ಸುದ್ದಿ ಸದ್ದಿನಲ್ಲಿ ಮರೆತುಹೋದ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ!
ಬೆಂಗಳೂರು, ಅಕ್ಟೋಬರ್ 12: ಭಾರತದಲ್ಲಿ ಮಾತ್ರವಲ್ಲ ಇಡೀ ಭೂಮಿಯಲ್ಲಿ ಅತೀಹೆಚ್ಚಿನ ಅಸುರಕ್ಷತೆ ಎದುರಿಸುತ್ತಿರುವುದು ಹೆಣ್ಣುಮಗು. ಒಂದೆಡೆ ಏನೂ ಅರಿಯದ ಹೆಣ್ಣುಮಕ್ಕಳು ಕಾಮುಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ, ಮತ್ತೊಂದೆಡೆ ಅವರಿಗೆ ಸಿಗಬೇಕಾದ ಶಿಕ್ಷಣವೂ ಸಿಗುತ್ತಿಲ್ಲ.
ಹೆಣ್ಣುಮಕ್ಕಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವೆ? ಹೋಗಲಿ, ಹೆಣ್ಣುಮಕ್ಕಳು ಯಾವುದರಲ್ಲಿ ಕಮ್ಮಿಯಿದ್ದಾರೆ? ಕ್ರೀಡೆ, ಉದ್ಯಮ, ರಾಜಕೀಯ, ಸಾಮಾಜಿಕ ವಲಯದಲ್ಲಿಯೂ ಹೆಣ್ಣುಮಕ್ಕಳದ್ದೇ ಪಾರುಪತ್ಯ. ಶೈಕ್ಷಣಿಕವಾಗಿ ಕೂಡ ಗಂಡು ಮಕ್ಕಳಿಗಿಂತ ಮುಂದಿದ್ದರೂ ಅವರಿಗೆ ಸಿಗಬೇಕಾದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಕೂಡ ಅಷ್ಟೇ ನಿಜ.
ಹೆಣ್ಣುಮಕ್ಕಳಿಗೆ ಬೇಕಾದ ಸುರಕ್ಷತೆ, ಬೆಂಬಲ, ಗೌರವ ನೀಡಿ, ಅವರನ್ನು ಎಲ್ಲ ರಂಗಗಳಲ್ಲಿ ಸಬಲೀಕರಣ ಮಾಡುವ ಉದ್ದೇಶದಿಂದ ಅಕ್ಟೋಬರ್ 11ನ್ನು ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನಾಗಿ ವಿಶ್ವಸಂಸ್ಥೆ ಆಚರಿಸುತ್ತಿದೆ. ನಾಳಿನ ಉತ್ತಮ ಸಮಾಜಕ್ಕಾಗಿ ಹೆಣ್ಣುಮಕ್ಕಳನ್ನು ಇಂದು ಕಾಪಾಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಗು ಶಿಕ್ಷಣ, ಪೌಷ್ಟಿಕತೆ, ಕಾನೂನು ಹಕ್ಕು, ವೈದ್ಯಕೀಯ ಆರೈಕೆ, ಬಾಲ್ಯವಿವಾಹ, ಪಕ್ಷಪಾತ, ದೌರ್ಜನ್ಯದ ವಿರುದ್ಧ ಅನುಕ್ಷಣವೂ ಹೋರಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಪ್ರತಿದಿನವೂ ಇಪ್ಪತ್ತೆಂಟು ಆಚರಣೆಗಳಿರುತ್ತವೆ, ಆದರೆ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲು ಸಾಧ್ಯವಿಲ್ಲವೆ ?
ನಿನ್ನೆ ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನ ಎಂಬುದು ಹಲವರಿಗೆ ಗೊತ್ತೇ ಇಲ್ಲ! ಪ್ರತಿ ಮನೆಯ ಕಣ್ಣಾದ, ಬೆಳಕಾದ ಹೆಣ್ಣು ನಿಜಕ್ಕೂ ಸುರಕ್ಷಿತಳಾ, ಆಕೆಗೆ ಸಿಗಬೇಕಾದ ಮನ್ನಣೆ ಸಿಗುತ್ತಿದೆಯಾ?

ನಿಂತಿದೆಯಾ ಹೆಣ್ಣು ಭ್ರೂಣ ಹತ್ಯೆ?
ಹೆಣ್ಣು ಭ್ರೂಣಹತ್ಯೆ ತಡೆಗೆ ಮತ್ತು ಹೆಣ್ಣು ಮಕ್ಕಳ ಉಳಿವಿಗಾಗಿ ಸರ್ಕಾರದ ಬೇಟಿ ಬಚಾವೋ, ಬೇಟಿ ಪಢಾವೋ, ಸುಕನ್ಯಾ ಸಮೃದ್ಧಿ ಮುಂತಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂದಿಗೂ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ. ಮಗು ಹುಟ್ಟುತ್ತಿದ್ದಂತೆಯೇ ಹೆಣ್ಣು ಎಂದು ತಿಳಿದು ಸಾಯಿಸುವ ವಿಕೃತಿಯೂ ನಿಂತಿಲ್ಲ. ಎರಡು ದಶಕಗಳೀಚೆಗೆ ಈ ಪ್ರಮಾಣ ಕಡಿಮೆಯಾಗಿರಬಹುದು, ಆದರೆ ನಿಂತಿಲ್ಲ!

ಬಾಲ್ಯ ವಿವಾಹದ ಅಸ್ತಿತ್ವ
ಉತ್ತರ ಭಾರತದ ಹಲವು ಹಿಂದುಳಿದ ರಾಜ್ಯಗಳಲ್ಲಿ ಇಂದಿಗೂ ಬಾಲ್ಯವಿವಾಹವಿದೆ. ಅದಿಲ್ಲವೆಂದಿದ್ದರೆ "18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ಮಾಡುವುದು ಅತ್ಯಾಚಾರಕ್ಕೆ ಸಮ" ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಅಗತ್ಯ ಬರುತ್ತಲೇ ಇರಲಿಲ್ಲ! ಬಾಲ್ಯ ವಿವಾಹ ತಡೆಗಾಗಿಯೇ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಪ್ರಕಟಿಸಿದೆ. ಜವಾಬ್ದಾರಿಯಿಂದ ನುಣಿಚಿಕೊಳ್ಳುವುದಕ್ಕೋ, ಇನ್ಯಾವುದೋ ಕಾರಣಕ್ಕೋ ಇಂದಿಗೂ ಬಾಲ್ಯ ವಿವಾಹ ಅಸ್ತಿತ್ವದಲ್ಲಿರುವುದು ಶೋಚನೀಯ ಸಂಗತಿ!

ಮಹಿಳೆಯರ ಶಿಕ್ಷಣದ ಹಕ್ಕು
ಇಂದು ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುತ್ತಿದ್ದರೂ, ಹಿಂದುಳಿದ ರಾಜ್ಯಗಳು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವ ಧೈರ್ಯ ಮಾಡುತ್ತಿಲ್ಲ! ಕುಗ್ರಾಮಗಳಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ ಕೆಲವೇ ಕೆಲವು ಮಹಿಳೆಯರು ಶಿಕ್ಷಣ ತಮ್ಮ ಹಕ್ಕು ಎಂಬುದನ್ನು ಸಾಬೀತುಪಡಿಸಿದ್ದು ಬಿಟ್ಟರೆ ಎಷ್ಟೋ ಹೆಣ್ಣು ಮಕ್ಕಳು ಇಂದಿಗೂ ಶಿಕ್ಷಣ ವಂಚಿತರೇ!

ಮಹಿಳಾ ಸುರಕ್ಷತೆ ಎಂಬ ಮರೀಚಿಕೆ
ಮಹಿಳೆಯರಿಗೆ ಭದ್ರತೆ ನೀಡುವ ವಿಷಯವಂತೂ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಡು ಹಗಲಲ್ಲೇ ನಂಬಿದ್ದ ಸ್ನೇಹಿತರೇ ಅತ್ಯಾಚಾರದಂಥ ಹೇಯ ಕೃತ್ಯದಲ್ಲಿ ಪಾಲಗೊಳ್ಳುತ್ತಿರುವಾಗ ಸುರಕ್ಷತೆ ಎಂಬುದು ಮರೀಚಿಕೆಯಲ್ಲದೆ ಇನ್ನೇನು?

ಮಹಿಳೆಯರಿಗೆ ಸಲಾಂ!
ಇಷ್ಟೆಲ್ಲ ಅಡ್ಡಿ ಆತಂಕಗಳನ್ನೂ ಮೀರಿ, ತಮ್ಮದೇ ಆದ ನೆಲೆ ಕಂಡುಕೊಳ್ಳುವ, ಹೋರಾಡುತ್ತಲೇ ಶಿಕ್ಷಣ ಪಡೆದು, ಕುಟುಂಬದ ವಿರೋಧದ ಹೊರತಾಗಿಯೂ ಉದ್ಯೋಗ ಹಿಡಿದು, ಸ್ವಾವಲಂಬಿಯಾಗಿ ಇಡಿ ಸಮಾಜಕ್ಕೂ ಆದರ್ಶವಾಗುವ ನೂರಾರು ಹೆಣ್ಣು ಮಕ್ಕಳು ನಮ್ಮ ಮುಂದಿದ್ದಾರೆ. ಅವರೆಲ್ಲರಿಂದಾಗಿಯೇ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಕ್ಕೆ ಅರ್ಥಬಂದಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications