ಟ್ರೆಕ್ಕಿಂಗ್ ನಿರ್ಬಂಧ ಹೇರಿದ ನೇಪಾಳ, ಟಿಬೇಟ್, ಚೀನಾ
ಕಠ್ಮಂಡು, ಮಾರ್ಚ್ 17: ಕೊರೊನಾವೈರಸ್ ಭೀತಿಯಿಂದ ನೇಪಾಳ, ಮ್ಯಾನ್ಮಾರ್, ಭೂತನ್ ಗಡಿಯನ್ನು ಭಾರತ ಬಂದ್ ಮಾಡಿದೆ. ಇದಾದ ಬಳಿಕ ಚೀನಾ ಹಾಗೂ ನೇಪಾಳ ಕೂಡಾ ಗಡಿಯಲ್ಲಿ ಭದ್ರತೆ ಹೆಚ್ಚಿಸಿವೆ. ಈ ನಡುವೆ ಈ ಬೇಸಿಗೆ ಸೀಸನ್ ನಲ್ಲಿ ಮೌಂಟ್ ಎವೆರೆಸ್ಟ್ ಸೇರಿದಂತೆ ಇತರೆ ಪರ್ವತ ಪ್ರದೇಶಗಳಲ್ಲಿ ಚಾರಣ, ಸುತ್ತಾಟವನ್ನು ನಿರ್ಬಂಧಿಸಲಾಗಿದೆ. ಚೀನಾ ತನ್ನ ಗಡಿಯಲ್ಲಿ ಎಲ್ಲಾ ರೀತಿಯ ಪರ್ವತಾರೋಹಣ ಚಟುವಟಿಕೆಗಳನ್ನು ಬಂದ್ ಮಾಡಿದ್ದು, ಯಾವುದೇ ದೇಶದವರಿಗೂ ಅನುಮತಿ ನೀಡುತ್ತಿಲ್ಲ.
Recommended Video
ಕಳೆದ ವರ್ಷ ಇದೇ ಅವಧಿಯಲ್ಲಿ 885 ಮಂದಿ ಎವೆರೆಸ್ಟ್ ಸಮ್ಮಿಟ್ ಮಾಡಿದ್ದರು. ಈ ಪೈಕಿ 644 ಮಂದಿ ನೇಪಾಳ ಕಡೆಯಿಂದ 241 ಮಂದಿ ಟಿಬೇಟ್ ಕಡೆಯಿಂದ ಆರೋಹಣ ಮಾಡಿದ್ದರು. ಸದ್ಯಕ್ಕೆ ನೇಪಾಳದಿಂದ ಸಾಗರಮಾತಾ ಅಥವಾ ಚೋಮೋಲ್ಮುಂಗಾ ಪರ್ವತಾರೋಹಣಕ್ಕೆ ಕೆಲವರಿಗೆ ಅನುಮತಿ ನೀಡಲಾಗಿದೆ. ಕೆಲವು ಟ್ರೆಕ್ಕಿಂಗ್ ನಿರ್ವಹಣಾ ಸಂಸ್ಥೆಗಳು ನೋಂದಣಿಯನ್ನು ಬಂದ್ ಮಾಡಿವೆ. ಟ್ರೆಕ್ಕರ್ಸ್ ಪ್ರವಾಸ ಇತಿಹಾಸ, ವೈದ್ಯಕೀಯ ಪರೀಕ್ಷೆ ನಂತರ ಅನುಮತಿಗಾಗಿ ಅರ್ಜಿ ಹಾಕಲಾಗುತ್ತಿದ್ದೇವೆ ಎಂದು ನೇಪಾಳ ಟ್ರೆಕ್ ಅಂಡ್ ಟೂರ್ ಆಪರೇಟರ್ ಗಣೇಶ್ ಸಿಂಕಾಡಾ ಅವರು ಒನ್ಇಂಡಿಯಾಕ್ಕೆ ತಿಳಿಸಿದರು.
ಮೌಂಟ್ ಎವೆರೆಸ್ಟ್ ಉತ್ತರ ಭಾಗದಿಂದ ಆರೋಹಣವನ್ನು ಚೀನಾ ಬಂದ್ ಮಾಡಿದೆ, ಬೇರೆ ಮಾರ್ಗ ಹಿಡಿಯಬೇಕು ಎಂದು ಆಸ್ಟ್ರೀಯಾ ಮೂಲಕ ಲೂಕಸ್ ಫರ್ಟೆಂಬ್ಯಾಕ್ ಹೇಳಿದ್ದಾರೆ.

ಟಿಬೇಟ್ ನಲ್ಲಿ ಜನವರಿಯಿಂದಲೇ ಪ್ರವಾಸಿಗರಿಗೆ ಪ್ರವೇಶ ನಿಷೇಧಗೊಳಿಸಲಿದೆ. ಚೀನಾದ ಪ್ರಮುಖ ಟ್ರೆಕ್ ಆಪರೇಟರ್ ಅಲ್ಪೆಂಗ್ಲೋ ಎಕ್ಸ್ ಪೆಡಿಷನ್ ಈ ಸೀಸನ್ ಎವೆರೆಸ್ಟ್ ಆರೋಹಣ ಬಂದ್ ಮಾಡಿದೆ. ಚೀನಾ- ಟಿಬೇಟ್ ಮೌಂಟನಿರಿಂಗ್ ಅಸೋಸಿಯೇಷನ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಸೀಸನ್ ನಲ್ಲಿ 23 ಮಂದಿ ಬುಕ್ ಮಾಡಿದ್ದರು. ಎರಡು ತಂಡಗಳು ಈಗಾಗಲೇ ಕ್ಯಾನ್ಸಲ್ ಮಾಡಿವೆ. ಈ ಬಾರಿ 8 ರಿಂದ 10 ಮಂದಿ ಎವೆರೆಸ್ಟ್ ತನಕ ಹೋಗಿ ಬರಬಹುದು ಎಂಡು ಪಯೋನಿರ್ ಅಡ್ವೆಂಚರ್ ನ ಪಸಂಗ್ ತೆಂಜೆ ಶೇರ್ಪಾ ಹೇಳಿದ್ದಾರೆ. ಏಪ್ರಿಲ್ -ಮೇ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಅನುಮತಿ ಸಿಗಬಹುದು, ನೇಪಾಳದಲ್ಲಿ ಸದ್ಯಕ್ಕೆ ಒಂದೇ ಒಂದು ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿದೆ. ಕೊರೊನಾಪೀಡಿತ 8 ರಾಷ್ಟ್ರಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications