ಮ್ಯಾನ್ ಬೂಕರ್ ಪ್ರಶಸ್ತಿ ರೇಸ್ನಲ್ಲಿ ಎನ್ಆರ್ಐ ನೀಲ್
ಲಂಡನ್, ಸೆ. 9 : ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿಗೆ ಭಾರತೀಯ ಮೂಲದ ಲೇಖಕ ನೀಲ್ ಮುಖರ್ಜಿ ಕೃತಿ 'ದ ಲೈವ್ಸ್ ಆಫ್ ಅದರ್ಸ್' ನಾಮಕರಣಗೊಂಡಿದ್ದು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಮುಖರ್ಜಿ ಪುಸ್ತಕದ ಜತೆಗೆ ಝೋಷಾ ಪೇರಿಸ್ ಬರೆದಿರುವ 'ಟಿ ರೈಸ್ ಅಗೇನ್ ಆಟ್ ಅ ಡೆಕೆನ್ಟ್ ಅವರ್', ರಿಚರ್ಡ್ ಪ್ಲಾಗ್ನಂ ವಿರಚಿತ 'ದಿ ನ್ಯಾರೋ ರೋಡ್ ಟು ದಿ ಡೀಪ್ ನಾರ್ತ್', ಕರೆನ್ ಜಾಯ್ ಫ್ಲವರ್ ವಿರಚಿತ 'ವಿ ಆರ್ ಆಲ್ ಕಂಪ್ಲಿಟ್ಲಿ ಬಿಸೈಡ್ ಅವರ್ಸೆಲ್ಸ್', ಅಲಿ ಸ್ಮಿತ್ ಬರೆದ 'ಹೌ ಟು ಬಿ ಬೋತ್' ಮತ್ತು ಹೋವಾರ್ಡ್ ಜಾಕೊಬ್ಸನ್ ಬರೆದ 'ಜೆ' ಆಯ್ಕೆಯಾಗಿವೆ. (ಯು.ಆರ್.ಅನಂತಮೂರ್ತಿ ಕೈ ತಪ್ಪಿದ ಬೂಕರ್ ಪ್ರಶಸ್ತಿ)

1960ನೇ ಇಸವಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ನಕ್ಸಲಿಸಂ ಕತೆ ಆಧಾರಿತ ಕೃತಿ 2014ರ ಬೂಕರ್ಗೆ ನಾಮನಿರ್ದೇಶನಗೊಂಡಿದೆ.
ಕಳೆದ ಮೇ ತಿಂಗಳಲ್ಲಿ ಪ್ರಕಟವಾದ ಪುಸ್ತಕ ಬಹಳಷ್ಟು ಜನರಿಗೆ ಇಷ್ಟವಾಗಿತ್ತು.
ಇದರ ಪ್ರಾರಂಭದ ಪುಟಗಳೇ ಓದುಗನ ಮೇಲೆ ಗಾಢ ಪರಿಣಾಮ ಬೀರುವಂತಿದ್ದು, ಆಧುನಿಕ ಭಾರತದ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಯಾವುದೇ ಒತ್ತಡಕ್ಕೆ ಒಳಗಾಗದೇ ಕೊನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಬೂಕರ್ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಎ.ಸಿ.ಗ್ರಾಯ್ಲಿಂಗ್ ಹೇಳಿದ್ದಾರೆ.
ಅಂತಿಮ ಪಟ್ಟಿ ಬಹಿರಂಗಪಡಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಬೂಕರ್ ವ್ಯಾಪ್ತಿ ಇಡಿ ಪ್ರಪಂಚಕ್ಕೆ ಹರಡಿದ್ದು ಅಮೆರಿಕ, ಇಂಗ್ಲೆಂಡ್, ಥೈಲ್ಯಾಂಡ್, ಇಟಲಿ ಮತ್ತು ಭಾರತದ ಕೋಲ್ಕತ್ತಾಕ್ಕೂಕ್ಕೆ ಸಂಬಂಧಿಸಿದ ಕತೆಗಳು ಸ್ಪರ್ಧೆಯಲ್ಲಿವೆ ಎಂದು ಹೇಳಿದರು.
ಕೃತಿಯ ಆಳ ಮತ್ತು ಸಮಗ್ರತೆ ಅಧ್ಯಯನ ಮಾಡಿ ಪಟ್ಟಿ ಸಿದ್ಧಪಡಿಸಲಾಗಿದೆ. ತೀರ್ಪುಗಾರರು ಇನ್ನೊಮ್ಮೆ ಎಲ್ಲ ಕೃತಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಅಂತಿಮವಾಗಿ ಕೃತಿ ಮತ್ತು ಲೇಖಕರನ್ನು ಘೋಷಿಸಿ ಅಕ್ಟೋಬರ್ 14 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗ್ರಾಯ್ಲಿಂಗ್ ತಿಳಿಸಿದರು.
ಅನಂತಮೂರ್ತಿ ಆಯ್ಕೆಯಾಗಿದ್ದರು
ಕಳೆದ ಬಾರಿ ಮ್ಯಾನ್ ಬೂಕರ್ ಪ್ರಶಸ್ತಿಗೆ ದಿವಂಗತ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ನಾಮನಿರ್ದೇಶನಗೊಂಡಿದ್ದರು. ಆದರೆ ಅಂತಿಮವಾಗಿ ಪ್ರಶಸ್ತಿ ನ್ಯೂಯಾರ್ಕ್ ಮೂಲ ಸಣ್ಣಕಥೆಗಾರ್ತಿ ಲೈಡಾ ಪಾಲಾಗಿತ್ತು.
ಏನಿದು ಪ್ರಶಸ್ತಿ
ಮ್ಯಾನ್ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ವಿಶ್ವದ ಯಾವುದೇ ದೇಶದ, ಇಂಗ್ಲೀಷ್ ಭಾಷೆ ತರ್ಜುಮೆಗೆ ಲಭ್ಯವಿರುವ ಯಾವುದೇ ಭಾಷೆಯ ಕೃತಿಗೆ ನೀಡಲಾಗುತ್ತದೆ. 2005ರಿಂದ ಈ ಪ್ರಶಸ್ತಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಪ್ರಶಸ್ತಿಯೂ 51 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications