ವಿಶ್ವಕಪ್: ಸ್ಪೇನ್ ವಿರುದ್ಧ ಸೇಡು ತೀರಿಸಿಕೊಂಡ ಡಚ್ಚರು
ಸಾಲ್ವಡಾರ್, ಜೂ.14: 2010ರ ವಿಶ್ವಕಪ್ ಫೈನಲ್ ಪಂದ್ಯ ಸೋತಿದ್ದ ನೆದರ್ಲೆಂಡ್ ತಂಡ ನಾಲ್ಕು ವರ್ಷಗಳ ನಂತರ ಬ್ರೆಜಿಲ್ಲಿನಲ್ಲಿ ತನ್ನ ಸೇಡು ತೀರಿಸಿಕೊಂಡಿದೆ. ಹಾಲಿ ಚಾಂಪಿಯನ್ ಸ್ಪೇನ್ ತಂಡ 1-5 ಹೀನಾಯ ಸೋಲು ಕಂಡು ತಲೆ ತಗ್ಗಿಸಿದೆ.
2010 ರಲ್ಲಿ ಏಕೈಕ ಗೋಲು ಹೊಡೆದಿದ್ದ ಸ್ಪೇನ್ 20104ರಲ್ಲಿ ಹಾಲೆಂಡ್ ವಿರುದ್ಧ ಪಂದ್ಯದಲ್ಲೂ ಏಕೈಕ ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು. ವಿವಾದಿತ ಫಾರ್ವರ್ಡ್ ಡಿಯಾಗೋ ಕೋಸ್ಟಾ ಮೂಲಕ ಸಿಕ್ಕ ಪೆನಾಲ್ಟಿ(27ನೇ ನಿಮಿಷ )ಯನ್ನು ಗೋಲಾಗಿ ಕ್ಸಾವಿ ಅಲಾನ್ಸೊ ಪರಿವರ್ತಿಸಿ ಲೀಡ್ ತಂದುಕೊಟ್ಟರು. ಆದರೆ, ಮುಂದೆ ನಡೆದಿದ್ದೆಲ್ಲ ಇತಿಹಾಸ. ರಾಬಿ, ರಾಬೆನ್ ಜೋಡಿ ದಾಳಿಗೆ ಸಿಲುಕಿದ ಸ್ಪೇನ್ ಗೂಳಿಗಳು ನಲುಗಿ ಬಿಟ್ಟರು. [ಕೋಸ್ಟಾ ದೇಶದ್ರೋಹಿಯೇ?]
ಪಂದ್ಯದ 44ನೇ ನಿಮಿಷದಲ್ಲಿ ರಾಬಿನ್ ವಾನ್ ಪರ್ಸಿ ಹೆಡ್ ಮಾಡುವ ಮೂಲಕ ಅದ್ಭುತ ಗೋಲು ಹೊಡೆದು ಮಧ್ಯಂತರ ವಿರಾಮ ಹಾಡಿದರು. ಎರಡನೇ ಅವಧಿಯಲ್ಲಿ ಸ್ಪೆನ್ ಆಕ್ರಮನಕಾರಿ ಆಟ ಮರೆತ್ತಿದ್ದು ಹಾಲೆಂಡ್ ಗೆ ವರವಾಯಿತು. ವ್ರಿಜ್(65), ರಾಬೆನ್(80ನೇ ನಿಮಿಷ), ವ್ಯಾನ್ ಪರ್ಸಿ(44, 72) ನಾಲ್ಕು ಗೋಲು ಬಾರಿಸಿದ ಡಚ್ಚರು ಅಂತಿಮವಾಗಿ ಪಂದ್ಯವನ್ನು 5-1 ಅಂತರದಿಂದ ಗೆದ್ದು ಬೀಗಿದರು.

ಸ್ಪೇನ್ ಎಡವಿದ್ದು ಹೇಗೆ?: ಸ್ಪೇನ್ ಆಕ್ರಮಣಕಾರ ಕೊರತೆ ಎದುರಿಸಿದ್ದು ಹಾಗೂ ಭದ್ರತಾ ಪಡೆ ಕಡೆಗಣಿಸಿದ್ದು ಎಡವಲು ಕಾರಣವಾಯಿತು. ಈ ಹುಳುಕನ್ನು ಗುರುತಿಸಿದ ಡಚ್ ಫಾರ್ವರ್ಡ್ ಆಟಗಾರರು ಸುಲಭವಾಗಿ ರಕ್ಷಣಾ ಪಡೆ ಛೇದಿಸಿ ಮುನ್ನುಗಿ ಗೋಲು ಗಳಿಸಿದರು. ಇಲ್ಲದಿದ್ದರೆ ನಂ.1 ಗೋಲಿ ಐಕಾರ್ ಕ್ಯಾಸಿಲಾಸ್ ಇಷ್ಟು ಕಳಪೆ ಪ್ರದರ್ಶನ ನೀಡಲು ಸಾಧ್ಯವಿರಲಿಲ್ಲ.
ಡೇವಿಡ್ ವಿಲ್ಲಾ ಅಥವಾ ಟೊರೆಸ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ನಿಜವಾಯಿತು. ಟೊರೆಸ್ ಮೈದಾನಕ್ಕೆ ಬದಲಿ ಆಟಗಾರನಾಗಿ ಇಳಿದಿದ್ದು 62ನೆ ನಿಮಿಷದ ನಂತರ... ಆ ವೇಳೆಗಾಗಲಿ ಡಚ್ಚರು ಡಿಚ್ಚಿ ಹೊಡೆಯಲು ಆರಂಭಿಸಿದ್ದರು. ಸ್ಪೇನ್ ಮುಂಪಡೆಯಲ್ಲಿ ಇನಿಯಾಸ್ಟಗೆ ಸೂಕ್ತ ಬೆಂಬಲ ಇರಲಿಲ್ಲ ಹೀಗಾಗಿ ದಾಳಿ ಮಾಡಲು ಸಾಧ್ಯವಾಗಲಿಲ್ಲ. [ತಂತ್ರಗಾರಿಕೆ ಹೇಗಿತ್ತು?]
ಸ್ಪೇನ್ vs ನೆದರ್ಲೆಂಡ್ ಅಂಕಿ ಅಂಶ:
* ಗೋಲ್ ಪೋಸ್ಟ್ ನತ್ತ ಒದ್ದಿದ್ದು(ಆನ್ ಟಾರ್ಗೆಟ್): ಸ್ಪೇನ್ 9(6) >> ನೆದರ್ಲೆಂಡ್ 6(11)
* ಫೌಲ್ಸ್: ಸ್ಪೇನ್ 5 >> ನೆದರ್ಲೆಂಡ್ 18
* ಕಾರ್ನರ್: ಸ್ಪೇನ್ 4 >> ನೆದರ್ಲೆಂಡ್ 1
* ಚೆಂಡಿನ ಹಿಡಿತ: ಸ್ಪೇನ್ 57% >> ನೆದರ್ಲೆಂಡ್ 43%
* ಆಫ್ ಸೈಡ್ : ಸ್ಪೇನ್ 5 >> ನೆದರ್ಲೆಂಡ್ 5
* ಹಳದಿ ಕಾರ್ಡ್: ಸ್ಪೇನ್ 1 >> ನೆದರ್ಲೆಂಡ್ 3
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications