ಇದೇನು ಗಡ್ಕರಿಯವರೇ, ಗೋ ರಕ್ಷಕರ ಬಗ್ಗೆ ಹಿಂಗೆ ಹೇಳಿಬಿಟ್ರಿ?!!
ಬಿಜೆಪಿಯು ಗೋ ಮಾಂಸ ನಿಷೇಧದ ಕುರಿತಾದ ನಿಲುವು ಹೊಂದಿದೆ. ಹಾಗೆಂದ ಮಾತ್ರಕ್ಕೆ ಗೋ ರಕ್ಷಣೆಗೆ ಸ್ವಯಂ ಸೇವಕರನ್ನು ಬಿಟ್ಟಿದೆ ಎಂದರ್ಥವಲ್ಲ ಎಂದೂ ಗಡ್ಕರಿ ಹೇಳಿರುವುದು ಗೋ ಸಂರಕ್ಷರು ಒಮ್ಮೆ ತಮ್ಮನ್ನು ತಾವು ಪರಾಮರ್ಶಿಸಿಕೊಳ್ಳುವಂತಾಗಿದೆ.
ನವದೆಹಲಿ, ಮೇ 26: ''ಗೋ ಸಂರಕ್ಷಣೆ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿಯುವವರು ಬಿಜೆಪಿಯವರೂ ಅಲ್ಲ, ಆರೆಸ್ಸೆಸ್ ನವರಲ್ಲ ಅಥವಾ ಸಂಘ ಪರಿವಾರದವರೂ ಅಲ್ಲ'' - ಗೋ ಸಂರಕ್ಷಣೆ ಅಭಿಯಾನದ ಸ್ವಯಂ ಸೇವಕರ ಬಗ್ಗೆ ಇಂಥದ್ದೊಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಸಾಮಾನ್ಯವಾಗಿ, ದೇಶದ ಯಾವುದೇ ಭಾಗದಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ಗಲಾಟೆ, ಜಗಳ, ಹಲ್ಲೆಗಳು ನಡೆದರೆ ಅದಕ್ಕೆ ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘ ಪರಿವಾರದವರ ಕುಮ್ಮಕ್ಕಿತ್ತು ಎಂದು ಜನರು ಭಾವಿಸುತ್ತಿದ್ದರು. ಆದರೆ, ನಿತಿನ್ ಗಡ್ಕರಿಯವರ ಈ ಹೇಳಿಕೆ ಇಂಥ ನಂಬಿಕೆಗಳನ್ನು ತಲೆಕೆಳಗು ಮಾಡುವಂತಾಗಿದೆ.

ಗೋ ರಕ್ಷಕರ ಬಗ್ಗೆ ಮತ್ತೊಂದು ಮಾತು ಹೇಳಿರುವ ನಿತಿನ್, ''ಬಿಜೆಪಿಯು ಗೋ ಮಾಂಸ ನಿಷೇಧದ ಕುರಿತಾದ ನಿಲುವು ಹೊಂದಿದೆ. ಹಾಗೆಂದ ಮಾತ್ರಕ್ಕೆ ಗೋ ರಕ್ಷಣೆಗೆ ಸ್ವಯಂ ಸೇವಕರನ್ನು ಬಿಟ್ಟಿದೆ ಎಂದರ್ಥವಲ್ಲ'' ಎಂದಿದ್ದಾರೆ.
ಇದು ಈವರೆಗೆ ಗೋವುಗಳ ಸಾಗಾಣಿಗೆ ವಾಹನಗಳ ಮೇಲೆ, ಅಕ್ರಮ ಗೋ ಕಸಾಯಿಖಾನೆಗಳ ಮೇಲೆ ದಾಳಿ ನಡೆಸುತ್ತಿದ್ದ ಸ್ವಯಂ ಗೋ ರಕ್ಷಕರು ಮುಂದೆ ಇಂಥ ಕೆಲಸಗಳಿಗೆ ಅಣಿಯಾಗುವ ಮುಂಚೆ ಹತ್ತು ಸಾರಿ ಯೋಚಿಸುವಂತೆ ಮಾಡಿದೆ.
ಅದೇನೋ ಸರಿ. ಆದರೆ, ನಿತಿನ್ ಅವರ ಈ ಹೇಳಿಕೆ 'ಜಾಣತನ'ದಿಂದ ಕೂಡಿದೆ ಎಂಬುದಲ್ಲಿ ಎರಡು ಮಾತಿಲ್ಲ ಎಂದೆನಿಸದಿರದು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications