ಸಾಧು ಚಿನ್ನದ ಉತ್ಖನನಕ್ಕೆ ಸುಪ್ರೀಂಕೋರ್ಟ್ ಅಸ್ತು
ನವದೆಹಲಿ,
ಅ. 21- ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ದುಂಡಿಯಾ ಖೇಡಾ ಗ್ರಾಮದಲ್ಲಿ ಚಿನ್ನದ ನಿಧಿ ಶೋಧಕ್ಕೆ ಕೇಂದ್ರ ಸರಕಾರ ಮುಂದಾಗಿರುವುದರ ಬಗ್ಗೆ ತನ್ನ ಬಳಿ ಸಂಪೂರ್ಣ ಮಾಹಿತಿಯಿದೆ. ನಿಧಿ ಶೋಧಕ್ಕೆ ಯಾರದೇ ಅಭ್ಯಂತರ ಬೇಡ. ಹಾಗಾಗಿ ದುಂಡಿಯಾ ಖೇಡಾ ಗ್ರಾಮದಲ್ಲಿ ನಿಧಿ ಶೋಧ ಅಬಾಧಿತವಾಗಿ ನಡೆಯಲಿ' ಎಂದು ಸುಪ್ರೀಂಕೋರ್ಟ್ ಇಂದು ಹೇಳಿದೆ. id="toptextpromo"> id='are-slot-1' class='oiad oi-axt oiadv'>ಯಾವುದೋ
ಸಾಧು (ಶೋಭನ ಸರಕಾರ್) ಮಾತು ನಂಬಿ ಕೇಂದ್ರ ಸರಕಾರವು ನಿರ್ದಿಷ್ಟ ಸ್ಥಳದಲ್ಲಿ ಭೂ ಅಗೆತ ಆರಂಭಿಸುವಂತೆ ಭಾರತೀಯ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಿದೆ. ಉತ್ಖನನದಿಂದ ಲಭಿಸುವ ನಿಧಿಯನ್ನು ಬಹಿರಂಗಗೊಳಿಸಿದರೆ ಅದು ಮಾಯವಾಗುವ ಸಾಧ್ಯತೆಯಿದೆ. ಹಾಗಾಗಿ ಉತ್ಖನನಕ್ಕೆ ತಡೆ ನೀಡಬೇಕು' ಎಂದು ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.ಮುಖ್ಯ ನ್ಯಾಯಾಧೀಶರಾದ ಪಿ ಸದಾಶಿವಂ ಮತ್ತು ನ್ಯಾಐಮೂರ್ತಿ ರಂಜನ್ ಗೊಗೋಯ್ ಅವರ ಪೀಠ ಈ ಆದೇಶ ನೀಡಿದೆ.
id='are-slot-2' class='oiad oi-axt oiadv'>

ನರೇಂದ್ರ ಮೋದಿ ಲೇವಡಿ
ಈ ಮಧ್ಯೆ, ಸಾಧುಸಂತರ ಮಾತುಗಳನ್ನೆಲ್ಲಾ ಕೇಳಿಕೊಂಡು ಕೇಂದ್ರವು ಅಪಾರ ಪ್ರಮಾಣದ ನಿಧಿ ಶೋಧ ಕಾರ್ಯದಲ್ಲಿ ತೊಡಗಿದೆ. ಆದರೆ ಇದು ವಾಸ್ತವಕ್ಕೆ ದೂರವಾದ/ರಹಸ್ಯವಿಚಾರ. ಇದರ ಬದಲಿಗೆ ಸ್ವಿಸ್ ಬ್ಯಾಂಕುಗಳಲ್ಲಿರುವ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವ ಬಗ್ಗೆ ಕೇಂದ್ರವು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಳೆದ ವಾರ ಸಾಧು ಮತ್ತು ಕೇಂದ್ರ ಸರಕಾರವನ್ನು ಒಟ್ಟೊಟ್ಟಿಗೆ ಲೇವಡಿ ಮಾಡಿದ್ದರು.

ಮೋದಿಯನ್ನು ತರಾಟೆಗೆ ತೆಗೆದುಕೊಂಡ ಸಾಧು
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಾಧು ಶೋಭನ ಸರಕಾರ್ ಅವರು ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 'ಮೋದಿ ತಮ್ಮ ಮಾತುಗಳನ್ನು ಲೇವಡಿ ಮಾಡಿರುವುದು ಸರ್ವತಾ ಸಾಧುವಲ್ಲ. ಬೇಕಾದರೆ ಮೋದಿ ಬಹಿರಂಗ ಚರ್ಚೆಗೆ ಬರಲಿ. ತಮ್ಮದೇ ಪಕ್ಷದ ಎನ್ ಡಿಎ ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಇದೇ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುವ ಬಗ್ಗೆ ಆಲೋಚಿಸಲೂ ಇಲ್ಲ ಏಕೆ?' ಎಂದು ಪ್ರಶ್ನಿಸಿದ್ದಾರೆ.

ಮೋದಿಯಿಂದ ವಿಮುಖರಾಗುವ ವಿಫಲ ಪ್ರಯತ್ನ
ಈ ಮಧ್ಯೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಮೋದಿ ಭಾರಿ ಪ್ರಚಾರದಲ್ಲಿ ತೊಡಗಿದ್ದು, ದೇಶವಾಸಿಗಳ ಗಮನವನ್ನು ಅದರಿಂದ ಬೇರೆಡೆ ಸೆಳೆಯಲು ಚಿನ್ನದ ನಿಧಿ ಶೋಧ ಎಂಬ ಅವಾಸ್ತವಿಕ ವಿಚಾರವನ್ನು ತೇಲಿಬಿಟ್ಟಿದೆ. ಸಾಧು ಚಿನ್ನದ ನಿಧಿ ಶೋಧದ ಮೂಲಕ ಜನರು ಮೋದಿಯಿಂದ ವಿಮುಖರಾಗುವಂತೆ ವಿಫಲ ಪ್ರಯತ್ನ ನಡೆಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಪಕ್ಕದಲ್ಲೇ ಇದೆ 2,500 ಟನ್ ಚಿನ್ನ!
ಈ ಮಧ್ಯೆ, ಕೇಂದ್ರ ಸರಕಾರವು ಚಿನ್ನದ ಶೋಧ ಕಾರ್ಯವನ್ನು ನಾಲ್ಕನೆಯ ದಿನವಾದ ಸೋಮವಾರವೂ ಮುಂದುವರಿಸಿದ್ದು ಹೆಚ್ಚಿನ ಪ್ರಗತಿಯೇನೂ ಕಂಡುಬಂದಿಲ್ಲ. ಆದರೆ ಜನರ ಉನ್ನಾವೋವನ್ನು ಬಿಟ್ಟು ಪಕ್ಕದ ಅದಾಂಪುರದತ್ತ (ಫತೇಪುರದ ಬಳಿ) ಗಮನ ಹರಿದಿದೆ. ಇಲ್ಲಿ ಪುರಾಥನ ಶಿವನ ದೇವಾಲಯವಿದ್ದು (ಪಕ್ಕದ ಚಿತ್ರ) ಅದರ ಆಸುಪಾಸಿನಲ್ಲಿ ಉನ್ನಾವೋಗಿಂತಲೂ ಹೆಚ್ಚು ಪ್ರಮಾಣದ ಭಾರಿ ನಿಧಿ ಇಲ್ಲಿದೆ ಎಂಬ ಸುದ್ದಿ ಹಬ್ಬಿದೆ. ಸಾಧು ಶೋಭನ ಸರಕಾರ್ ಅವರೇ ಈ ಬಗ್ಗೆ ಸುಳಿವು ನೀಡಿದ್ದು, ಗಂಗಾ ನದಿ ತಟದಲ್ಲಿರುವ ಅದಾಂಪುರದಲ್ಲಿ 2,500 ಟನ್ ಚಿನ್ನವಿದೆ ಎಂದಿದ್ದಾರೆ!












Click it and Unblock the Notifications