Tripura Election Results 2023 : ಮುನ್ನಡೆ ಕಾಯ್ದುಕೊಂಡ ಬಿಜೆಪಿ, ಬುಡಕಟ್ಟು ಮತಗಳು ತಿಪ್ರಾ ಮೋಥಾಗೆ!
ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಸಿಪಿಎಂನಿಂದ ಕೌನ್ಸಿಲ್ ಅನ್ನು ವಶಪಡಿಸಿಕೊಂಡು ಇತಿಹಾಸವನ್ನು ನಿರ್ಮಿಸಿದ ಕಾರಣದಿಂದ ತಿಪ್ರಾ ಮೋಥಾ ಹೆಚ್ಚು ಪ್ರಚಾರಕ್ಕೆ ಬಂದಿದೆ.
ಅಗರ್ತಲ, ಮಾರ್ಚ್ 02: ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲಿ ಪ್ರದ್ಯೋತ್ ದೇಬ್ ಬರ್ಮಾ ಅವರ ತಿಪ್ರಾ ಮೋಥಾ ಕಿಂಗ್ಮೇಕರ್ ಆಗದಿದ್ದರೂ ಸಹ ಉತ್ತಮ ಸ್ಥಾನಗಳನ್ನು ಗಳಿಸುವತ್ತ ಹೆಜ್ಜೆಯಿರಿಸಿದೆ. ಮತ ಏಣಿಕೆಯ ಆರಂಭಿಕ ಪ್ರಕ್ರಿಯೆಯಿಂದಲೂ ಬಿಜೆಪಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ - ಸಿಪಿಎಂ ಮೈತ್ರಿಕೂಟದ ಕೊರಳಿಗೆ ಉಸಿರುಗಟ್ಟಿಸುವ ಮೂಲಕ ತಿಪ್ರಾ ಮೋಥಾ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
*ಪ್ರದ್ಯೋತ್ ದೇಬ್ ಬರ್ಮಾ ಅವರ ತಿಪ್ರಾ ಮೋಥಾ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು*
1. ಉಪ ಮುಖ್ಯಮಂತ್ರಿ ಸ್ಥಾನವಾದ ಚರಿಲಂನಲ್ಲಿ ತಿಪ್ರಾ ಮೋಥಾ ಮುನ್ನಡೆ ಸಾಧಿಸಿದೆ.

2. ತೆಲಿಯಮುರ ಕ್ಷೇತ್ರದಲ್ಲೂ ತಿಪ್ರಾ ಮೋತಾ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ
3. ತಿಪ್ರಾ ಮೋಥಾವನ್ನು ತ್ರಿಪುರಾ ಚುನಾವಣೆ 2023 ರ ಕಿಂಗ್ಮೇಕರ್ ಎಂದು ಕರೆಯಲಾಗಿದೆ. ಏಕೆಂದರೆ ಕಾಂಗ್ರೆಸ್ ಮೈತ್ರಿಕೂಟವು ಈಗಾಗಲೇ ಟಿಪ್ರಾ ಮೋಥಾವನ್ನು ತನ್ನ ಮೈತ್ರಿಗೆ ಸೇರಲು ಸ್ವಾಗತಿಸಿದೆ. ಆದರೆ, ಬಿಜೆಪಿ ಈಗಾಗಲೇ ಬಹುಮತದತ್ತ ಮುನ್ನಡೆ ಸಾಧಿಸಿದ್ದು, ತಿಪ್ರಾ ಮೋಥಾ ಕಿಂಗ್ಮೇಕರ್ ಆಗುವ ಸಾಧ್ಯತೆ ಕಡಿಮೆ.
4. ಪ್ರದ್ಯೋತ್ ದೇಬ್ ಬರ್ಮಾ ಅವರು 2019 ರಲ್ಲಿ ತಿಪ್ರಾ ಮೋಥಾವನ್ನು ರಚಿಸಿದರು.
5. ತಿಪ್ರಾ ಮೋಥಾ ತ್ರಿಪುರಾದಲ್ಲಿ ಸಾಮಾಜಿಕ ಸಂಘಟನೆಯಾಗಿ ಪ್ರಾರಂಭವಾಯಿತು. 2021 ರಲ್ಲಿ, ಸಾಮಾಜಿಕ ಸಂಘಟನೆಯು ರಾಜಕೀಯ ಪಕ್ಷವಾಯಿತು.
6. ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಸಿಪಿಎಂನಿಂದ ಕೌನ್ಸಿಲ್ ಅನ್ನು ವಶಪಡಿಸಿಕೊಂಡು ಇತಿಹಾಸವನ್ನು ನಿರ್ಮಿಸಿದ ಕಾರಣದಿಂದ ಹೆಚ್ಚು ಪ್ರಚಾರಕ್ಕೆ ಬಂದಿದೆ.
7. ಮಾಜಿ ಕಾಂಗ್ರೆಸ್ಸಿಗ ಪ್ರದ್ಯೋತ್ ದೇಬ್ ಬರ್ಮಾ ಅವರು ತಿಪ್ರಾ ಮೋಥಾದ ಮುಖ್ಯಸ್ಥರಾಗಿದ್ದಾರೆ.

8. ತಿಪ್ರಾ ಮೋತಾ 42 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬುಡಕಟ್ಟು ಪರಿಷತ್ತಿನ 20 ಬುಡಕಟ್ಟು ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ.
9. ತಿಪ್ರಾ ಮೋಥಾ ಸ್ಥಳೀಯ ತ್ರಿಪುರಿಗಳ ಪರವಾಗಿ ಹೆಚ್ಚು ಕೆಲಸ ಮಾಡಲು ಬಯಸಿದೆ.
10. ಪ್ರದ್ಯೋತ್ ದೇಬ್ ಬರ್ಮಾ ಅವರು ಚುನಾವಣೆಗೆ ಮುಂಚಿತವಾಗಿ ಯಾವುದೇ ಮೈತ್ರಿಗೆ ಒಪ್ಪಿಗೆ ನೀಡಿಲ್ಲ.
60 ಸ್ಥಾನಗಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ತಿಪ್ರಾ ಮೋತಾ ರಾಜ್ಯದಲ್ಲಿ ಬುಡಕಟ್ಟು ಮತಗಳನ್ನು ಯಶಸ್ವಿಯಾಗಿ ತನ್ನ ಬತ್ತಳಿಕೆಗೆ ಎಳೆದುಕೊಂಡಿದ್ದು, ಪ್ರತಿಪಕ್ಷಗಳ ಮತಗಳನ್ನು ವಿಭಜಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications