ಗಾಂಜಾಗೆ ಮಾನ್ಯತೆ, ಸೊಪ್ಪು ಮಾರಾಟಕ್ಕೆ ಮುಂದಾದ ಪಾಕಿಸ್ತಾನ..!
ಪಾಕಿಸ್ತಾನದ ಆರ್ಥಿಕತೆ ಬೀದಿಗೆ ಬಿದ್ದಿದೆ. ಅಲ್ಲಿ, ಇಲ್ಲಿ ಹೋಗಿ ಸಾಲ ಕೇಳುವುದೇ ಪಾಕ್ ನಾಯಕರ ನಿತ್ಯದ ಕೆಲಸವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ನಡೆಸಲು ಬೇಕಾದ ಕನಿಷ್ಠ ಸಂಪತ್ತು ಕೂಡ ಪಾಕ್ ಸರ್ಕಾರದ ಬಳಿ ಇಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನ ಹೊಸ ಐಡಿಯಾ ಮಾಡಿದೆ. ಅದೇನೆಂದರೆ ತನ್ನ ದೇಶದಲ್ಲಿ ಗಾಂಜಾ ಬೆಳೆಯಲು ಅನುಮತಿ ನೀಡಿ, ಅದರಿಂದ ದುಡ್ಡು ಮಾಡುವ ಪ್ಲ್ಯಾನ್ ಪಾಕ್ ಸರ್ಕಾರದ್ದು.
Recommended Video
ಮೆಡಿಕಲ್ ಮರಿಜುನಾ ಅಥವಾ ಹೈಡ್ರೋ ಗಾಂಜಾ ಬೆಳೆಯಲು ಪಾಕ್ ತಯಾರಾಗುತ್ತಿದೆ. ಇದಕ್ಕಾಗಿ 3 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಉಗ್ರರ ಉಪಟಳದಿಂದ ದೂರ ಉಳಿದಿರುವ ಪ್ರದೇಶದಲ್ಲಿ ಗಾಂಜಾ ಬೆಳೆಯಲು ನೀಲಿನಕ್ಷೆ ಸಿದ್ಧವಾಗಿದೆ. ಪಾಕಿಸ್ತಾನದ ಸಿಂಧ್, ಪಂಜಾಬ್ ಸೇರಿದಂತೆ ಕೈಬರ್ನಲ್ಲಿ ಸರ್ಕಾರದ ಉಸ್ತುವಾರಿಯಲ್ಲೇ ಗಾಂಜಾ ಪ್ಲಾಂಟೇಷನ್ ನಡೆಯಲಿದೆ. ಈ ಕುರಿತು ಪಾಕ್ನ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಮಾಹಿತಿ ನೀಡಿದ್ದಾರೆ.

ಕಾನೂನಿಗೆ ತಿದ್ದುಪಡಿ ತಂದ ಪಾಕಿಸ್ತಾನ..!
ಪಾಕಿಸ್ತಾನ ಸರ್ಕಾರ ಕೈಯಲ್ಲಿ ಕಾಸು ಇಲ್ಲದೆ ಅದೆಷ್ಟು ಬರಗೆಟ್ಟು ಹೋಗಿದೆ ಎಂದರೆ, ಗಂಜಾ ಬೆಳೆಯಲು ಅಡ್ಡಿಯಾಗಿದ್ದ ಕಾನೂನನ್ನೇ ತಿದ್ದುಪಡಿ ಮಾಡಿದೆ. 2006ರ ರಫ್ತು ಕಾನೂನಿಗೆ ಈಗ ತಿದ್ದುಪಡಿ ತಂದಿದೆ. ಈ ಮೂಲಕ ಹೇಗಾದರೂ ಸರಿ ಕಾಸು ಮಾಡಲೇಬೇಕು ಎಂಬಂತಹ ಸ್ಥಿತಿಗೆ ಪಾಕಿಸ್ತಾನ ಬಂದುನಿಂತಂತೆ ಕಾಣುತ್ತಿದೆ. ಆದರೆ ಈ ಕೆಲಸದಲ್ಲಾದರೂ ಪಾಕಿಸ್ತಾನ ಸಕ್ಸಸ್ ಕಾಣುತ್ತಾ..? ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಸೌದಿ ಅವಮಾನ ಕಲಿಸಿತಾ ಪಾಠ..?
ಇಷ್ಟುದಿನ ಅಲ್ಲಿ, ಇಲ್ಲಿ ಸಾಲ ಮಾಡಿ ಬದುಕುತ್ತಿದ್ದ ಪಾಕ್ಗೆ ಇತ್ತೀಚೆಗೆ ಸೌದಿ ಸರಿಯಾಗೇ ಪಾಠ ಕಲಿಸಿತ್ತು. ಮಾತೆತ್ತಿದರೆ ಸಾಕು ಒಂದೋ ಚೀನಾ, ಇಲ್ಲವಾದರೆ ಸೌದಿ ದೊರೆಗಳ ಕಾಲಿಗೆ ಬಿದ್ದು ಕಾಸು ಕೀಳೋದು ಪಾಕ್ ನಾಯಕರ ಖಯಾಲಿ ಆಗಿತ್ತು. ಆದರೆ ಇತ್ತೀಚೆಗೆ ಸೌದಿ ದೊರೆಗಳು ಪಾಕ್ ಸಾಲ ಕೇಳಿದಾಗ ಮುಖಕ್ಕೆ ಹೊಡೆದಂತೆ ಇಲ್ಲ ಎಂದಿದ್ದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಅವಮಾನವಾಗುವಂತೆ ನಡೆದುಕೊಂಡಿದ್ದರು. ಈ ಅವಮಾನಕ್ಕೆ ತೇಪೆ ಹಾಕಲು ಇಮ್ರಾನ್ ಅದೆಷ್ಟೇ ಪ್ರಯತ್ನಿಸಿದರೂ ವರ್ಕೌಟ್ ಆಗಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡಂತೆ ಕಾಣುತ್ತಿರುವ ಪಾಕಿಸ್ತಾನ, ಗಾಂಜಾ ಬೆಳೆದಾದರೂ ಬದುಕಬೇಕು ಎಂಬ ನಿರ್ಧಾರಕ್ಕೆ ಬಂದಿದೆ.

ಉಗ್ರರ ಕೈಗೆ ಸಿಕ್ಕರೆ ಮುಗೀತು ಕತೆ..!
ಪಾಕಿಸ್ತಾನದಲ್ಲಿ ಯಾವಾಗ ಏನು ಆಗುತ್ತೋ ಗೊತ್ತಾಗುವುದಿಲ್ಲ. ಉಗ್ರರ ಕಪಿಮುಷ್ಠಿಗೆ ಸಿಲುಕಿ ಪಾಕ್ ವಿಲವಿಲ ಒದ್ದಾಡುತ್ತಿದೆ. ಒಂದ್ಕಡೆ ಉಗ್ರರ ಉಪಟಳವಾದರೆ, ಮತ್ತೊಂದ್ಕಡೆ ಐಎಸ್ಐ ಗುಪ್ತಚರ ಸಂಸ್ಥೆಯ ಆರ್ಭಟ. ಹೀಗಾಗಿ ಪಾಕಿಸ್ತಾನದಲ್ಲಿ ಸರ್ಕಾರ ಇದ್ದೂ ಇಲ್ಲದಂತಹ ಸ್ಥಿತಿ ಇದೆ. ಇಷ್ಟೆಲ್ಲದರ ಮಧ್ಯೆ ಪಾಕ್ ಬೆಳೆಯಲಿರುವ ಗಾಂಜಾ ಉಗ್ರರ ಕೈಗೆ ಸೇರಿದರೆ ಮುಗಿಯಿತು ಕತೆ. ಪಾಪಿ ಉಗ್ರರು ಮಾಡಬಾರದ್ದನ್ನೆಲ್ಲಾ ಮಾಡಿಬಿಡುತ್ತಾರೆ. ಈ ಕಾರಣಕ್ಕೆ ಗಾಂಜಾ ಪ್ಲಾಂಟ್ ಮಾಡಲಿರುವ ಪ್ರದೇಶಕ್ಕೆ ಪಾಕಿಸ್ತಾನ ಭಾರಿ ಭದ್ರತೆ ಒದಗಿಸುತ್ತದೆಯಂತೆ. ಅಕಸ್ಮಾತ್ ಭದ್ರತೆ ಒದಗಿಸದೆ ಇದ್ದರೆ, ಪಾಕ್ ಬೆಳೆದ ಗಾಂಜಾ ಕ್ಷಣಮಾತ್ರದಲ್ಲಿ ಉಗ್ರರ ಪಾಲಾಗುವುದು ಗ್ಯಾರಂಟಿ.

ಚೀನಾ ಕೊಟ್ಟ ಐಡಿಯಾ..?
ಪಾಕಿಸ್ತಾನದಲ್ಲಿ ಮರಿಜುನಾ ಅಥವಾ ಗಾಂಜಾ ಬೆಳೆಯಲು ಸ್ಫೂರ್ತಿ ಯಾರು ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಆದರೆ ಇದನ್ನು ಪಾಕ್ ಸರ್ಕಾರ ನೇರವಾಗಿ ಹೇಳಿಲ್ಲವಾದರೂ, ಪಾಕ್ ಸಚಿವ ಫವಾದ್ ಚೌಧರಿ ಮಾತಿನಲ್ಲೇ ಇದಕ್ಕೆ ಉತ್ತರವಿದೆ. ಪಾಕಿಸ್ತಾನದಲ್ಲಿ ಗಾಂಜಾ ಬೆಳೆಯುವ ಉದ್ದೇಶದ ಹಿಂದೆ ಚೀನಾ ಕೈವಾಡ ಇರಬಹುದಾ ಎಂಬ ಗುಮಾನಿ ಮೂಡಿದೆ. ಏಕೆಂದರೆ ಕೆನಡಾ ಹಾಗೂ ಚೀನಾ ರೀತಿಯಲ್ಲೇ ನಾವು ಔಷಧ ಗಾಂಜಾ ರಫ್ತು ಮಾಡಲಿದ್ದೇವೆ ಅಂತಾ ಪಾಕ್ ಸಚಿವರು ಹೇಳಿದ್ದಾರೆ. ಇಷ್ಟುದಿನ ಎಲ್ಲದಕ್ಕೂ ಸಹಾಯ ಮಾಡಿರುವ ಚೀನಾ, ಈಗ ಗಾಂಜಾ ಬೆಳೆಯೋದಕ್ಕೂ ಪಾಕಿಸ್ತಾನಕ್ಕೆ ಸಹಾಯ ಮಾಡದೇ ಇರದು.
-
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ











Click it and Unblock the Notifications