ದಯನೀಯ ಸ್ಥಿತಿ ತಲುಪಿದ ಗ್ರೀಸ್ ದೇಶದ ಕಥೆ, ನೂರೆಂಟು ವ್ಯಥೆ
ಸಾಲ ತೆಗೆದು ಕೊಳ್ಳುವಾಗ ಇರುವ ಖುಷಿ ಮತ್ತು ಮಜಾ ಅದನ್ನು ವಾಪಸ್ ಕೊಡುವಾಗ ಇರುವುದಿಲ್ಲ. ಇದು ಜಗತ್ತಿನ ಎಲ್ಲಾ ದೇಶ, ಜನರಿಗೂ ಅನ್ವಯ! ಗ್ರೀಸ್ ದೇಶ ಕೂಡಾ ಇದಕ್ಕೆ ಹೊರತಾಗಿಲ್ಲ.
2001ರಲ್ಲಿ ಯುರೋ ಕರೆನ್ಸಿಯನ್ನು ಗ್ರೀಸ್ ಒಪ್ಪಿಕೊಳ್ಳುವ ಮೊದಲು 'ದ್ರಾಚ್ಮ' (ದ್ರಾಚ್ಮ ಮತ್ತು ಲೆಪ್ಪ ಗ್ರೀಸ್ ದೇಶದ ಕರೆನ್ಸಿಯ ಹೆಸರು) 340 ದ್ರಾಚ್ಮ 75 ಲೆಪ್ಟ ಒಂದು ಯುರೋಗೆ ಸಮವಾಗಿತ್ತು.
ಯುರೋ, ಯೂರೋಪಿಯನ್ ಒಕ್ಕೂಟದ ಕರೆನ್ಸಿಯಾಗಿ ಜನವರಿ 1, 2001ರಿಂದ ಜಾರಿಗೆ ಬಂತು. ಫ್ರಾನ್ಸ್ ಮತ್ತು ಜರ್ಮನಿ ದೇಶಕ್ಕೆ ಇದರಿಂದ ಹೆಚ್ಚಿನ ಏರುಪೇರಾಗಲಿಲ್ಲ. ಆದರೆ ಯುರೋಪಿನ ಇತರ ರಾಷ್ಟ್ರಗಳಾದ ಸ್ಪೇನ್, ಪೋರ್ಚುಗಲ್, ಇಟಲಿ ಸೇರಿದಂತೆ ಇನ್ನಿತರ ದೇಶಗಳಲ್ಲಿ ಆದ ಬದಲಾವಣೆ ರಾತ್ರಿ ಹಗಲಿನಷ್ಟು. (ದಿವಾಳಿಯತ್ತ ಗ್ರೀಸ್)
ಉದಾರಣೆಗೆ 150 ದ್ರಾಚ್ಮಗೆ ಒಂದು ಲೋಟ ಕಾಫಿ ಸಿಗುತಿತ್ತು, ಸ್ಪೇನಿನಲ್ಲಿ 100 ಪೆಸೆಟಾಗೆ (ಯುರೋಗೆ ಮೊದಲು ಸ್ಪ್ಯಾನಿಷ್ ಕರೆನ್ಸಿ, 166.386 ಪೆಸೆಟಾ 1ಯುರೋಗೆ ಸಮ) ಒಂದು ಲೋಟ ಕಾಫಿ ಸಿಗುತ್ತಿತ್ತು.
ಯುರೋ ಬಂದ ನಂತರ ಒಂದು ಯುರೋ ಅಂದರೆ ವಸ್ತುವಿನ ಬೆಲೆ ನೂರು ಪಟ್ಟು ಹೆಚ್ಚಿತು. ಒಂದು ಲೆಕ್ಕದಲ್ಲಿ ಯುರೋ ಜೋನ್ ಹುಟ್ಟವಾಗಲೆ ಅಂಗವಿಕಲವಾಗಿತ್ತು ಅನ್ನಬಹುದು.
28 ದೇಶಗಳ ಯುರೋ ಜೋನ್ ಅನ್ನು ವಿತ್ತೀಯವಾಗಿ ಭಾಗ ಮಾಡುವುದಾದರೆ ಫ್ರಾನ್ಸ್ ಮತ್ತು ಜರ್ಮನಿ 56 ಭಾಗ, ಸ್ಪೇನ್ 11 ಭಾಗ, ಇಟಲಿ 9 ಭಾಗ, ಪೋರ್ಚುಗಲ್ ಹಾಗು ಗ್ರೀಸ್ ತಲಾ 2 ಭಾಗ, ಉಳಿದ 22 ದೇಶಗಳ ಒಟ್ಟು ವಿತ್ತೀಯ ಪಾಲುದಾರಿಕೆ 100ಕ್ಕೆ 20.
2003ರಿಂದ ಉಚ್ಚ್ರಾಯ ಸ್ಥಿತಿ ತಲುಪಿದ ಯುರೋ ಜೋನ್ ನಲ್ಲಿ ಮುಕ್ಕಾಲು ಪಾಲು ಆಡಳಿತ ಜರ್ಮನಿ ಹಾಗು ಫ್ರಾನ್ಸ್ ದೇಶದ್ದು, ಇತರ ಯೂರೋಪಿಯನ್ ದೇಶಗಳು ತಮ್ಮ ಮಟ್ಟಕ್ಕೆ ಬರಬೇಕೆಂಬ ಘನ ಉದ್ದೇಶದಿಂದ ಈ ಎರಡು ದೇಶಗಳು ಸಾಲ ಕೊಡತೊಡಗಿದವು. ( ಗ್ರೀಸ್ ಜನಮತಗಣನೆ)
ಐಷಾರಾಮಿ ಕಟ್ಟಡಗಳು, ರಸ್ತೆಗಳು, ಪಾರ್ಕುಗಳು, ಹೀಗೆ ಬೇಕೇ ಬೇಡವೇ.. ಎನ್ನುವ ವಿವೇಚನೆ ಇಲ್ಲದೆ, ಲಂಗುಲಗಾಮಿ ಇಲ್ಲದೆ ಕೊಟ್ಟ ದುಡ್ಡ ಖರ್ಚು ಮಾಡಿದ್ದರ ಫಲ 2008ರಿಂದ ಉಲ್ಟಾ ಹೊಡೆಯಲು ಶುರುವಾಯಿತು.
ಇದೇ ವಿತ್ತೀಯ ಕೊರತೆ ಇಂದು ಗ್ರೀಸ್ ಒಳಗೊಂಡಂತೆ ಅನೇಕ ಯುರೋಪ್ ದೇಶಗಳ ದಿವಾಳಿ ಸ್ಥಿತಿಗೆ ತಂದು ನಿಲ್ಲಲು ಪ್ರಮುಖ ಕಾರಣ. ಮುಂದೆ ಓದಿ..

ಸಾಲ ಕೊಟ್ಟವರಿಂದ ಷರತ್ತು
ಸಾಲ ಕೊಟ್ಟ ದೇಶದವರು ಷರತ್ತು ವಿಧಿಸತೊಡಗಿದರು, ಮಿತವ್ಯಯ ದಿಂದ ಬೇಸತ್ತ ಜನತೆ ಸೋಷಿಯಲಿಸ್ಟ್ ಪಾರ್ಟಿಯನ್ನು ಆರಿಸಿದರು. ಹೆಚ್ಚಿದ ಯೂರೋಪಿಯನ್ ಯೂನಿಯನಿನ ಒತ್ತಡ ತಾಳಲಾರದೆ ಕಳೆದ ಭಾನುವಾರ ಜುಲೈ ಐದರಂದು ಯೂರೋಪಿಯನ್ ಯೂನಿಯನಿನ ಷರತ್ತು ಗಳನ್ನು ಪಾಲಿಸಬೇಕೆ ಬೇಡವೇ ಎನ್ನುವ ಬಗ್ಗೆ ಸಾರ್ವತ್ರಿಕ ಜನಾಭಿಪ್ರಾಯ ಕೇಳಲಾಯಿತು. ಅಧಿಕಾರರೂಢ ಪಕ್ಷ ಬೇಡ 'ನೋ' ಎನ್ನುವುದರ ಪರವಾಗಿತ್ತು ಮತ್ತು ಶೇ. 61.31 ಜನತೆ ಪಕ್ಷದ ಪರವಾಗಿ ಮತಚಲಾಯಿಸಿದರು.

ವಿತ್ತಸಚಿವರ ರಾಜೀನಾಮೆ
ಜನರ ಒಲವು ತಮ್ಮ ಪರವಾಗಿದ್ದರೂ, ವಿತ್ತ ಮಂತ್ರಿ ಯಾನಿಸ್ ವರೌ ಫಾಕಿಸ್ ರಾಜೀನಾಮೆ ನೀಡಿದರು. ಯೂರೋಪಿನ್ ಯೂನಿಯನ್ ಹಾಗೂ ಯೂರೋಪಿಯನ್ ಬ್ಯಾಂಕ್ ನಿಂದ ಸದಾ ಒತ್ತಡ ಹಾಕುವ ಮತ್ತು ಅದನ್ನು ಹಾಗೇ ಮುಂದುವರಿಸುವ ರಾಜಕೀಯ ನಡೆಯಿಂದ ಬೇಸತ್ತು ಹಣಕಾಸು ಸಚಿವರು ಈ ನಿರ್ಧಾರಕ್ಕೆ ಬಂದರು. " ಸಾಲ ಕೊಟ್ಟವರು ಭಯೋದ್ಪಾದಕರು, greece creditors are terrorists' ಎನ್ನುವ ಹೇಳಿಕೆಯನ್ನು ವಿತ್ತಸಚಿವರು ನೀಡಿದರು.

ವಿತ್ತೀಯ ಪರಿಣತರ ಪ್ರಕಾರ
ವಿತ್ತೀಯ ಪರಿಣಿತರ ಪ್ರಕಾರ ಗ್ರೀಸ್ ಯುರೋ ಜೋನ್ ನಿಂದ ಹೊರ ಹೋಗಬಹುದು, ದ್ರಾಚ್ಮ ಕರೆನ್ಸಿ ಮತ್ತೆ ಚಲಾವಣೆಗೆ ತರಬಹುದು. ಇದಕ್ಕೆ expert ಗಳು ನೀಡುವ ಕಾರಣ, ಮುಂದಿನ ಸ್ಲೈಡಿನಲ್ಲಿ, ನೋಡಿ..

ದ್ರಾಚ್ಮ ಮತ್ತೆ ಗ್ರೀಸ್ ದೇಶದ ಕರೆನ್ಸಿಯಾದರೆ?
* ದ್ರಾಚ್ಮ ಮತ್ತೆ ಗ್ರೀಸ್ ದೇಶದ ಕರೆನ್ಸಿಯಾದರೆ, ಜಗತ್ತಿನ ಇತರ ಕರೆನ್ಸಿ ಗಳ ಮುಂದೆ ಅದನ್ನು devalue (ಮೌಲ್ಯ ಕುಸಿತ ) ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ.
* ಹೀಗೆ ಮೌಲ್ಯ ಕುಸಿತ ಮಾಡುವುದರಿಂದ, ಜನರ ಖರೀದಿಸುವ ಶಕ್ತಿ ಹೆಚ್ಚುತ್ತದೆ .
* ಅಪಮೌಲ್ಯ ದ್ರಾಚ್ಮ ಅಂತರರಾಷ್ಟೀಯ ಹೂಡಿಕೆದಾರರ ಸೆಳೆಯಬಹುದು.
* ವಸ್ತು ಹಾಗೂ ಸೇವೆಯ ಶುಲ್ಕ ಕಡಿಮೆ ಆಗುವುದರಿಂದ ದೇಶದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತದೆ, ಹಾಗೂ ಆ ಮೂಲಕ ದೇಶದಲ್ಲಿ ಹಣದ ಹರಿವು ಹೆಚ್ಚುತ್ತದೆ .
* 100 ಯುರೋ ಏನು ಖರೀದಿಸ ಬಹುದೋ ಅದನ್ನು 100 ದ್ರಾಚ್ಮದಿಂದ ಖರೀದಿಸ ಬಹುದಾದರೆ ಯಾರು ಬೇಡ ಎನ್ನುವರು ?

ಗ್ರೀಸ್ ಮುಂದಿನ ಹಾದಿ ಕಠಿಣ
ಹೊಸ ದ್ರಾಚ್ಮ ಮುದ್ರಣ, ಅದರ ಚಲಾವಣೆ, ಅದರ ಮೌಲ್ಯ ಕಟ್ಟುವುದು, ಇವೆಲ್ಲಾ ಏನಿಲ್ಲ ಅಂದರೂ ಆರೇಳು ತಿಂಗಳು ಇದಕ್ಕೆ ತಗಲಬಹುದು. ಅದಾದ ನಂತರ ಜನರಲ್ಲಿ ದ್ರಾಚ್ಮದ ಬಗ್ಗೆ ವಿಶ್ವಾಸ ತುಂಬುವ ಕೆಲಸ, ಹೂಡಿಕೆದಾರರ ವಿಶ್ವಾಸಗಳಿಸುವ ಕೆಲಸ. ಪಡೆದ ಸಾಲವನ್ನು ಇಂದಲ್ಲ ನಾಳೆ ವಾಪಸ್ಸು ಕೊಡಲೇ ಬೇಕು, ಒಟ್ಟಿನಲ್ಲಿ ಗ್ರೀಸ್ ದೇಶ ಹಾಗು ಅಲ್ಲಿನ ಜನತೆ ಈಗಿನ ಪರಿಸ್ಥಿತಿ ಮತ್ತು ಮುಂದೆ ಸವೆಸಬೇಕಾದ ಹಾದಿ ಬಹು ಕಠಿಣ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications