ಮನೆಗೆಲಸದಾಕೆ ಬಗ್ಗೆ ಫಿಲಿಪೈನ್ಸ್ ಅಧ್ಯಕ್ಷರ ಹೇಳಿಕೆಗೆ ಭಾರೀ ವಿರೋಧ
ಮನಿಲಾ, ಡಿಸೆಂಬರ್ 30: ಫಿಲಿಪೈನ್ ಅಧ್ಯಕ್ಷ ರೊಡ್ರಿಗೋ ಡುಟೆರ್ಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ತನ್ನ ಹದಿಹರೆಯದಲ್ಲಿ ಮನೆಗೆಲಸದಾಕೆಯನ್ನು 'ಸ್ಪರ್ಶಿಸಿದ' ಬಗ್ಗೆ ಡುಟೆರ್ಟ್ ನೀಡಿದ ಹೇಳಿಕೆಗೆ ಮಹಿಳಾ ಹಕ್ಕು ಗುಂಪುಗಳು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷರ ವಿರುದ್ಧ ಅತ್ಯಾಚಾರ ಯತ್ನ ಹಾಗೂ ಲೈಂಗಿಕ ಶೋಷಣೆಗೆ ಪ್ರೋತ್ಸಾಹ ನೀಡಿದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಮಹಿಳೆಯರ ಬಗ್ಗೆ, ಅದರಲ್ಲೂ ಅತ್ಯಾಚಾರದ ಜೋಕ್ ಗಳು ಮತ್ತು ಹಾದರದ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಲ್ಲಿರುವ ಡುಟೆರ್ಟ್, ತಮ್ಮ ಹೊಸ ಹೇಳಿಕೆ ಮೂಲಕ ಮತ್ತೆ ಕಿಡಿ ಹೊತ್ತಿದಿದ್ದಾರೆ. ತಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಮಾಡಿಕೊಂಡಿದ್ದ ಪಾಪ ನಿವೇದನೆ, ಮನೆಗೆಲಸದಾಕೆ ತನ್ನ ಕೋಣೆಯಲ್ಲಿ ಮಲಗಿದ್ದಾಗ ಹೇಗೆ ಒಳಪ್ರವೇಶ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.
"ನಾನು ಹೊದಿಕೆಯನ್ನು ಮೇಲೆತ್ತಿದೆ ಮತ್ತು ಆಕೆಯ ಒಳಚಡ್ಡಿಯಲ್ಲಿನ ಭಾಗವನ್ನು ಮುಟ್ಟಲು ಯತ್ನಿಸಿದೆ. ನಾನು ಮುಟ್ಟುತ್ತಿದ್ದೆ. ಆಗ ಆಕೆ ಎಚ್ಚರವಾದರು. ಆಗ ಆ ಕೋಣೆಯಿಂದ ಹೊರಟುಬಿಟ್ಟೆ" ಎಂದು ಡುಟೆರ್ಟ್ ಹೇಳಿಕೊಂಡಿದ್ದಾರೆ. ಆ ನಂತರವೂ ಆಕೆ ಕೋಣೆಗೆ ವಾಪಸಾಗಿ, ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾಗಿ ಕೂಡಿ ತಪ್ಪೊಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.

ಮಹಿಳಾ ಹಕ್ಕುಗಳ ರಾಜಕೀಯ ಪಕ್ಷ ಗೇಬ್ರಿಯಾಲದಿಂದ ಡುಟೆರ್ಟ್ ರಾಜೀನಾಮೆಗೆ ಆಗ್ರಹಿಸಲಾಗಿದೆ. ತಾನು ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಆತ ಒಪ್ಪಿಕೊಂಡಿರುವುದರಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜನನಾಂಗ ಒಳಕ್ಕೆ ಹಾಕುವ ಮೂಲಕವಷ್ಟೇ ಅತ್ಯಾಚಾರ ಆಗುವುದಿಲ್ಲ. ಬೆರಳು ಅಥವಾ ವಸ್ತುವನ್ನು ಬಳಸಿದರೂ ಅದು ಅತ್ಯಾಚಾರಕ್ಕೆ ಸಮವೇ ಎಂದು ಗೇಬ್ರಿಯಾಲದ ಸೆಕ್ರೆಟರಿ ಜೋಮ್ಸ್ ಸಲ್ವಡಾರ್ ಹೇಳಿದ್ದಾರೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಕ್ಯಾಥೋಲಿಕ್ ಚರ್ಚ್ ಮೇಲೆ ಎಪ್ಪತ್ಮೂರು ವರ್ಷದ ಡ್ಯುಟೆರ್ಟ್ ಭಾರೀ ವಾಗ್ದಾಳಿ ನಡೆಸಿದ್ದಾರೆ. ಚರ್ಚ್ ಗಳನ್ನು ಆಷಾಢಭೂತಿ ಸಂಸ್ಥೆ ಎಂದು ಜರೆದಿರುವ ಅವರು, ಶಾಲೆಯಲ್ಲಿ ಓದುವಾಗ ತಾನು ಹಾಗೂ ಸಹಪಾಠಿಗಳ ಮೇಲೆ ಪಾಪ ನಿವೇದನೆ ವೇಳೆ ಲೈಂಗಿಕ ದೌರ್ಜನ್ಯ ನಡೆದಿದ್ದಾಗಿ ಹೇಳಿದ್ದಾರೆ.
ಫಿಲಪೈನ್ ನ ಜೈಲು ದೊಂಬಿಯಲ್ಲಿ ಆಸ್ಟ್ರೇಲಿಯನ್ ಮಿಷನರಿಯೊಬ್ಬಾಕೆ ಕೊಲೆಯಾಗಿದ್ದರು. ತನ್ನ ಚುನಾವಣೆ ಪ್ರಚಾರ ಮಾಡುತ್ತಾ ಡ್ಯುಟೆರ್ಟ್, ಆ ಸುಂದರ ಆಸ್ಟ್ರೇಲಿಯನ್ ಮಿಷನರಿಯನ್ನು ಅತ್ಯಾಚಾರ ಮಾಡಲು ಬಯಸಿದ್ದೆ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ಕಾರಣರಾಗಿದ್ದರು.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications