ಟೊಮೆಟೊ ಎಸೆಯೋದ್ರಲ್ಲೂ ಅದೇನ್ ಸುಖವೋ!
ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಸ್ಪೇನ್ ದೇಶದ ಬ್ಯುನೋಲ್ ಎಂಬಲ್ಲಿ 'ಲಾ ಟೊಮೆಟಿನಾ' ಎಂಬ ಹೆಸರಿನ ವಿಚಿತ್ರ ಹಬ್ಬ ನಡೆಯುತ್ತದೆ. ಈ ಹಬ್ಬ ಆರಂಭವಾದದ್ದು 1944 ರಲ್ಲಿ. ಪ್ಲಾಜಾ ಡೆಲ್ ಪೆಬ್ಲೋ ಪಟ್ಟಣದ ಮುಖ್ಯ ಚೌಕದಲ್ಲಿ ಪಡ್ಡೆ ಹುಡುಗರ ಎರಡು ಗುಂಪುಗಳು ಜಗಳವಾಡಿದವು. ಆಗ ಅವರು ಆಯುಧವಾಗಿ ಬಳಸಿದ್ದು ಟೊಮೆಟೊ ಹಣ್ಣುಗಳನ್ನು!
Recommended Video
ಅದರ ಸ್ಮರಣಾರ್ಥವಾಗಿ ಈ ಹಬ್ಬ ಆಚರಣೆಗೆ ಬಂದಿದೆಯಂತೆ. ಈ ಬಾರಿ ಕೊರೊನಾವೈರಸ್ ದೆಸೆಯಿಂದ ಹಲವೆಡೆ ಈ ಆಚರಣೆ ರದ್ದಾಗಿದೆ.
ಈ ಹಬ್ಬಕ್ಕೂ ಒಂದು ರೀತಿ ನೀತಿ ಇದೆ. ಹಬ್ಬದ ದಿನ ಮುಂಜಾನೆಯಿಂದಲೇ ತಯಾರಿಗಳು ನಡೆಯುತ್ತವೆ. ಮಧ್ಯಾಹ್ನದ ಹೊತ್ತಿಗೆ ದೊಡ್ಡ ಟ್ರಕ್ಗಳು ಟನ್ಗಟ್ಟಲೆ ಟೊಮೆಟೊಗಳನ್ನು ತಂದು ನೆಲದಲ್ಲಿ ಸುರಿಯುತ್ತವೆ. ಅನಂತರ ಹೊಡೆದಾಟ ಆರಂಭ!... ಸೇರಿದ್ದವರೆಲ್ಲ ಕೈಗೆ ಸಿಕ್ಕ ಟೊಮೆಟೊಗಳನ್ನು ಎದುರಿದ್ದವರ ಮೇಲೆ ಎಸೆಯುತ್ತಾರೆ.

ಕ್ಷಣಮಾತ್ರದಲ್ಲಿ ಸುತ್ತಲೂ ಟೊಮೆಟೊ ರಸದ ಕೆಂಪು ಕೊಳವೇ ನಿರ್ಮಾಣವಾಗುತ್ತದೆ. ಅದರ ಮೇಲೇ ಜನರು ಹೊರಳಾಡಿ ಖುಷಿಪಡುತ್ತಾರೆ. ನಿಯಮದಂತೆ ಚೆನ್ನಾಗಿ ಕಳಿತ ಟೊಮೆಟೊಗಳನ್ನು ಮಾತ್ರ ಕೈಯಿಂದ ಮುದ್ದೆಮಾಡಿ ಎಸೆಯಬೇಕು. ಎದುರಿದ್ದವರಿಗೆ ಪೆಟ್ಟಾಗುವಂತೆ ರಭಸದಿಂದ ಎಸೆಯಬಾರದು. ಈ ಎಲ್ಲಾ ನಿಯಮಗಳನ್ನು ಪಾಲಿಸುವುದಾದರೆ ಯಾರು ಬೇಕಿದ್ದರು ಟೊಮೆಟೊ ಎಸೆಯೋ ಹಬ್ಬದಲ್ಲಿ ಪಾಲ್ಗೊಳ್ಳಬಹುದು.

ಕೇವಲ ಒಂದು ಗಂಟೆ ಹೊತ್ತು ನಡೆಯುವ ಈ ಹಬ್ಬವನ್ನು ನೋಡಲು ಜಗತ್ತಿನ ಮೂಲೆ ಮೂಲೆಯಿಂದ ಪ್ರವಾಸಿಗರು ಬರುತ್ತಾರೆ. ಟೊಮೆಟೊ ಎಸೆಯೋದ್ರಲ್ಲೂ ಅದೇನ್ ಸುಖವೋ...!
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications