Israel-Lebanon War: ಲೆಬನಾನ್ ರಾಜಧಾನಿಯಲ್ಲಿ ನರಕ ಸೃಷ್ಟಿ, ನಡುಗುತ್ತಿರುವ ಜನ...
ಲೆಬನಾನ್ ನಡುಗುತ್ತಿದೆ, ಹಿಜ್ಬುಲ್ಲಾ & ಇಸ್ರೇಲ್ ನಡುವಿನ ಘೋರ ಕಾಳಗದಲ್ಲಿ ಈಗ ಅಲ್ಲಿ ಮಹಾನ್ ವಿನಾಶವೇ ಸೃಷ್ಟಿಯಾಗುತ್ತಿದೆ. ಒಂದು ಕಡೆ ದೇಶ ಬಿಟ್ಟು ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದು ಕಡೆ ದೇಶದಲ್ಲಿ ಉಳಿದರೆ ಜೀವ ಇರುತ್ತೋ? ಇಲ್ವೋ? ಎಂಬ ಭಯ ಕೂಡ ಆವರಿಸಿದೆ. ಹೀಗಾಗಿ ಜನರು ಕೂಡ ನಲುಗಿ ಹೋಗಿರುವ ಸಮಯದಲ್ಲೇ ನಿನ್ನೆ ದಿಢೀರ್ ಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ, 22 ಜನರು ಮೃತಪಟ್ಟಿದ್ದರೆ ಈಗ 117 ಜನರಿಗೆ ಗಾಯವಾಗಿದೆ ಎಂಬ ಮಾಹಿತಿ ಸಂಚಲನ ಸೃಷ್ಟಿ ಮಾಡುತ್ತಿದೆ.
ಗಾಜಾ ನಂತರ ಇದೀಗ ಲೆಬನಾನ್ ವಿರುದ್ಧ ಕೂಡ ಇಸ್ರೇಲ್ ಸೇನೆ ರೊಚ್ಚಿಗೆದ್ದು ದಾಳಿಯನ್ನ ನಡೆಸುತ್ತಿದೆ. ಇದಕ್ಕಾಗಿ ಇಸ್ರೇಲ್ ಮಿಲಿಟರಿ ಇದೀಗ ಪಕ್ಕಾ ಪ್ಲಾನ್ ಮಾಡಿ ಮುಂದೆ ನುಗ್ಗಿದೆ. ಇಸ್ರೇಲ್ ಸೇನೆಯ ಆರ್ಭಟದ ಎದುರು ಈಗಾಗಲೇ ಹಿಜ್ಬುಲ್ಲಾದ ಹಲವು ಮುಖಂಡರು ಜೀವ ಬಿಟ್ಟಿದ್ದಾರೆ. ಲೆಬನಾನ್ ವಿರುದ್ಧ ಅದರಲ್ಲೂ ಲೆಬನಾನ್ ರಾಜಧಾನಿ ಮೇಲೆ ಇಸ್ರೇಲ್ ಸೇನೆ ಅತಿ ಭಯಾನಕ ಬಾಂಬ್ & ಮಿಸೈಲ್ ದಾಳಿ ನಡೆಸುತ್ತಿದೆ. ಮತ್ತೊಂದು ಕಡೆ ಇದೀಗ ಅಲ್ಲಿ ಭೂಸೇನೆ ಮುಖಾಂತರ ಕೂಡ ಕಾರ್ಯಾಚರಣೆ ನಡೆಸುತ್ತಿದೆ ಇಸ್ರೇಲ್ ಮಿಲಿಟರಿ.

ಹೀಗಾಗಿಯೇ ಪರಿಸ್ಥಿತಿ ಕೂಡ ಸೂಕ್ಷ್ಮವಾಗಿದ್ದು ಯಾವ ಕ್ಷಣದಲ್ಲಿ ಎಲ್ಲೆಲ್ಲಿ ದಾಳಿ ನಡೆಯುತ್ತೋ? ಅಂತಾ ಜನ ಕೂಡ ಯೋಚಿಸುವ ಸ್ಥಿತಿ ಇದೆ. ಮತ್ತೊಂದು ಕಡೆ ದಿಢೀರ್ ಲೆಬನಾನ್ ಕ್ಯಾಪಿಟಲ್ ಸಿಟಿ ಅಂದ್ರೆ ರಾಜಧಾನಿ ಬೈರೂತ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಸೇನೆ 22 ಜನರ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ಘಟನೆಯಲ್ಲಿ 117 ಜನರಿಗೆ ಈಗ ಗಾಯವಾಗಿದ್ದು, ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಲಕ್ಷಾಂತರ ಜನರು ಈ ಬೆಳವಣಿಗೆ ಹಿನ್ನೆಲೆ ಲೆಬನಾನ್ ದೇಶ ಬಿಟ್ಟು ಹೋಗಿದ್ದಾರೆ.
ಹಿಜ್ಬುಲ್ಲಾ ಮುಖಂಡರ ಜಾಗಗಳು ಪತ್ತೆ?
ಇಸ್ರೆಲ್ ಸೇನೆ ಇದೀಗ ಹಿಜ್ಬುಲ್ಲಾ ಮುಖಂಡರು ಅಂದರೆ, ಹಿಜ್ಬುಲ್ಲಾದ ಕಮಾಂಡರ್ಗಳು & ಮುಂಚೂಣಿ ನಾಯಕರನ್ನ ಟಾರ್ಗೆಟ್ ಮಾಡಿ ಈ ದಾಳಿ ನಡೆಸುತ್ತಿದೆ ಎನ್ನಲಾಗಿದೆ. ಹೀಗಿದ್ದರೂ ಲೆಬನಾನ್ ದೇಶದ ಅಪಾರ್ಟ್ಮೆಂಟ್ ಅಂದ್ರೆ ಜನರು ವಾಸ ಮಾಡುವ ಜಾಗಗಳ ಮೇಲೆಯೇ ಹೆಚ್ಚಿನ ಪ್ರಮಾಣದ ದಾಳಿ ನಡೆಯುತ್ತಿದೆ. ಹೀಗಾಗಿ ಸಾಮಾನ್ಯ ಜನರು ಸಾಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಸ್ರೇಲ್ ಸೇನೆ ತನ್ನ ದಾಳಿಯನ್ನು ನಿಲ್ಲಿಸಬೇಕು. ಸಾಮಾನ್ಯ ಜನರು ಅಲ್ಲಿಂದ ಹೋಗಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಈ ಗೊಂದಲ ಹೆಚ್ಚಾದ ಹಿನ್ನೆಲೆ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಅನಿಶ್ಚಿತ ವಾತಾವರಣ
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆದಷ್ಟು ಬೇಗ ಯುದ್ಧಕ್ಕೆ ಬ್ರೇಕ್ ಬೀಳಬೇಕಿದೆ. ಇಲ್ಲವಾದ್ರೆ ದಾಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಾಗೇ ಇನ್ನೊಂದು ಕಡೆ ಈ ದಾಳಿ ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಕೈಮೀರಿ ಹೋಗಿ, ಇರಾನ್ ಕೂಡ ಯುದ್ಧಕ್ಕೆ ನೇರ ಎಂಟ್ರಿ ತೆಗೆದುಕೊಂಡರೆ ಪರಮಾಣು ಬಾಂಬ್ ಬಳಕೆ ಆಗುತ್ತಾ? ಎಂಬ ಭೀತಿ ಎದುರಾಗಿದೆ. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಇದೀಗ ಅನಿಶ್ಚಿತ ವಾತಾವರಣ ಸೃಷ್ಟಿ ಮಾಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications