ನಾಸಾ ಕಣ್ಣಲ್ಲಿ ಕ್ಯಾಲಿಫೋರ್ನಿಯಾದ ಭಯಂಕರ ಕಾಡ್ಗಿಚ್ಚಿನ ಚಿತ್ರ!
ಕ್ಯಾಲಿಫೋರ್ನಿಯಾ, ಡಿಸೆಂಬರ್ 12: ಭೂಮಿಯಿಂದ ಸಾವಿರಾರು ಮೈಲಿ ದೂರದಲ್ಲಿರುವ ನಾಸಾದ ಉಪಗ್ರಹವೊಂದಕ್ಕೆ ಇದ್ದಕ್ಕಿದ್ದಂತೆ ವಿಲಕ್ಷಣ ವಸ್ತುವೊಂದು ಕಂಡಿತ್ತು. ಏನದು ಎಂದು ಸರಿಯಾಗಿ ಗಮನಿಸಿದಾಗ ಅದು ವಿಲಕ್ಷಣ ವಸ್ತುವೇನಲ್ಲ, ದಟ್ಟ ಹೊಗೆ ಎಂಬುದು ತಿಳಿದುಬಂದು. ಈ ಹೊಗೆ ಎಲ್ಲಿಂದ ಬಂತು ಎಂಬ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಅಮೆರಿಕದ ಕ್ಯಾಲಿಫೋರ್ನಿಯಾದ ಭಯಂಕರ ಕಾಳ್ಗಿಚ್ಚಿನ ಕತೆ!
ಹೌದು, ಕ್ಯಾಲಿಫೋರ್ನಿಯಾ ಜನರ ನಿದ್ದೆ ಕೆಡಿಸಿರುವ ಭೀಕರ ಕಾಳ್ಗಿಚ್ಚು ಇನ್ನೂ ಆರಿಲ್ಲ. ಬೆಂಕಿ ಆರಿಸುವುದಕ್ಕೆ ನಡೆದ ನೂರಾರು ಪ್ರಯತ್ನಗಳೂ ವಿಫಲವಾಗಿವೆ. ಜಾಗತಿಕ ತಾಪಮಾನದ ಹೆಚ್ಚಳವೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಿರುವಾಗ ಈ ಭಯಾನಕ ಕಾಳ್ಗಿಚ್ಚಿನ ಚಿತ್ರಗಳು ನಾಸಾ ಕಣ್ಣಿಗೂ ಕಾಣಿಸಿವೆ. ದಟ್ಟ ಹೊಗೆ, ಬೆಂಕಿ ಉಪಗ್ರಹದಲ್ಲೂ ಕಾಣಿಸುತ್ತಿದೆ ಎಂದರೆ ಇದರ ತೀವ್ರತೆಯನ್ನು ಬಿಡಿಸಿಹೇಳಬೇಕಿಲ್ಲ.
ನಾಸಾ(National Aeronautics and Space Administration) ಕ್ಲಿಕ್ಕಿಸಿದ ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿನ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ. ಈ ಎಲ್ಲಾ ಚಿತ್ರಗಳನ್ನು ನಾಸಾದ ಅಧಿಕೃತ ವೆಬ್ ಸೈಟ್ ನಿಂದ ತೆಗೆದುಕೊಳ್ಳಲಾಗಿದೆ. (ಚಿತ್ರಕೃಪೆ: ನಾಸಾ)

ಉಪಗ್ರಹಕ್ಕೂ ಕಂಡ ಕಾಳ್ಗಿಚ್ಚು!
ಕ್ಯಾಲಿಫೋರ್ನಿಯಾವನ್ನು ಸುತ್ತವರಿದ ಈ ದೈತ್ಯ ಕಾಳ್ಗಿಚ್ಚು ಎಷ್ಟು ಭಯಾವನಕವಾಗಿದೆ ಎಂದರೆ ಉಪಗ್ರಹಕ್ಕೂ ಇದು ಕಾಣುತ್ತಿದೆ. ಈ ಕಾಳ್ಗಿಚ್ಚಿಗೆ ಇಬ್ಬರು ಬಲಿಯಾಗಿದ್ದು ಒಟ್ಟು 1.40 ಲಕ್ಷ ಎಕರೆಗೂ ಹೆಚ್ಚು ಜಾಗಕ್ಕೆ ಇದು ಆವರಿಸಿ ಅಲ್ಲಿದ್ದ ಮನೆ, ಕಾಡುಗಳನ್ನು ಭಸ್ಮ ಮಾಡಿದೆ.

ಮೋಡವಲ್ಲ ಇದು ಗಾಢ ಹೊಗೆ
ಉಪಗ್ರಹದಿಂದ ಮೊದಲು ಮೋಡದಂತೇ ಕಂಡ ಗಾಢ ಹೊಗೆಯನ್ನು ಸರಿಯಾಗಿ ಗಮನಿಸಿದಾಗಲೇ ಗೊತ್ತಾಗಿದ್ದು, ಇದು ಮೋಡವಲ್ಲಯಲ್ಲ ಹೊಗೆ ಅಂತ. ಈ ದೈತ್ಯ ಕಾಳ್ಗಿಚ್ಚಿನ ಭಯಕ್ಕೆ, ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಸ್ಪಷ್ಟವಾಗಿ ಕಾಣುವ ಬೆಂಕಿ
ಕಾಳ್ಗಿಚ್ಚು ಉಪಗ್ರಹದಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಇದು ಆರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಗ್ನಿ ಶಾಮಕ ದಳದ ಬಹುಪಾಲು ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕವೂ ನೀರು ಹಾಕಿ ಬೆಂಕಿ ಆರಿಸುವ ಪ್ರಯತ್ನ ಮಾಡುತ್ತಿದ್ದಾರಾದರೂ ಬೆಂಕಿ ಮಾತ್ರ ಆರುತ್ತಿಲ್ಲ.

ಜಾಗತಿಕ ತಾಪಮಾನದಲ್ಲಿ ಹೆಚ್ಚಳ
ಜಾಗತಿಕ ತಾಪಮಾನ ದಿನೇ ದಿನೇ ಹೆಚ್ಚುತ್ತಿರುವುದೇ ಈ ಕಾಳ್ಗಿಚ್ಚಿಗೆ ಕಾರಣ ಎಂಬುದು ತಜ್ಞರ ಮಾತು. ಕ್ಯಾಲಿಫೋರ್ನಿಯಾದಲ್ಲಿ ಪದೇ ಪದೇ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿರುವುದಕ್ಕೆ ಅದೇ ಕಾರಣವಂತೆ. ಒಣ ಹವೆ ಮತ್ತು ಬಿಸಿ ಗಾಳಿಯಿಂದಾಗಿ ಕಾಳ್ಗಿಚ್ಚು ಸಂಭವಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications