ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಮೂವರು ಲಷ್ಕರ್ ಉಗ್ರರು ಮಟ್ಯಾಷ್
ಶ್ರೀನಗರ, ನವೆಂಬರ್ 21: ಕಣವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಮೂವರು ಲಷ್ಕರ್ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಮಂಗಳವಾರ ಭಾರತೀಯ ಸೇನೆ ಹೊಡೆದುರುಳಿಸಿದೆ.
ಮೃತ ಉಗ್ರರೆಲ್ಲರೂ ಪಾಕಿಸ್ತಾನ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಮೂಲದವರಾಗಿದ್ದು, ಕಣಿವೆ ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದರು ಎಂದು ಶಂಕಿಸಲಾಗಿದೆ.

ಇದೇ ಕಾರಣಕ್ಕೆ ಶಸ್ತ್ರ ಸಜ್ಜಿತ ಉಗ್ರರನ್ನು ಸಿದ್ಧ ಪಡಿಸಿ ದಾಳಿಗೆ ಮುಂದಾಗಿತ್ತು. ಆದರೆ, ಭಾರತೀಯ ಸೈನಿಕರ ಸಮಯ ಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಡೆದಂತಾಗಿದೆ
ಕಾರ್ಯಾಚರಣೆ ವೇಳೆ ಐಎಎಫ್ ನ ಓರ್ವ ಯೋಧ ಕೂಡ ಹುತಾತ್ಮನಾಗಿದ್ದು, ಹುತಾತ್ಮ ಯೋಧನನ್ನು ಐಎಎಫ್ ನ ಗರುಡಾ ಸಿಬ್ಬಂದಿ ಎಂದು ತಿಳಿದುಬಂದಿದೆ.












Click it and Unblock the Notifications