ಗಂಡನಿಗೆ ಹೊಡೆದದ್ದಕ್ಕೆ ಬಾರ್ಗೆ ಹೋಗಿ ಸಿಬ್ಬಂದಿಯನ್ನು ಥಳಿಸಿದ ಪತ್ನಿ!
ಹೈದರಾಬಾದ್, ಮೇ. 21: ಗಂಡ ಮದ್ಯಪಾನ ಮಾಡುತ್ತಾನೆ ಎಂದು ಪತಿಯನ್ನು ದೂರ ಇಡುವ ಹೆಂಡತಿಯರೇ ಹೆಚ್ಚಿದ್ದಾರೆ. ಮದ್ಯಪಾನ ಮಾಡುವ ಗಂಡಂದಿರನ್ನು ಸಂಶಯದಿಂದ ನೋಡುವ, ಅವರಿಗೆ ಗೌರವ ಕೊಡದಿರುವ, ಪತಿಯನ್ನು ಕುಡಿತದಿಂದ ಬಿಡುಗಡೆ ಮಾಡಿಸಲು ಏನೇನು ಸರ್ಕಸ್ ಮಾಡುವ ಹೆಂಡತಿಯರಿದ್ದಾರೆ.
ಆದರೆ, ಹೈದರಾಬಾದ್ನಲ್ಲಿ ಪತ್ನಿಯೊಬ್ಬರು ತನ್ನ ಪತಿಗೆ ವೈನ್ ಶಾಪ್ ಸಿಬ್ಬಂದಿ ಥಳಿಸಿದ್ದಾರೆ ಎಂದು ಬಾರ್ಗೆ ಹೋಗಿ ದೊಡ್ಡ ರಾದ್ಧಾಂತ ಮಾಡಿದ್ದಾರೆ. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅಂಗಡಿಗೆ ಬೆಂಕಿ ಹಾಕುವ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಅಗುತ್ತಿದೆ.

ಪತಿಗೆ ಥಳಿಸಿದ ವೈನ್ ಶಾಪ್ನ ಸಿಬ್ಬಂದಿ ಮೇಲೆ ಪತ್ನಿ ಹಲ್ಲೆ!
ಹೈದರಾಬಾಸ್ನ ಮಧುರಾನಗರದ ವೈನ್ ಶಾಪ್ನ ಸಿಬ್ಬಂದಿ ತನ್ನ ಪತಿಗೆ ಥಳಿಸಿದ್ದಾರೆ ಎಂದು ತಿಳಿದ ಮಹಿಳೆ ಮತ್ತು ಇತರರು ಅಂಗಡಿಗೆ ತೆರಳಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ವೈನ್ ಶಾಪ್ ಸಿಬ್ಬಂದಿ ಶನಿವಾರ ದೂರು ದಾಖಲಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಮೇಶ್ ಎಂಬುವವರು ಶುಕ್ರವಾರ ರಾತ್ರಿ ಮದ್ಯ ಖರೀದಿಸಲು ವೈನ್ ಶಾಪ್ಗೆ ಭೇಟಿ ನೀಡಿದ್ದರು, ಆದರೆ ಮದ್ಯ ನೀಡಲು ತಡವಾದ ಕಾರಣ ಅವರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳದ ವೇಳೆ ವೈನ್ ಶಾಪ್ ಸಿಬ್ಬಂದಿ ಆತನನ್ನು ಥಳಿಸಿದ್ದಾರೆ.
ಇದಾದ ಕೆಲ ಗಂಟೆಗಳ ನಂತರ ರಮೇಶ್ ಪತ್ನಿ ಹಾಗೂ ಇತರ ಮೂವರಿಗೆ ವಿಷಯ ತಿಳಿದಿದೆ. ಬಳಿಕ ಮಹಿಳೆ ಮತ್ತು ಇತರರು ಅಂಗಡಿ ಬಳಿ ಬಂದು ಗಲಾಟೆ ಮಾಡಿದ್ದಾರೆ. ಮದ್ಯದ ಬಾಟಲಿಗಳನ್ನು ಒಡೆದು ಅಂಗಡಿಯೊಳಗೆ ನುಗ್ಗಲು ಯತ್ನಿಸಿದ್ದಾರೆ. ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
భర్తపై దాడి.. భార్య ప్రతీకారం..
— Telugu Scribe (@TeluguScribe) May 19, 2024
మద్యం కొనేందుకు వెళ్ళిన వ్యక్తి తల పగల గొట్టిన వైన్ షాపు సిబ్బంది.
భర్తను రక్తంతో చూడడంతో రెచ్చి పోయిన భార్య.
వైన్ షాపులోకి జొరబడి సిబ్బందిపై దాడి.
అడ్డుకునేందుకు వచ్చిన పోలీసులను జుట్టు పట్టుకుని కొట్టిన మహిళ.
మధురా నగర్ పోలీస్ స్టేషన్… pic.twitter.com/oObObPHnDm
ಇಷ್ಟೇ ಅಲ್ಲದೆ ಅಂಗಡಿಗೆ ಬೆಂಕಿ ಹಚ್ಚುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ತೊಂದರೆಯಾಗಬಹುದೆಂಬ ಭಯದಿಂದ ಸಿಬ್ಬಂದಿ ರಾತ್ರಿಯೇ ಅಂಗಡಿ ಮುಚ್ಚಿದ್ದಾರೆ. ಸಿಬ್ಬಂದಿಯ ದೂರಿನ ಮೇರೆಗೆ ಮಹಿಳೆ ಮತ್ತು ಇತರ ಮೂವರ ವಿರುದ್ಧ ಐಪಿಸಿ ಸೆಕ್ಷನ್ 448 (ಮನೆ ಅತಿಕ್ರಮಣ), 427 (ಕಿಡಿಗೇಡಿತನ), ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಮೇಶ್ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರತಿ ಪ್ರಕರಣವನ್ನೂ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
-
ಬೆಂಗಳೂರಿನಂತೆ ಇಲ್ಲಿ ಟ್ರಾಫಿಕ್ ಇಲ್ಲ, ನಮ್ಮ ಹೈದರಾಬಾದ್ ಬೆಸ್ಟ್ ಎಂದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್












Click it and Unblock the Notifications