ಕಸ ತಿನ್ನುವ ರೋಬೋಟ್ ಬೆಂಗಳೂರಿಗೆ ಬಂದರೆ ಹೇಗೆ?
ಬ್ಯೂನಸ್ ಐರಿಸ್, ಮಾರ್ಚ್, 04: ಬಳಸಿ ಎಸೆದ ಬಿಡಿ ಭಾಗ, ಕಸ ತಿಂದು ತೇಗುವ ರೋಬೋಟ್ ಬಂದರೆ ಹೇಗಿರುತ್ತದೆ? ಬಂದರೆ ಏನು.. ಈಗಾಗಲೇ ಬಂದಿದೆ. ಕಸ ತಿಂದು ಬದುಕುವ ರೋಬೋಟ್ ಅನ್ನು ಅರ್ಜೆಂಟೀನಾದ ಇಂಜಿನಿಯರ್ ಒಬ್ಬರು ತಯಾರು ಮಾಡಿದ್ದಾರೆ.
ಈ ರೊಬೋಟ್ ಗೆ ಇಟ್ಟಿರುವ ಹೆಸರು ನ್ಯಾನೋ, ಹಸಿವಾದಾಗ ಬಾಯಿ ತೆರೆಯುತ್ತದೆ. ನಿಮ್ಮ ಮನೆಯಲ್ಲಿ ಬೇಡದೆ ಬಿಸಾಕಿರುವ ಅಳಿದುಳಿದ ಇಲೆಕ್ಟ್ರಾನಿಕ್ ವಸ್ತುಗಳು, ವಾಯರ್ ತುಂಡು, ಹಾಳಾದ ಜಾರ್ಜರ್, ಕಿತ್ತು ಹೋಗಿರುವ ಸ್ವಿಚ್ ಬೋರ್ಡ್ ನ್ನು ಇದರ ಬಾಯಿಗೆ ತುರುಕಿದರೆ ಹೊಟ್ಟೆ ತುಂಬಾ ತಿಂದು ಗಡದ್ದಾಗಿ ನಿದ್ದೆ ಮಾಡುತ್ತದೆ. ಹಾಂ..ಇದನ್ನು ತಯಾರು ಮಾಡಿರುವುದು ಇಂಥದ್ದೇ ಬಳಸಿ ಎಸೆದ ವಸ್ತುಗಳಿಂದ.[ಲೈಂಗಿಕ ತೃಪ್ತಿಗೆ ರೋಬೋಟ್ ನೆಚ್ಚಿಕೊಳ್ಳುವ ಕಾಲ ದೂರವಿಲ್ಲ!]

ರೋಬೋಟ್ ಕಂಡುಹಿಡಿದಿರುವ ಇಂಜಿನಿಯರ್ ಪ್ಯಾಬ್ಲೋ ರೋಮಾಸ್ ತಮ್ಮ ಹೊಸ ಮಗುವಿಗೆ 'ನ್ಯಾನೋ' ಎಂದು ನಾಮಕರಣ ಮಾಡಿದ್ದಾರೆ. ಅಳವಡಿಕೆ ಮಾಡಿರುವ ಸೆನ್ಸಾರ್ ರೋಬೋಟ್ ನ್ನು ನಿಯಂತ್ರಣ ಮಾಡುತ್ತದೆ. ಮಕ್ಕಳೊಂದಿಗೆ ಆಟವಾಡಲು ಈ ರೋಬೋಟ್ ಸಾಥ್ ನೀಡುತ್ತದೆ.
ಸಂಪನ್ಮೂಲಗಳ ಮರು ಉಪಯೋಗ ಮಾಡಲು ಇಂಥ ರೋಬೋಟ್ ವೊಂದನ್ನು ಕಂಡುಹಿಡಿದಿದ್ದೇನೆ, ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗವನ್ನು ಎಲ್ಲಿ ಎಸೆಯಬೇಕು ಎಂದು ಯೋಚಿಸುವ ಅಗತ್ಯ ಮುಂದೆ ಬರುವುದಿಲ್ಲ. ಈ ರೋಬೋಟ್ ನ ಬಾಯೊಳಗೆ ಎಲ್ಲವನ್ನು ತುಂಬಬಹುದು. ಯಂತ್ರ ಬಳಸಿಕೊಂಡು ಶಾಲೆಗಳಲ್ಲಿ ಸಂಪನ್ಮೂಲ ಪುನರ್ಬಳಕೆ ಜಾಗೃತಿ ಕಾರ್ಯಾಗಾರ ನಡೆಸಲಿದ್ದೇವೆ ಎಂದು ಪ್ಯಾಬ್ಲೋ ರೋಮಾಸ್ ತಿಳಿಸಿದ್ದಾರೆ.[ಭಾರತಕ್ಕೆ ಕಾಲಿರಿಸಿದ ಡ್ಯಾನೀಶ್ ಯೂರ್ನಿವಸಲ್ ರೋಬೋಟ್ಸ್]
ಲಾಸ್ಟ್ ಪಂಚ್: ಅಯ್ಯಪ್ಪಾ... ಈ ಬೆಂಗಳೂರ ಕಸ ಸಮಸ್ಯೆ ಸಾಕಾಗಿ ಹೋಗಿದೆ.. ಸರ್ಕಾರಕ್ಕೆ , ಜನರಿಗೆ , ಆಡಳಿತಕ್ಕೆ ಎಲ್ಲರಿಗೂ ತಲೆನೋವು ವಾಸನೆ ತಂದಿಟ್ಟಿದೆ. ಇಂಥದ್ದೆ ಒಂದು ಕಸ ತಿನ್ನುವ ರೋಬಾಟ್ ಬೆಂಗಳೂರಿಗೆ ಬಂದರೆ ಎಂಥ ಚೆನ್ನ ಅಲ್ಲವೇ?
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications