ತಾಲಿಬಾನ್ ಕಮಾಂಡರ್ ಮುಲ್ಲಾ ಒಮರ್ ಸಾವು
ಕಾಬೂಲ್, ಜುಲೈ 29: ತಾಲಿಬಾನ್ ಉಗ್ರ ಸಂಘಟನೆಯ ಪರಮೋಚ್ಚ ಕಮ್ಯಾಂಡರ್ ಮುಲ್ಲಾ ಒಮರ್ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ. ಅವನ ಸಾವಿನ ಸುದ್ದಿಯನ್ನು ಬಚ್ಚಿಡಲಾಗಿತ್ತು ಎಂದು ಬಿಬಿಸಿ ಬಹಿರಂಗಪಡಿಸಿದೆ.
ಅಫ್ಘಾನಿಸ್ತಾನ ಸರ್ಕಾರದ ಅಧಿಕಾರಿಗಳಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಿದ್ದು, ತಾಲಿಬಾನಿಗಳ ನಾಯಕ ಸತ್ತು ಅನೇಕ ವರ್ಷಗಳಾಗಿದೆ ಎಂದು ಬಿಬಿಸಿ ಹೇಳಿದೆ.
ಅದರೆ, ತಾಲಿಬಾನಿಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸುದ್ದಿಯನ್ನು ತಳ್ಳಿ ಹಾಕಿಲ್ಲ ಅಥವಾ ಒಪ್ಪಿಕೊಂಡಿಲ್ಲ. ಬಿಬಿಸಿಯಲ್ಲಿ ಸುದ್ದಿ ಪ್ರಸಾರವಾದ ಬಳಿಕ ತಾಲಿಬಾನಿ ವಕ್ತಾರರು ಈ ಬಗ್ಗೆ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ.
ಈ ಹಿಂದೆ ಕೂಡಾ ಸುದ್ದಿ ಹಬ್ಬಿತ್ತು: ತಾಲಿಬಾನ್ ನಾಯಕ ಒಮರ್ ಗುಂಡಿನ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ ಎಂದು ಅಫ್ಘಾನ್ ನ್ಯೂಸ್ ಔಟ್ ಲೆಟ್, ಟಿಒಎಲ್ಒ ನ್ಯೂಸ್ 2011ರಲ್ಲಿ ವರದಿ ಮಾಡಿದ್ದವು. ಅಫ್ಘಾನಿಸ್ತಾನದ ಉತ್ತರ ವಾಜಿರಸ್ತಾನ್ನಲ್ಲಿ ಮುಲ್ಲಾ ಒಮರ್ ಸಾವನ್ನಪ್ಪಿದ್ದಾನೆ, ಈತನನ್ನು ಅಮೆರಿಕದ ಯೋಧರು ಕೊಂದಿರಬಹುದು ಎನ್ನಲಾಗಿತ್ತು.
2011ರಲ್ಲಿ ಪ್ರಸಾರವಾದ ಡಾ. ಜಾನ್ ಕೊಲ್ಮನ್ ಅವರ ವೇಕ್ ಅಪ್ ಅಮೆರಿಕ ವಿಡಿಯೋ ಇಲ್ಲಿದೆ ನೋಡಿ:
ಆದರೆ, ತೆಹ್ರೆಕ್-ಇ-ತಾಲಿಬಾನ್ ಮುಲ್ಲಾ ಒಮರ್ ಸಾವನ್ನು ನಿರಾಕರಿಸಿತ್ತು. ಅಮೆರಿಕಾದ ತನಿಖಾ ಏಜೆನ್ಸಿ ಎಫ್ಬಿಐಗೆ ಒಸಾಮಾ ನಂತರ ಮುಲ್ಲಾ ಒಮರ್ ಎರಡನೇ ಟಾರ್ಗೆಟ್ ಆಗಿದ್ದ. 2001ರಲ್ಲಿ ಅಮೆರಿಕ ಜೋಡಿ ಕಟ್ಟಡದ ಮೇಲೆ ದಾಳಿ ನಡೆಸಿದ ನಂತರ ಈತನೇ ಲಾಡೆನ್ನನ್ನು ಗೌಪ್ಯವಾಗಿಟ್ಟಿದ್ದ ಎನ್ನಲಾಗಿತ್ತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications