ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏನು ಮಾಡಬಹುದು?
ಪ್ರತಿ ವರ್ಷ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನ ಬರುತ್ತದೆ. ನಾವು ಆ ಬಗ್ಗೆ ಮಾತನಾಡುತ್ತೇವೆ'. ನಂತರ ಸುಮ್ಮನಾಗುತ್ತೇವೆ. ಸಮಾಜ ಬದಲಾವಣೆ ಆಗಬೇಕು ಎಂದು ಭಾಷಣ ಮಾಡಲು ಸಾಧ್ಯವಾಗದಿದ್ದರೂ ಸ್ನೇಹಿತರ ಜತೆಯಾದರೂ ಹಲುಬುತ್ತೇವೆ.
ಗ್ಯಾರೇಜ್, ಹೋಟೆಲ್, ಬೀಡಾ ಅಂಗಡಿ, ಬಟ್ಟೆ ಅಂಗಡಿ, ಸಿನಿಮಾ ನಿರ್ಮಾಣ ಹೀಗೆ ನೂರಾರು ಜಾಗಗಳಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಲೇ ಇದ್ದಾರೆ. ಸರ್ಕಾರಗಳು ನಿಯಂತ್ರಣ ಮಾಡುತ್ತೇನೆ ಎಂದು ಹೇಳಿ ಕಾನೂನು ಜಾರಿ ಮಾಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ.[ಮಕ್ಕಳಿಗೆ ಸ್ವಾವಲಂಬನೆ ಕಲಿಸಿಕೊಟ್ಟ ಸತ್ಯಾರ್ಥಿ]

ಒಬ್ಬ ಸಾಮಾನ್ಯ ನಾಗರಿಕ ಬಾಲಕಾರ್ಮಿಕ ಪದ್ಧತಿ ತಡೆಗೆ ಯಾವ ರೀತಿ ಕೈಜೋಡಿಸಬಹುದು ಎಂಬುದು ಸಮಸ್ಯೆಯ ಒಂದು ಮುಖವಾದರೆ, ಬಾಲ ಕಾರ್ಮಿಕರು ಹುಟ್ಟಿಕೊಳ್ಳಲು ಕಾರಣವೇನು? ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೆಲಸ ಮಾಡುವಂತೆ ಮಾಡಿದ ಸಮಾಜ ನಮ್ಮದೇ ಅಲ್ಲವೇ? ಎಂಬುದು ಇನ್ನೊಂದು ಮುಖ.
ಹೊಟೆಲ್ ಗೆ ತಿಂಡಿ ತಿನ್ನಲು ಹೋದ ನಾವೇ ಟೇಬಲ್ ಮೇಲಿದ್ದ ಬಟ್ಟಲನ್ನು ತೆಗೆಯದ ಹುಡುಗನನ್ನು ಗದರಿಸುತ್ತೇವೆ. ಮನೆಗೆ ಬಂದು ಬಾಲಕಾರ್ಮಿಕ ವಿರೋಧಿ ದಿನ ಆಚರಣೆ ಸುದ್ದಿ ಓದಿ ಮಲಗುತ್ತೇವೆ. ಹಾಗಾದರೆ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಮದ್ದು ಯಾವುದು? ಉತ್ತರ ಸರಳವಾಗಿಲ್ಲ.[ಹಳ್ಳಿಮನೆ ಹೋಟೆಲ್ ನಿಂದ ಬಾಲ ಕಾರ್ಮಿಕರಿಗೆ ಮುಕ್ತಿ]
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲೇ (1948) ರಲ್ಲೇ ಬಾಲಕಾರ್ಮಿಕ ವಿರೋದಿ ಕಾನೂನು ಜಾರಿ ಮಾಡಲಾಯಿತು. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಯಿತು. ನಂತರ ಕಾಲಕಾಲಕ್ಕೆ ಕಾನೂನಿನಲ್ಲಿ ಇದ್ದ ಲೋಪಗಳನ್ನು ತಿದ್ದುಪಡಿ ಮಾಡಲಾಯಿತು. ಇವೆಲ್ಲದರ ಅನುಷ್ಠಾನ ಹೇಗಿದೆ ಎಂಬುದನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಯೇ ಹೇಳಬೇಕು.
ಕೇವಲ ಆಚರಣೆ ಮಾಡಿ ಸಾಗಹಾಕಿದರೆ ಸಮಸ್ಯೆಗಳ ಪರಿಹಾರ ಸಾಧ್ಯವೇ ಇಲ್ಲ. ಆಚರಣೆ ಮಾಡಿ ಜಾಹೀರಾತಿಗಳನ್ನು ನೀಡಿದರೆ ಸಮಸ್ಯೆ ಬಗೆ ಹರಿದಂತೆ ಆಗುವುದಿಲ್ಲ.
ಇವುಗಳನ್ನು ಒಮ್ಮೆ ಓದಿ
* 14 ವರ್ಷದ ಒಳಗಿನ ಮಕ್ಕಳಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ
* ಶಿಕ್ಷಣ ಮಕ್ಕಳ ಹಕ್ಕು, ಕಡ್ಡಾಯವಾಗಿ ಶಾಲೆಗೆ ಕಳಿಸಿ
* 14 ವರ್ಷದ ಒಳಗಿನ ಮಕ್ಕಳಿಂದ ದುಡಿಸಿಕೊಂಡರೆ 20 ಸಾವಿರ ರೂ. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು.
* ಹೆಲ್ಪ್ ಲೈನ್- 1098,
* ದುಡಿಯುವ ಮಕ್ಕಳನ್ನು ಕಂಡರೆ ದೂರು ನೀಡಿ: 080 22453549, 080 26541348 ಮತ್ತು ವೆಬ್ ತಾಣ https://www.karnataka.gov.in/karnatakachildlabour/home.aspx ಇ ಮೇಲ್ [email protected] ಗೆ ಸಂಪರ್ಕ ಮಾಡಿ ದೂರು ದಾಖಲಿಸಬಹುದು. ಜತೆಗೆ ಆಯಾ ವಿಭಾಗದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications