ಟ್ರೆಕ್ಕಿಂಗ್ ನಿರ್ಬಂಧ ಹೇರಿದ ನೇಪಾಳ, ಟಿಬೇಟ್, ಚೀನಾ
ಕಠ್ಮಂಡು, ಮಾರ್ಚ್ 17: ಕೊರೊನಾವೈರಸ್ ಭೀತಿಯಿಂದ ನೇಪಾಳ, ಮ್ಯಾನ್ಮಾರ್, ಭೂತನ್ ಗಡಿಯನ್ನು ಭಾರತ ಬಂದ್ ಮಾಡಿದೆ. ಇದಾದ ಬಳಿಕ ಚೀನಾ ಹಾಗೂ ನೇಪಾಳ ಕೂಡಾ ಗಡಿಯಲ್ಲಿ ಭದ್ರತೆ ಹೆಚ್ಚಿಸಿವೆ. ಈ ನಡುವೆ ಈ ಬೇಸಿಗೆ ಸೀಸನ್ ನಲ್ಲಿ ಮೌಂಟ್ ಎವೆರೆಸ್ಟ್ ಸೇರಿದಂತೆ ಇತರೆ ಪರ್ವತ ಪ್ರದೇಶಗಳಲ್ಲಿ ಚಾರಣ, ಸುತ್ತಾಟವನ್ನು ನಿರ್ಬಂಧಿಸಲಾಗಿದೆ. ಚೀನಾ ತನ್ನ ಗಡಿಯಲ್ಲಿ ಎಲ್ಲಾ ರೀತಿಯ ಪರ್ವತಾರೋಹಣ ಚಟುವಟಿಕೆಗಳನ್ನು ಬಂದ್ ಮಾಡಿದ್ದು, ಯಾವುದೇ ದೇಶದವರಿಗೂ ಅನುಮತಿ ನೀಡುತ್ತಿಲ್ಲ.
Recommended Video
ಕಳೆದ ವರ್ಷ ಇದೇ ಅವಧಿಯಲ್ಲಿ 885 ಮಂದಿ ಎವೆರೆಸ್ಟ್ ಸಮ್ಮಿಟ್ ಮಾಡಿದ್ದರು. ಈ ಪೈಕಿ 644 ಮಂದಿ ನೇಪಾಳ ಕಡೆಯಿಂದ 241 ಮಂದಿ ಟಿಬೇಟ್ ಕಡೆಯಿಂದ ಆರೋಹಣ ಮಾಡಿದ್ದರು. ಸದ್ಯಕ್ಕೆ ನೇಪಾಳದಿಂದ ಸಾಗರಮಾತಾ ಅಥವಾ ಚೋಮೋಲ್ಮುಂಗಾ ಪರ್ವತಾರೋಹಣಕ್ಕೆ ಕೆಲವರಿಗೆ ಅನುಮತಿ ನೀಡಲಾಗಿದೆ. ಕೆಲವು ಟ್ರೆಕ್ಕಿಂಗ್ ನಿರ್ವಹಣಾ ಸಂಸ್ಥೆಗಳು ನೋಂದಣಿಯನ್ನು ಬಂದ್ ಮಾಡಿವೆ. ಟ್ರೆಕ್ಕರ್ಸ್ ಪ್ರವಾಸ ಇತಿಹಾಸ, ವೈದ್ಯಕೀಯ ಪರೀಕ್ಷೆ ನಂತರ ಅನುಮತಿಗಾಗಿ ಅರ್ಜಿ ಹಾಕಲಾಗುತ್ತಿದ್ದೇವೆ ಎಂದು ನೇಪಾಳ ಟ್ರೆಕ್ ಅಂಡ್ ಟೂರ್ ಆಪರೇಟರ್ ಗಣೇಶ್ ಸಿಂಕಾಡಾ ಅವರು ಒನ್ಇಂಡಿಯಾಕ್ಕೆ ತಿಳಿಸಿದರು.
ಮೌಂಟ್ ಎವೆರೆಸ್ಟ್ ಉತ್ತರ ಭಾಗದಿಂದ ಆರೋಹಣವನ್ನು ಚೀನಾ ಬಂದ್ ಮಾಡಿದೆ, ಬೇರೆ ಮಾರ್ಗ ಹಿಡಿಯಬೇಕು ಎಂದು ಆಸ್ಟ್ರೀಯಾ ಮೂಲಕ ಲೂಕಸ್ ಫರ್ಟೆಂಬ್ಯಾಕ್ ಹೇಳಿದ್ದಾರೆ.

ಟಿಬೇಟ್ ನಲ್ಲಿ ಜನವರಿಯಿಂದಲೇ ಪ್ರವಾಸಿಗರಿಗೆ ಪ್ರವೇಶ ನಿಷೇಧಗೊಳಿಸಲಿದೆ. ಚೀನಾದ ಪ್ರಮುಖ ಟ್ರೆಕ್ ಆಪರೇಟರ್ ಅಲ್ಪೆಂಗ್ಲೋ ಎಕ್ಸ್ ಪೆಡಿಷನ್ ಈ ಸೀಸನ್ ಎವೆರೆಸ್ಟ್ ಆರೋಹಣ ಬಂದ್ ಮಾಡಿದೆ. ಚೀನಾ- ಟಿಬೇಟ್ ಮೌಂಟನಿರಿಂಗ್ ಅಸೋಸಿಯೇಷನ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಸೀಸನ್ ನಲ್ಲಿ 23 ಮಂದಿ ಬುಕ್ ಮಾಡಿದ್ದರು. ಎರಡು ತಂಡಗಳು ಈಗಾಗಲೇ ಕ್ಯಾನ್ಸಲ್ ಮಾಡಿವೆ. ಈ ಬಾರಿ 8 ರಿಂದ 10 ಮಂದಿ ಎವೆರೆಸ್ಟ್ ತನಕ ಹೋಗಿ ಬರಬಹುದು ಎಂಡು ಪಯೋನಿರ್ ಅಡ್ವೆಂಚರ್ ನ ಪಸಂಗ್ ತೆಂಜೆ ಶೇರ್ಪಾ ಹೇಳಿದ್ದಾರೆ. ಏಪ್ರಿಲ್ -ಮೇ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಅನುಮತಿ ಸಿಗಬಹುದು, ನೇಪಾಳದಲ್ಲಿ ಸದ್ಯಕ್ಕೆ ಒಂದೇ ಒಂದು ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿದೆ. ಕೊರೊನಾಪೀಡಿತ 8 ರಾಷ್ಟ್ರಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications