15 ದೇಶಗಳ ಪ್ರವಾಸಿಗರಿಗೆ ಬಾಗಿಲು ತೆಗೆದ ಐರ್ಲೆಂಡ್
ಐರ್ಲೆಂಡ್, ಜುಲೈ 23: ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಂಡಿರುವ ಬೆನ್ನಲ್ಲೇ, 15 ದೇಶಗಳ ಪ್ರವಾಸಿಗರಿಗೆ ಐರ್ಲೆಂಡ್ ಬಾಗಿಲು ತೆಗೆದಿದೆ. ಈ 15 ದೇಶ, ಪ್ರದೇಶಗಳಿಂದ ಬರುವವರು ಐರ್ಲೆಂಡ್ ದೇಶಕ್ಕೆ ಬಂದ ಬಳಿಕ 14ದಿನಗಳ ಸ್ವಯಂ ಕ್ವಾರಂಟೈನ್ ಗೆ ಒಳಪಡಬೇಕಾಗಿಲ್ಲ.
Recommended Video
ಮಾಲ್ಟಾ, ಫಿನ್ಲೆಂಡ್, ನಾರ್ವೆ, ಇಟಲಿ, ಹಂಗೇರಿ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ಸೈಪ್ರಸ್, ಸ್ಲೋವಕಿಯಾ, ಗ್ರೀಸ್, ಗ್ರೀನ್ ಲ್ಯಾಂಡ್, ಗಿಬ್ರಾಲ್ಟರ್, ಮೊನಾಕೊ ಹಾಗೂ ಸ್ಯಾನ್ ಮ್ಯಾರಿನೊ ಪ್ರದೇಶಗಳನ್ನು ''ಹಸಿರು ಪಟ್ಟಿ''ಗೆ ಸೇರಿಸಿ ಐರೀಷ್ ಸರ್ಕಾರ ಆದೇಶ ನೀಡಿದೆ.
ಹಸಿರು ಪಟ್ಟಿಯಲ್ಲಿರುವ ಪ್ರದೇಶಗಳು ಐರ್ಲೆಂಡ್ ಗಿಂತ ಕಡಿಮೆ ಪ್ರಮಾಣದಲ್ಲಿ ಸೋಂಕು ಹೊಂದಿದ್ದು, ಯಾವುದೇ ಅಪಾಯವಿಲ್ಲ ಎಂಬ ವರದಿ ಬಂದ ಹಿನ್ನಲೆಯಲ್ಲಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ, ಈ ಪಟ್ಟಿಯಲ್ಲಿ ಎರಡು ವಾರದಲ್ಲಿ ಪರಿಶೀಲಿಸಿ ಬಾಲಾಯಿಸಲಾಗುತ್ತದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಸಿರು ಪಟ್ಟಿಯಿಂದ ಹೊರಗಿರುವ ದೇಶಗಳಿಂದ ಐರ್ಲೆಂಡ್ ಗೆ ಬರುವ ಪ್ರವಾಸಿಗರು ಸಾಮಾನ್ಯ ಆರೋಗ್ಯ ಮಾರ್ಗಸೂಚಿ ಅನುಸರಿಸಿ, 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದು, ಸಂಚಾರ ನಿರ್ಬಂಧಕ್ಕೆ ಬದ್ಧರಾಗಿರಬೇಕು ಎಂದು ಬಿಬಿಸಿ ವರದಿ ಮಾಡಿದೆ.
ಐರ್ಲೆಂಡ್ ನಲ್ಲಿ ಬುಧವಾರದಂದು 17 ಹೊಸ ಪ್ರಕರಣಗಳು ಕಂಡು ಬಂದಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಇಲ್ಲಿ ತನಕ ಐರ್ಲೆಂಡ್ ನಲ್ಲಿ 25,819 ದೃಢಪಟ್ಟ ಪ್ರಕರಣಗಳಿದ್ದು, 1754 ಮಂದಿ ಮೃತಪಟ್ಟಿದ್ದಾರೆ. 701 ಸಕ್ರಿಯ ಪ್ರಕರಣಗಳಿದ್ದು, 23,364 ಮಂದಿ ಗುಣಮುಖರಾಗಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications