ಕಸ ತಿನ್ನುವ ರೋಬೋಟ್ ಬೆಂಗಳೂರಿಗೆ ಬಂದರೆ ಹೇಗೆ?
ಬ್ಯೂನಸ್ ಐರಿಸ್, ಮಾರ್ಚ್, 04: ಬಳಸಿ ಎಸೆದ ಬಿಡಿ ಭಾಗ, ಕಸ ತಿಂದು ತೇಗುವ ರೋಬೋಟ್ ಬಂದರೆ ಹೇಗಿರುತ್ತದೆ? ಬಂದರೆ ಏನು.. ಈಗಾಗಲೇ ಬಂದಿದೆ. ಕಸ ತಿಂದು ಬದುಕುವ ರೋಬೋಟ್ ಅನ್ನು ಅರ್ಜೆಂಟೀನಾದ ಇಂಜಿನಿಯರ್ ಒಬ್ಬರು ತಯಾರು ಮಾಡಿದ್ದಾರೆ.
ಈ ರೊಬೋಟ್ ಗೆ ಇಟ್ಟಿರುವ ಹೆಸರು ನ್ಯಾನೋ, ಹಸಿವಾದಾಗ ಬಾಯಿ ತೆರೆಯುತ್ತದೆ. ನಿಮ್ಮ ಮನೆಯಲ್ಲಿ ಬೇಡದೆ ಬಿಸಾಕಿರುವ ಅಳಿದುಳಿದ ಇಲೆಕ್ಟ್ರಾನಿಕ್ ವಸ್ತುಗಳು, ವಾಯರ್ ತುಂಡು, ಹಾಳಾದ ಜಾರ್ಜರ್, ಕಿತ್ತು ಹೋಗಿರುವ ಸ್ವಿಚ್ ಬೋರ್ಡ್ ನ್ನು ಇದರ ಬಾಯಿಗೆ ತುರುಕಿದರೆ ಹೊಟ್ಟೆ ತುಂಬಾ ತಿಂದು ಗಡದ್ದಾಗಿ ನಿದ್ದೆ ಮಾಡುತ್ತದೆ. ಹಾಂ..ಇದನ್ನು ತಯಾರು ಮಾಡಿರುವುದು ಇಂಥದ್ದೇ ಬಳಸಿ ಎಸೆದ ವಸ್ತುಗಳಿಂದ.[ಲೈಂಗಿಕ ತೃಪ್ತಿಗೆ ರೋಬೋಟ್ ನೆಚ್ಚಿಕೊಳ್ಳುವ ಕಾಲ ದೂರವಿಲ್ಲ!]

ರೋಬೋಟ್ ಕಂಡುಹಿಡಿದಿರುವ ಇಂಜಿನಿಯರ್ ಪ್ಯಾಬ್ಲೋ ರೋಮಾಸ್ ತಮ್ಮ ಹೊಸ ಮಗುವಿಗೆ 'ನ್ಯಾನೋ' ಎಂದು ನಾಮಕರಣ ಮಾಡಿದ್ದಾರೆ. ಅಳವಡಿಕೆ ಮಾಡಿರುವ ಸೆನ್ಸಾರ್ ರೋಬೋಟ್ ನ್ನು ನಿಯಂತ್ರಣ ಮಾಡುತ್ತದೆ. ಮಕ್ಕಳೊಂದಿಗೆ ಆಟವಾಡಲು ಈ ರೋಬೋಟ್ ಸಾಥ್ ನೀಡುತ್ತದೆ.
ಸಂಪನ್ಮೂಲಗಳ ಮರು ಉಪಯೋಗ ಮಾಡಲು ಇಂಥ ರೋಬೋಟ್ ವೊಂದನ್ನು ಕಂಡುಹಿಡಿದಿದ್ದೇನೆ, ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗವನ್ನು ಎಲ್ಲಿ ಎಸೆಯಬೇಕು ಎಂದು ಯೋಚಿಸುವ ಅಗತ್ಯ ಮುಂದೆ ಬರುವುದಿಲ್ಲ. ಈ ರೋಬೋಟ್ ನ ಬಾಯೊಳಗೆ ಎಲ್ಲವನ್ನು ತುಂಬಬಹುದು. ಯಂತ್ರ ಬಳಸಿಕೊಂಡು ಶಾಲೆಗಳಲ್ಲಿ ಸಂಪನ್ಮೂಲ ಪುನರ್ಬಳಕೆ ಜಾಗೃತಿ ಕಾರ್ಯಾಗಾರ ನಡೆಸಲಿದ್ದೇವೆ ಎಂದು ಪ್ಯಾಬ್ಲೋ ರೋಮಾಸ್ ತಿಳಿಸಿದ್ದಾರೆ.[ಭಾರತಕ್ಕೆ ಕಾಲಿರಿಸಿದ ಡ್ಯಾನೀಶ್ ಯೂರ್ನಿವಸಲ್ ರೋಬೋಟ್ಸ್]
ಲಾಸ್ಟ್ ಪಂಚ್: ಅಯ್ಯಪ್ಪಾ... ಈ ಬೆಂಗಳೂರ ಕಸ ಸಮಸ್ಯೆ ಸಾಕಾಗಿ ಹೋಗಿದೆ.. ಸರ್ಕಾರಕ್ಕೆ , ಜನರಿಗೆ , ಆಡಳಿತಕ್ಕೆ ಎಲ್ಲರಿಗೂ ತಲೆನೋವು ವಾಸನೆ ತಂದಿಟ್ಟಿದೆ. ಇಂಥದ್ದೆ ಒಂದು ಕಸ ತಿನ್ನುವ ರೋಬಾಟ್ ಬೆಂಗಳೂರಿಗೆ ಬಂದರೆ ಎಂಥ ಚೆನ್ನ ಅಲ್ಲವೇ?
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications