ಆರ್ಯನ್ ಖಾನ್ ಬಂಧಿಸಿದ ಅಧಿಕಾರಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ವಿಜಿಲೆನ್ಸ್ ವರದಿ
ಮುಂಬೈ ಮೇ 19: ಮುಂಬೈ ಕ್ರೂಸ್ ಡ್ರಗ್ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಈ ಪ್ರಕರಣದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ನಾರ್ಕೊಟಿಕ್ಸ್ ನಿಯಂತ್ರಣ ವಿಭಾಗದ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ನೇತೃತ್ವದ ತಂಡ ಬಂಧಿಸಿತ್ತು. ಆದರೆ ಈಗ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಎನ್ಸಿಬಿಯ ವಿಜಿಲೆನ್ಸ್ ವಿಭಾಗ ವರದಿ ಮಾಡಿದೆ.
ಈ ಸಮಯದಲ್ಲಿ ಆರ್ಯನ್ ಖಾನ್ ಪ್ರಕರಣವನ್ನು ಮುಚ್ಚಿ ಹಾಕಲು ಸಮೀರ್ ವಾಂಖೆಡೆ ಲಂಚವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಅವರು ಅಪಾರ ಆಸ್ತಿ ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಮೀರ್ ವಾಂಖೆಡೆ ಮತ್ತು ಇತರರು ಶಾರುಖ್ ಖಾನ್ ಕುಟುಂಬದಿಂದ 25 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ. ಇಲ್ಲದಿದ್ದರೆ ಹಣ ಕೊಡದಿದ್ದರೆ ಆರ್ಯನ್ ಖಾನ್ ಅವರನ್ನು ಮಾದಕ ದ್ರವ್ಯ ದಂಧೆಯಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ವಿಚಾರಣೆಗೆ ಮೇ 18ರಂದು ಸಮೀರ್ ವಾಂಖೆಡೆ ಸಿಬಿಐ ವಿಚಾರಣೆಗೆ ಕರೆದಿತ್ತು. ಆದರೆ ಸಮೀರ್ ಇದಕ್ಕೆ ಗೈರು ಹಾಜರಾಗಿದ್ದಾರೆ.
ಎನ್ಸಿಬಿಯ ವಿಜಿಲೆನ್ಸ್ ವಿಭಾಗದ ವರದಿಯ ಪ್ರಕಾರ, ಆರ್ಯನ್ ಖಾನ್ ಮತ್ತು ಅವರ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಹೆಸರನ್ನು ಕೊನೆಯ ಕ್ಷಣದಲ್ಲಿ ಸೇರಿಸಲಾಗಿದೆ. ಇತರ ಕೆಲವು ಶಂಕಿತರ ಹೆಸರನ್ನು ಕೈಬಿಡಲಾಗಿದೆ ಎಂದು ಸೂಚಿಸುತ್ತದೆ. ದಾಳಿಯ ಸಮಯದಲ್ಲಿ, ಶಂಕಿತ ವ್ಯಕ್ತಿಯಿಂದ ರೋಲಿಂಗ್ ಪೇಪರ್ ವಶಪಡಿಸಿಕೊಂಡಿದ್ದರೂ, ಆಕೆಗೆ ಹೋಗಲು ಅವಕಾಶ ನೀಡಲಾಯಿತು ಎಂದು ವರದಿ ಹೇಳುತ್ತದೆ.

ಮುಂಬೈ ಕ್ರೂಸ್ ರೈಡ್ನಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಕಿರಣ್ ಗೋಸಾವಿಯೊಂದಿಗೆ ಸಮೀರ್ ವಾಂಖೆಡೆ ಉದ್ದೇಶಪೂರ್ವಕವಾಗಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರ್ಯನ್ ಖಾನ್ ಅವರ ಬಂಧನದ ಸರಣಿ ಲೋಪಗಳು ಸೂಚಿಸುತ್ತವೆ.
ತನಿಖಾ ತಂಡ ಸಂಗ್ರಹಿಸಿದ್ದ ಎನ್ಸಿಬಿ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ಭ್ರಷ್ಟವಾಗಿವೆ. ಆರ್ಯನ್ ಖಾನ್ ಅವರನ್ನು ಎನ್ಸಿಬಿ ಕಚೇರಿಗೆ ಕರೆತಂದ ರಾತ್ರಿಯ ಡಿವಿಆರ್ ಮತ್ತು ಹಾರ್ಡ್ ಕಾಪಿಯಲ್ಲಿ ಎನ್ಸಿಬಿಯ ಮುಂಬೈ ತಂಡ ಸಲ್ಲಿಸಿದ್ದ ದಾಖಲೆಗಳು ವಿಭಿನ್ನವಾಗಿವೆ ಎಂದು ವರದಿ ಹೇಳಿದೆ.
ಐದು ವರ್ಷಗಳಲ್ಲಿ ಅಂದರೆ 2017 ರಿಂದ 2021 ರವರೆಗೆ ಸಮೀರ್ ವಾಂಖೆಡೆ ಅವರು ತಮ್ಮ ಕುಟುಂಬದೊಂದಿಗೆ ಆರು ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರಗಳ ಪಟ್ಟಿಯಲ್ಲಿ ಯುಕೆ, ಐರ್ಲೆಂಡ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್ ಸೇರಿವೆ, ಅಲ್ಲಿ ಅವರು 55 ದಿನಗಳ ಕಾಲ ಇದ್ದರು ಎಂದು ಹೇಳಲಾಗಿದೆ.
ಆದರೆ ಸಮೀರ್ ವಾಂಖೆಡೆ ಅವರು ಇದಕ್ಕೆ ಕೇವಲ 8.75 ಲಕ್ಷವನ್ನು ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ವರದಿ ಹೇಳಿವ ಪ್ರಕಾರ ಸಮೀರ್ ವಾಂಖೆಡೆ ಹೇಳಿಕೊಂಡಿರುವ ಹಣ ಕೇವಲ (8.75 ಲಕ್ಷ) ವಿಮಾನ ಪ್ರಯಾಣದ ವೆಚ್ಚವನ್ನು ಭರಿಸುತ್ತದೆ. ವಿದೇಶದಲ್ಲಿ ತಂಗಲು, ಸುತ್ತಾಡಲು ಖರ್ಚು ಮಾಡಿದ ಹಣವೆಷ್ಟು ಎಂದು ವರದಿ ಕೇಳಿದೆ.
ವರದಿಯು ಸಮೀರ್ ವಾಂಖೆಡೆ ಅವರ ಆದಾಯದ ಮೂಲಗಳಿಗೆ ಅಸಮಾನವಾಗಿರುವ ದುಬಾರಿ ವಾಚ್ಗಳು ಮತ್ತು ಇತರ ಆಸ್ತಿಗಳ ಸರಣಿಯನ್ನು ಉಲ್ಲೇಖಿಸುತ್ತದೆ. ಅವರು ಮುಂಬೈನಲ್ಲಿ ನಾಲ್ಕು ಫ್ಲಾಟ್ಗಳು ಮತ್ತು ವಾಶಿಮ್ನಲ್ಲಿ 416.88 ಎಕರೆ ಭೂಮಿಯನ್ನು ಹೊಂದಿದ್ದಾರೆ. ಏಜೆನ್ಸಿಗೆ ನೀಡಿದ ಸಂವಹನದಲ್ಲಿ, ಸಮೀರ್ ವಾಂಖೆಡೆ ಅವರು ಗೋರೆಗಾಂವ್ನಲ್ಲಿ 2.45 ಕೋಟಿ ಮೌಲ್ಯದ ಐದನೇ ಫ್ಲಾಟ್ಗೆ ₹ 82.8 ಲಕ್ಷ ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮದುವೆಗೂ ಮುನ್ನ ಅವರು ಮತ್ತು ಅವರ ಪತ್ನಿ 1.25 ಕೋಟಿಗೆ ಖರೀದಿಸಿದ ಫ್ಲ್ಯಾಟ್ ಬಗ್ಗೆಯೂ ಉಲ್ಲೇಖವಿದೆ. ಈ ಹಣದ ಮೂಲ ನಿಗೂಢವಾಗಿಯೇ ಉಳಿದಿದೆ.
ವಾಂಖೆಡೆ ಮತ್ತು ಅವರ ಪತ್ನಿಯ ಆದಾಯ ತೆರಿಗೆ ರಿಟರ್ನ್ಸ್ ಅವರ ವಾರ್ಷಿಕ ಆದಾಯ 45,61,460 ಎಂದು ತೋರಿಸುತ್ತದೆ. ಈ ಹಣದಲ್ಲಿ ಅವರು ತಮ್ಮ ವಿದೇಶಿ ಪ್ರವಾಸಗಳು ಮತ್ತು ಇತರ ಸ್ವತ್ತುಗಳಿಗೆ ಹೇಗೆ ಹಣವನ್ನು ನೀಡಿದ್ದಾರೆ ಎಂಬುದನ್ನು ವಿವರವಾಗಿಲ್ಲ ಎಮದು ವರದಿ ಹೇಳಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications