ಯೂಟ್ಯೂಬ್ ನಿಂದ ಕಳ್ಳತನ ಕಲಿತ 'ಬಾಡಿಗೆ' ಕಳ್ಳರು!
ಯೂ ಟ್ಯೂಬಿನಲ್ಲಿ ಕಳ್ಳತನ ಕಲಿತು, ಅದನ್ನು ಪ್ರಯೋಗಿಸುವುದಕ್ಕೆ ಹೊರಟ ಇಬ್ಬರು ವಿದ್ಯಾವಂತ ಕಳ್ಳರ ಕತೆಯಿದು!
ತಮಿಳುನಾಡು, ಮಾರ್ಚ್ 23: ಯೂಟ್ಯೂಬಿನಲ್ಲಿ ಕಳ್ಳತನ ಕಲಿತು, ತಮಿಳುನಾಡಿನ ಹೊಸೂರಿನ ಸುರೇಶ್ ಮತ್ತು ಲಕ್ಷ್ಮಿ ಎಂಬುವವರ ಮನೆಗೆ ಕಳ್ಳತನಮಾಡುವುದಕ್ಕೆಂದು ಬಂದಿದ್ದ ಇಬ್ಬರು 'ವಿದ್ಯಾವಂತ ಕಳ್ಳರು' ಇದೀಗ ಪೊಲೀಸರ ಅತಿಥಿಯಾಗಿದ್ದಾರೆ!
ಸುವೇತ ಮತ್ತು ಯತೀಶ್ ಎಂಬ ಇವರಿಬ್ಬರಲ್ಲಿ ಒಬ್ಬರು ಇಂಜಿನಿಯರಿಂಗ್ ಪದವೀಧರರಾದರೆ, ಇನ್ನೊಬ್ಬರು ಸ್ನಾತಕೋತ್ತರ ಪದವೀಧರರು! ಬೆಂಗಳೂರಿನ ಕಾಲೇಜೊಂದರಲ್ಲಿ ಒಟ್ಟಿಗೇ ಓದಿದ್ದ ಇವರು ಆಗಿನಿಂದಲೇ ಖಾಸಾ ಸ್ನೇಹಿತರು.[ಅಂಗಡಿಗೆ ನುಗ್ಗಿ ವಿವಿಧ ಬ್ರ್ಯಾಂಡ್ ಮೊಬೈಲ್ ಕದ್ದ ಖತರ್ನಾಕ್ ಕಳ್ಳರು]

ಮಾರ್ಚ್ 7 ರಂದು ಮಧ್ಯಾಹ್ನದ ಸಮಯದಲ್ಲಿ ಟು ಲೆಟ್ ಎಂದು ಬೋರ್ಡ್ ಹಾಕಲಾಗಿದ್ದ ಲಕ್ಷ್ಮಿ ಮತ್ತು ಸುರೇಶ್ ಅವರ ಮನೆಗೆ ಇವರು ಮನೆ ಬಾಡಿಗೆ ಕೇಳಿಕೊಂಡು ಹೋಗಿದ್ದಾರೆ. ಮನೆಯಲ್ಲಿ ಲಕ್ಷ್ಮಿಯೊಬ್ಬರೇ ಇದ್ದಿದ್ದರಿಂದ ಅವರ ಯೋಜನೆ ಸುಲಭವಾಗಿ ಕೈಗೂಡಬಹುದು ಎಂದುಕೊಂಡಿದ್ದಾರೆ.[ಬುಧವಾರ ಗುಂಡಿಬೈಲಿನಲ್ಲಿ ಬೆಳ್ಳಂಬೆಳಗ್ಗೆ ಸರಣಿಗಳ್ಳತನ]
ತಾವಿಬ್ಬರೂ ಅಣ್ಣ-ತಂಗಿ ಎಂದು ಪರಿಚಯಿಸಿಕೊಂಡಿರುವ ಇವರು, ಲಕ್ಷ್ಮಿ ಅವರ ಬಳಿ ಕುಡಿಯುವುದಕ್ಕೆ ನೀರು ಕೇಳಿದ್ದಾರೆ.
ನೀರು ತರುವುದಕ್ಕೆಂದು ಹೋಗಿದ್ದ ಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿ ಮನೆ ದರೋಡೆಗೆ ಯತ್ನಿಸಿದ್ದಾರೆ. ಆದರೆ ತಕ್ಷಣವೇ ಸಮಯಪ್ರಜ್ಞೆ ಮೆರೆದ ಲಕ್ಷ್ಮಿ ಅಕ್ಕ ಪಕ್ಕದ ಮನೆಯವರಿಗೆಲ್ಲ ಕೇಳುವಂತೆ ಜೋರಾಗಿ ಕೂಗಿದ್ದಾರೆ.ಇದರಿಂದ ಆತಂಕಗೊಂಡ ಕಳ್ಳರು ತಪ್ಪಿಸಿಕೊಂಡು ಓಡಿದ್ದಾರೆ.[ಕಟೀಲು ದೇಗುಲ ಮುಕ್ತೇಸರ ಮನೆ ಕಳವು: 12ನೇ ಆರೋಪಿ ಬಂಧನ]
ಘಟನೆ ನಡೆದು ಎರಡು ವಾರದ ನಂತರ ಇದೀಗ ಈ ಇಬ್ಬರೂ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹೊಸೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೀವೂ ಮನೆಯ ಮುಂದೆ 'ಟು ಲೆಟ್' ಅಂತ ಬೋರ್ಡ್ ಏನಾದ್ರೂ ಹಾಕಿದ್ರೆ ಯಾವ್ದಕ್ಕೂ ಹುಷಾರಾಗಿರಿ..!
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications