ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ
ನವದೆಹಲಿ, ಮಾರ್ಚ್ 04: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. 2016ರಲ್ಲಿ ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ.
ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ ಮಾರ್ಚ್ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿ ನಸೀಮ್ ಜೈದಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
* ಐದು ರಾಜ್ಯಗಳಲ್ಲಿ ಸುಮಾರು 824 ಅಸೆಂಬ್ಲಿ ಕ್ಷೇತ್ರಗಳಿಂದ 17 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ.
* ಎಲ್ಲಾ ಐದು ರಾಜ್ಯಗಳಲ್ಲೂ ಮತಯಂತ್ರದಲ್ಲಿ NOTA (ನೋಟಾ) ಬಟನ್/ಚಿನ್ಹೆ ಇರುತ್ತದೆ.
* ಅಭ್ಯರ್ಥಿಗಳ ಆಯ್ಕೆ ಸುಲಭಗೊಳಿಸಲು ಒಂದೇ ಚಿನ್ಹೆ, ಹೆಸರು ಗೊಂದಲ ನಿವಾರಣೆಗಾಗಿ ಅಭ್ಯರ್ಥಿಗಳ ಭಾವಚಿತ್ರವನ್ನು ಮತಯಂತ್ರದಲ್ಲಿ ಮುದ್ರಿಸಲಾಗುತ್ತದೆ.

ವೇಳಾಪಟ್ಟಿ: ಅಸ್ಸಾಂ: ಎರಡು ಹಂತಗಳಲ್ಲಿ ಚುನಾವಣೆ, 126 ಕ್ಷೇತ್ರಗಳು
* ಮೊದಲ ಹಂತ: ಏಪ್ರಿಲ್ 04 (ಸೋಮವಾರ), 65 ಕ್ಷೇತ್ರಗಳು
* ಎರಡನೇ ಹಂತ: ಏಪ್ರಿಲ್ 11 (ಸೋಮವಾರ), 61 ಕ್ಷೇತ್ರಗಳು
ಪಶ್ಚಿಮ ಬಂಗಾಲ: ಆರು ಹಂತಗಳಲ್ಲಿ ಚುನಾವಣೆ,
* ಮೊದಲ ಹಂತ: ಏಪ್ರಿಲ್ 04 (ಸೋಮವಾರ), 18 ಕ್ಷೇತ್ರಗಳು
* ಏಪ್ರಿಲ್ 11 (ಸೋಮವಾರ), 31 ಕ್ಷೇತ್ರಗಳು
* ಎರಡನೇ ಹಂತ: ಏಪ್ರಿಲ್ 17 (ಭಾನುವಾರ), 56 ಕ್ಷೇತ್ರಗಳು
* ಮೂರನೇ ಹಂತ: ಏಪ್ರಿಲ್ 21 (ಗುರುವಾರ), 6೨ ಕ್ಷೇತ್ರಗಳು
* ನಾಲ್ಕನೇ ಹಂತ: ಏಪ್ರಿಲ್ 25 (ಸೋಮವಾರ), 41 ಕ್ಷೇತ್ರಗಳು
* ಐದನೇ ಹಂತ: ಏಪ್ರಿಲ್ 30 (ಶನಿವಾರ), 53 ಕ್ಷೇತ್ರಗಳು
* ಆರನೇ ಹಂತ: ಮೇ 05 (ಗುರುವಾರ), 25 ಕ್ಷೇತ್ರಗಳು
ಕೇರಳ (140 ಕ್ಷೇತ್ರಗಳು)
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16 ಸೋಮವಾರ ಮತದಾನ.
ತಮಿಳುನಾಡು (234 ಕ್ಷೇತ್ರಗಳು)
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16, ಸೋಮವಾರದಂದು ಮತದಾನ.
ಪುದುಚೇರಿ (30 ಕ್ಷೇತ್ರಗಳು)
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16, ಸೋಮವಾರದಂದು ಮತದಾನ.
ಒಟ್ಟು ಮತದಾರರು
* ಅಸ್ಸಾಮ್: 1.98 ಕೋಟಿ
* ಕೇರಳ : 2.56 ಕೋಟಿ
* ತಮಿಳುನಾಡು : 5.8 ಕೋಟಿ
* ಪಶ್ಚಿಮ ಬೆಂಗಾಲ: 6.55 ಕೋಟಿ
* ಪುದುಚೇರಿ: 9.27 ಲಕ್ಷ
ಮತ ಕೇಂದ್ರ
* ಅಸ್ಸಾಮ್: 25,000
* ಕೇರಳ : 21,498
* ತಮಿಳುನಾಡು : 65,616
* ಪಶ್ಚಿಮ ಬೆಂಗಾಲ: 71,247
* ಪುದುಚೇರಿ: 913
(ಒನ್ಇಂಡಿಯಾ ಕನ್ನಡ)
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications