IT ಬಳಕೆ: ಉಗ್ರ ಯಾಸಿನ್ ಮುಂದೆ ಎನ್ಐಎ ಹಿಂದೆ
ನವದೆಹಲಿ, ಸೆ.17: ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸೂತ್ರಧಾರಿ ಯಾಸಿನ್ ಭಟ್ಕಳ ಮತ್ತು ಅವನ ಸಹಚರರು ತಂತ್ರಜ್ಞಾನ ಬಳಕೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕಿಂತ (NIA) ತುಂಬಾ ತುಂಬಾ ಮುಂದಿದ್ದಾರೆ.
ಯಾಸಿನ್ ಭಟ್ಕಳ ಮತ್ತು ಅಸಾದುಲ್ಲಾ ಅಖ್ತರ್ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ತಾವು ದೇಶದ ಭದ್ರತೆಯನ್ನು ಹೇಗೆಲ್ಲ ಆಟವಾಡಿಸಿದಿವಿ/ ಅಣಕವಾಡಿಸಿದಿವಿ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಾರೆ. ಆತಂಕದ ವಿಷಯವೆಂದರೆ ಈ ಇಬ್ಬರೂ ಉಗ್ರರು ಮತ್ತು ಅವರು ತಮ್ಮ ಅನುಯಾಯಿಗಳಿಗೆ ಕಳುಹಿಸಿರುವ ಸುಮಾರು 30,000 ರಹಸ್ಯ ಸಂದೇಶಗಳನ್ನು ಬಿಡಿಸುವಲ್ಲಿ NIA ಅಧಿಕಾರಿಗಳಿಗೆ ಇನ್ನು ಸಾಧ್ಯವಾಗಿಲ್ಲ!

IT ಯಿಂದಾಗಿ ಲಷ್ಕರೆ ತೊಯ್ಬಾ ಸಹವಾಸ
ಮತ್ತು ತಂತ್ರಜ್ಞಾನವನ್ನು ಅಚ್ಚುಕಟ್ಟಾಗಿ/ ನಿಖರವಾಗಿ ಬಳಕೆ ಮಾಡುವ ಮೂಲಕ ತಮ್ಮ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಲಷ್ಕರೆ ತೊಯ್ಬಾ ಜತೆ ನಿಕಟ ಸಂಪರ್ಕ ಹೊಂದಲು ಸಾಧ್ಯವಾಯಿತು. ಅತ್ತ, ಲಷ್ಕರೆ ತೊಯ್ಬಾ ಸಂಘಟನೆಯು ಅಲ್ ಖೈದಾಗಿಂತಲೂ ತಂತ್ರಜ್ಞಾನದಲ್ಲಿ ಹೈಟೆಕ್ ಆಗಿದೆ ಎಂದು ತಿಳಿದುಬಂದಿದೆ.

Google map, GPRS ಫೋನುಗಳ ಬಳಕೆ
ಇನ್ನು e-mail chats, ಭದ್ರತಾ ಪಡೆಗಳ ಕಣ್ತಪ್ಪಿಸಿ ಕೊನೆಯ ಕ್ಷಣದಲ್ಲಿ ಕರಾರುವಕ್ಕಾಗಿ e-mails ರವಾನಿಸುವುದು, Google map ಬಳಕೆ, GPRS ಫೋನುಗಳ ಬಳಕೆಯಲ್ಲಿ ತಮ್ಮದು ಪಳಗಿದ ಕೈ ಎಂದು ಉಗ್ರರಿಬ್ಬರೂ ರಾಷ್ಟ್ರೀಯ ತನಿಖಾ ದಳದ ಮುಂದೆ ಹೇಳಿಕೊಂಡಿದ್ದಾರೆ.

ಸಂಕೇತಾಕ್ಷರಗಳ ಅತ್ಯಂತ ರಹಸ್ಯ ಸಂದೇಶ
ಉಗ್ರರ ನಡುವೆ ಸರಿದಾಡುವ ಪ್ರತಿಯೊಂದು e-mail ಸಂದೇಶಗಳೂ ಸಂಕೇತಾಕ್ಷರಗಳಲ್ಲಿ ಅತ್ಯಂತ ರಹಸ್ಯವಾಗಿ ರವಾನೆಯಾಗುತ್ತಿದ್ದವು. ಇನ್ನು ಸ್ಥಿರ ದೂರವಾಣಿ. ಮೊಬೈಲ್ ಫೋನುಗಳ ಬಳಕೆಯೂ ಉಗ್ರರಿಗೆ ನಿಷಿದ್ಧ. ತಂಡ ಚಿಕ್ಕದಾಗಿದ್ದರೂ ಮಾಹಿತಿ ತಂತ್ರಜ್ಞಾನ ಬಳಕೆಯಲ್ಲಿ ಚೊಕ್ಕವಾಗಿ ಕಾರ್ಯನಿರ್ವಹಿಸಿದೆ.

2006ರಲ್ಲಿ ಬಲೂಚಿಸ್ತಾನದ ಗಡಿಯಲ್ಲಿ ಯಾಸಿನ್ ತರಬೇತಿ
2006ರಲ್ಲಿ ಪಾಕಿಸ್ತಾನದ ಬಲೂಚಿಸ್ತಾನದ ಗಡಿಯಲ್ಲಿ ತಾನು ತರಬೇತಿ ಪಡೆದೆ ಎಂದು ಯಾಸಿನ್ ಭಟ್ಕಳ ಹೇಳಿದ್ದಾನೆ. NIA ಅಧಿಕಾರಿಗಳನ್ನು ದಿಕ್ಕುತಪ್ಪಿಸಲು ಲಷ್ಕರೆ ತೊಯ್ಬಾ ಸಂಘಟನೆ ಜತೆ ತಾನು ಸಂಪರ್ಕಿಸುತ್ತಿಲ್ಲ. ಅಸಲಿಗೆ ಅದೀಗ ಅಸ್ತಿತ್ವದಲ್ಲೇ ಇಲ್ಲ. ತಾನು ಅಲ್ ಖೈದಾ ಜತೆ ನಿಕಟ ಸಂಪರ್ಕದಲ್ಲಿದ್ದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಯಾಸಿನ್ ಹೇಳಿದ ಎಂದು ಲಷ್ಕರೆ ತೊಯ್ಬಾ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಒಪ್ಪಲು NIA ಅಧಿಕಾರಿಗಳು ಸಿದ್ಧರಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications