ಭಾರತದ ಸುತ್ತಲೂ ಬಲೆ ಎಣೆಯುತ್ತಿದೆಯಾ ಡ್ರ್ಯಾಗನ್ ಚೀನಾ?
ಶ್ರೀಲಂಕಾ: ಅತ್ತ ಭಾರತದ ಜೊತೆ ಸ್ನೇಹ ಗಟ್ಟಿಗೊಳಿಸಲು ಚೀನಾಗೆ ರಷ್ಯಾ ಕಿವಿಮಾತು ಹೇಳುತ್ತಿದ್ದರೆ, ಮತ್ತೊಂದು ಕಡೆ ಚೀನಾ ಭಾರತದ ವಿರುದ್ಧ ಸಮರ ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಶ್ರೀಲಂಕಾ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು, ಭಾರತದ ಸುತ್ತಲೂ ಚೀನಾ ಬಲೆ ಎಣೆಯುತ್ತಿದೆಯಾ? ಎಂಬ ಅನುಮಾನ ಶುರುವಾಗಿದೆ. ಈ ಮೂಲಕ ಹಂಬಂಟೋಟ ಬಂದರು ಹಿಡಿತಕ್ಕೆ ಪಡೆದ ನಂತರ ಮತ್ತೊಂದು ಕುತಂತ್ರ ಶುರುವಾದಂತೆ ಕಾಣುತ್ತಿದೆ.
ಶ್ರೀಲಂಕಾ ಸಾಲದ ಸುಳಿಗೆ ಸಿಲುಕಿ ಚೀನಾ ಕೈಗೆ ಸಿಲುಕಿರುವುದು ಗೊತ್ತಿರುವ ಸಂಗತಿ. ಪರಿಸ್ಥಿತಿ ಹೀಗಿರುವಾಗ ಚೀನಾ ಮಾತು ಕೇಳದೆ ಶ್ರೀಲಂಕಾಗೆ ಬೇರೆ ದಾರಿ ಇಲ್ಲ. ತನ್ನ ಪ್ರಮುಖ ಬಂದರು ಪ್ರದೇಶ ಹಂಬಂಟೋಟ ಪೋರ್ಟ್ ಅನ್ನು ಚೀನಾಗೆ ಈಗಾಗಲೇ ಬಾಡಿಗೆ ಕೊಟ್ಟಿದೆ ಶ್ರೀಲಂಕಾ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀಲಂಕಾದಲ್ಲಿ ರಾಡಾರ್ ಕೇಂದ್ರ ಸ್ಥಾಪಿಸಲು ಚೀನಾ ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಅಕಸ್ಮಾತ್ ಇದು ಸಾಧ್ಯವಾದರೆ ಭಾರತದ ಭವಿಷ್ಯಕ್ಕೆ ಗಂಡಾಂತರ ಎದುರಾಗುವುದು ಪಕ್ಕಾ.

ಭಾರತದ ಮೇಲೆ ಕಣ್ಣು: ಚೀನಾ ರಾಡಾರ್ ಕೇಂದ್ರವನ್ನ ಶ್ರೀಲಂಕಾ ನೆಲದಲ್ಲಿ ಸ್ಥಾಪಿಸಿದರೆ, ಭಾರತದ ದಕ್ಷಿಣ ಭಾಗದ ಮೇಲೆ ಹದ್ದಿನ ಕಣ್ಣಿಡಲಿದೆ. ಅದರಲ್ಲೂ ತಮಿಳುನಾಡಿನ ಕೂಡಂಕುಳಂ ಹಾಗೂ ಕಲ್ಪಾಕಂ ಅಣುಸ್ಥಾವರಗಳ ಮೇಲೂ ಚೀನಾ ದೃಷ್ಟಿ ನೆಡಲು ಇದರಿಂದ ಸಾಧ್ಯವಾಗಲಿದೆ. ಪ್ರಮುಖವಾಗಿ ಭಾರತ ಸೇನೆ ಹಿಂದೂ ಮಹಾಸಾಗರದ ಮೇಲೆ ಹೊಂದಿರುವ ಹಿಡಿತ ತಪ್ಪಿಸುವುದೇ ಚೀನಾ ಉದ್ದೇಶವಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಂಬಂಟೋಟ ಬಂದರನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಜೊತೆಗೆ ರಾಡಾರ್ ಕೇಂದ್ರವನ್ನೂ ಭಾರತದ ಪಕ್ಕದಲ್ಲೇ ಚೀನಾ ಸ್ಥಾಪಿಸಿದರೆ ಕಷ್ಟಕಷ್ಟ.
ಹೆಜ್ಜೆ ಹೆಜ್ಜೆಗೂ ಮುಳ್ಳು: ಶ್ರೀಲಂಕಾದಲ್ಲಿ ಚೀನಾ ರಾಡಾರ್ ಕೇಂದ್ರ ಸ್ಥಾಪಿಸಲು ಯಶಸ್ವಿಯಾದರೆ, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಕೂಡ ಕಣ್ಣು ಬೀಳಲಿದೆ. ಭಾರತದ ಜಲಾಂತರ್ಗಾಮಿ ನೌಕೆಗಳು ಹಾಗೂ ಯುದ್ಧ ನೌಕೆಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಡೆ ಚಲಿಸಿದರೂ ಚೀನಾಗೆ ಗೊತ್ತಾಗಲಿದೆ. ಈ ಮೂಲಕ ಭಾರತದ ಹಿಡಿತದಲ್ಲಿರುವ ಪ್ರದೇಶಗಳು ಕೂಡ ಚೀನಾ ಕಣ್ಣಿಗೆ ಬೀಳಲಿವೆ. ಸುಲಭವಾಗಿ ದಕ್ಷಿಣ ಭಾರತದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಗುರುತಿಸಲಿದೆ ಚೀನಾ.

ಅಮೆರಿಕ ಸೇನೆಗೂ ಎಫೆಕ್ಟ್: ಶ್ರೀಲಂಕಾದಲ್ಲಿ ರಾಡಾರ್ ಸ್ಥಾಪಿಸುವುದರಿಂತ ಭಾರತದ ಮೇಲೆ ಮಾತ್ರವಲ್ಲ, ಅಮೆರಿಕದ ಸೇನೆ ಮೇಲೂ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಚೀನಾ ಲೆಕ್ಕಾಚಾರ. ಹಿಂದೂ ಮಹಾಸಾಗರದ ವಿಚಾರದಲ್ಲಿ ಚೀನಾಗೆ ಬಿಸಿ ಮುಟ್ಟಿಸುವ ಅಮೆರಿಕಗೆ ಈ ಮೂಲಕ ಪಾಠ ಕಲಿಸುವುದು ಚೀನಾ ಲೆಕ್ಕಾಚಾರ. ಹೀಗಾಗಿ ಹೇಗಾದರೂ ಮಾಡಿ ಶ್ರೀಲಂಕಾ ಸರ್ಕಾರದ ಮನವೊಲಿಸಿ, ದ್ವೀಪರಾಷ್ಟ್ರದ ನೆಲದಲ್ಲಿ ರಾಡಾರ್ ಸ್ಥಾಪಿಸಲು ಸರ್ಕಸ್ ಮಾಡುತ್ತಿದೆ ಚೀನಾ.
ಬಂದರು ಬಾಡಿಗೆಗೆ: ಅಂದಹಾಗೆ 2017ರಲ್ಲಿ ಹಂಬಂಟೋಟ ಬಂದರನ್ನು 99 ವರ್ಷಕ್ಕೆ ಬಾಡಿಗೆಗೆ ಪಡೆದ ಚೀನಾ, ಸುಮಾರು 1.12 ಬಿಲಿಯನ್ ಡಾಲರ್ ಪಾವತಿ ಮಾಡಿತ್ತು. ಆರ್ಥಿಕವಾಗಿ ದಿವಾಳಿಯಾದ ಶ್ರೀಲಂಕಾಗೆ ಇದು ಅನಿವಾರ್ಯವೂ ಆಗಿತ್ತು. ಆದರೆ ಈಗ ಚೀನಾ ಮಾಡುತ್ತಿರುವ ಕೆಲಸ, ಲಂಕಾದ ರಾಜಕೀಯ ತಜ್ಞರಿಗೂ ಇಷ್ಟವಾಗುತ್ತಿಲ್ಲ. 'ಭಾರತ ಮೊದಲು' ಎಂಬ ತನ್ನ ನಿಲುವಿಗೆ ಶ್ರೀಲಂಕಾ ಬದ್ಧವಾಗಿರಲಿ ಎಂಬ ಒತ್ತಾಯ ರಾಜಕೀಯ ತಜ್ಞರಿಂದಲೂ ಕೇಳಿಬಂದಿದೆ.
ಚೀನಾ ಅದೆಷ್ಟೇ ಚಾಣಾಕ್ಷತನದಿಂದ ಭಾರತದ ವಿರುದ್ಧ ಬಲೆ ಎಣೆಯುತ್ತಿದ್ದರೂ, ಭಾರತ ಇದಕ್ಕೆಲ್ಲಾ ಪ್ರತಿತಂತ್ರ ರೂಪಿಸುತ್ತಿದೆ. ಬೀಜಿಂಗ್ ನಡೆಸುತ್ತಿರುವ ಕುತಂತ್ರವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಲಂಕಾಗೆ ಸಾಕಷ್ಟು ಬಾರಿ ನೆರವು ನೀಡಿರುವ ಭಾರತ, ಶ್ರೀಲಂಕಾ ಸಂಪೂರ್ಣವಾಗಿ ಚೀನಾ ಜೊತೆ ಸೇರದಂತೆ ಕ್ರಮ ವಹಿಸಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications