮಾನದ ಪೈಲಟ್ನ ಮಗಳು ಆರ್ತನಾದ. ಪೈಲಟ್ನ 22 ವರ್ಷ ವಯಸ್ಸಿನ ಮಗಳು ಆಂಜೆಲಾ ಆಂಗ್ಗಿ ರಾನಾಸ್ಟಿಯಾನಿಸ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೃದಯದ ಬಡಿತವನ್ನು ಹಂಚಿಕೊಂಡ ಬಗೆಯಿದು.
ವಿಮಾನ ಸುರಕ್ಷಿತವಾಗಿ ವಾಪಸ್ ಬರುವ ಯಾವ ಭರವಸೆಯೂ ಇಲ್ಲ. ಆದರೂ, ನೂರಾರು ಪ್ರಯಾಣಿಕರೊಂದಿಗೆ ಪೈಲಟ್ ಇರ್ಯಾಂಟೊ ಕುಟುಂಬ ಕೂಡ ಪವಾಡ ಸಂಭವಿಸಿ ಎಲ್ಲರೂ ಜೀವಂತವಾಗಿ ಬರಲಿ ಎಂದು ದೇವರಲ್ಲಿ ಮೊರೆ ಇಡುತ್ತಿದೆ. [ಏರ್ ಏಷಿಯಾ ವಿಮಾನ ಜಾವಾ ಸಮುದ್ರದಲ್ಲಿ ಪತನ?]

ಇರ್ಯಾಂಟೊನ ಪಕ್ಕದ ಮನೆಯ ವ್ಯಕ್ತಿ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಇರ್ಯಾಂಟೊ ಉತ್ತಮ ವ್ಯಕ್ತಿ. ಆದ್ದರಿಂದಲೇ ನಾವೆಲ್ಲ ಅವರನ್ನು ಕಾಲೋನಿಯ ಮುಖ್ಯಸ್ಥನನ್ನಾಗಿ ಎರಡು ವರ್ಷಗಳಿಂದ ಆರಿಸಿಕೊಂಡಿದ್ದೆವು" ಎಂದು ತಿಳಿಸಿದ್ದಾರೆ.
ಎಫ್-16 ಜೆಟ್ ಚಲಾಯಿಸಿದ್ದ ಸಾಹಸಿಗ : ಇಡೀ ದೇಶಕ್ಕೆ ಗೊತ್ತು ಏರ್ಏಷಿಯಾ ವಿಮಾನ ಕಾಣೆಯಾಗಿರುವುದಕ್ಕೆ ಹವಾಮಾನದ ವೈಪರೀತ್ಯವೇ ಕಾರಣ ಎಂದು. ಪೈಲಟ್ನನ್ನು ಯಾರೂ ದೂಷಿಸುತ್ತಿಲ್ಲ. ಏಕೆಂದರೆ ಅವರೊಬ್ಬ ನುರಿತ ಪೈಲಟ್.
ವೃತ್ತಿಪರ ಪೈಲಟ್ ಆಗುವ ಮೊದಲು ಅವರು ದೇಶದ ವಾಯು ಸೇನೆಯಲ್ಲಿ ಕೆಲಸ ಮಾಡಿದ್ದವರು. ಎಫ್-16 ಜೆಟ್ ವಿಮಾನವನ್ನು ವಾಯುವೇಗದಲ್ಲಿ ನುಗ್ಗಿಸುತ್ತ ನಿಯಂತ್ರಿಸುತ್ತಿದ್ದ ಸಾಹಸಿಗರು. [162 ಪ್ರಯಾಣಿಕರಿದ್ದ ಏರ್ ಏಷಿಯಾ ವಿಮಾನ ನಾಪತ್ತೆ]
Angela Anggi Ranastianis, Putri Pilot Air Asia Mencurahkan Isi Hatinya http://t.co/Dpk2UAN9na #QZ8501 #PrayForAirAsia
— Kurio (@KurioID) December 29, 2014 ಸಮುದ್ರದ ಮಧ್ಯೆ ವಿಮಾನದ ಅವಶೇಷ ಪತ್ತೆ? : ಕಾಣೆಯಾಗಿರುವ ವಿಮಾನದ ಹುಡುಕಾಟದಲ್ಲಿ ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಕೈಗೂಡಿಸಿವೆ. ಆಸ್ಟ್ರೇಲಿಯಾದ ವಿಮಾನವೊಂದು ಸಮುದ್ರದಲ್ಲಿ ವಿಮಾನಕ್ಕೆ ಸಂಬಂಧಪಟ್ಟಂತಹ ವಸ್ತುವನ್ನು ಗುರುತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾಂಗ್ಕಾ ದ್ವೀಪದ ಸಮೀಪ ವಿಮಾನಕ್ಕೆ ಸಂಬಂಧಪಟ್ಟಂತಹ ಕೆಲವು ವಸ್ತುಗಳು ಕಂಡುಬಂದಿರುವುದಾಗಿ ಆಸ್ಟ್ರೇಲಿಯಾದ ಓರಿಯನ್ ವಿಮಾನ ತಿಳಿಸಿದೆ" ಎಂದು ಜಕಾರ್ತಾ ವಾಯು ಸೇನೆಯ ಬೇಸ್ ಕಮಾಂಡರ್ ಆಗಿರುವ ರೇರ್ ಅಡ್ಮಿರಲ್ ಡ್ವಿ ಪುಟ್ರಾಂಟೊ ಹೇಳಿದ್ದಾರೆ.
"ಈ ವಸ್ತುವು ಕಾಲಿಮಂತನ್ ಸಮೀಪದ ಪಾಂಗ್ಕಲನ್ ಬನ್ ದ್ವೀಪದ ನೈಋತ್ಯ ದಿಕ್ಕಿನಲ್ಲಿ 160 ಕಿ.ಮೀ. ದೂರದಲ್ಲಿ ಕಂಡುಬಂದಿದೆ. ಈ ಪ್ರದೇಶವು ವಿಮಾನ ಸಂಪರ್ಕ ಕಳೆದುಕೊಂಡ ಪ್ರದೇಶದಿಂದ 1,120 ಕಿ.ಮೀ. ದೂರದಲ್ಲಿದೆ" ಎಂದು ತಿಳಿಸಿದ್ದಾರೆ.
"ಆದರೆ, ಈ ವಸ್ತು ಕಾಣೆಯಾದ ಏರ್ಏಷಿಯಾದ ವಿಮಾನದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ" ಎಂದು ಪುಟ್ರಾಂಟೊ ಹೇಳಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications