Get Updates
Get notified of breaking news, exclusive insights, and must-see stories!

ತಮಿಳುನಾಡು ವಿಧಾನಸಭೆ ಗದ್ದಲ: ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಶಾಸಕರ ಉಚ್ಚಾಟನೆ

ಚೆನ್ನೈ, ಅಕ್ಟೋಬರ್‌ 18: ತಮಿಳುನಾಡು ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಇತರ ಎಐಎಡಿಎಂಕೆ ಶಾಸಕರನ್ನು ವಿಧಾನಸಭೆಯಲ್ಲಿ ಗದ್ದಲದ ನಡುವೆಯೇ ಉಚ್ಚಾಟಿಸಲು ಸ್ಪೀಕರ್ ಅಪ್ಪಾವು ಮಂಗಳವಾರ ಆದೇಶ ನೀಡಿದ್ದಾರೆ.

ವಿಧಾನಸಭೆಯೊಳಗೆ ಎಲ್ಲಿ ಕುಳಿತುಕೊಳ್ಳಬೇಕು ಎಂಬ ಬಗ್ಗೆ ತಕರಾರು ಎದ್ದಿತ್ತು. ಉಚ್ಚಾಟನೆ ಆದೇಶದ ನಂತರವೂ ವಿರೋಧ ಪಕ್ಷದ ನಾಯಕರು ಗದ್ದಲವನ್ನು ಮುಂದುವರೆಸಿದರು. ವಿಧಾನಸಭೆಯೊಳಗೆ ಎಲ್ಲಿ ಕುಳಿತುಕೊಳ್ಳಬೇಕು ಎಂದು ಒತ್ತಾಯಿಸುವ ಹಕ್ಕು ಯಾರಿಗೂ ಇಲ್ಲ. ನಾಳೆ ಎಐಎಡಿಎಂಕೆ ಸದಸ್ಯರು ವಿಧಾನಸಭೆ ಅಧಿವೇಶನಗಳಿಗೆ ಹಾಜರಾಗಬಹುದು. ಆದರೆ ಇಂದು ಅಲ್ಲ ಎಂದು ಸ್ಪೀಕರ್ ಅಪ್ಪಾವು ಹೇಳಿದರು.

ಪ್ರತಿಪಕ್ಷದ ಉಪನಾಯಕರ ಆಸನ ವ್ಯವಸ್ಥೆ ಕುರಿತು ಪ್ರಸ್ತಾಪಿಸಲು ಪ್ರಶ್ನೋತ್ತರ ಅವಧಿಯ ನಂತರ ಸಮಯಾವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದರು. ಪ್ರಸ್ತುತ ಆಸನ ವ್ಯವಸ್ಥೆ ಪ್ರಕಾರ, ಇಪಿಎಸ್ ಮತ್ತು ಒ ಪನೀರ್‌ಸೆಲ್ವಂ ಇಬ್ಬರೂ ಕ್ರಮವಾಗಿ ವಿರೋಧ ಪಕ್ಷದ ನಾಯಕ ಮತ್ತು ಉಪ ನಾಯಕನಾಗಿ ಮೊದಲ ಸಾಲಿನಲ್ಲಿ ಒಟ್ಟಿಗೆ ಕುಳಿತುಕೊಳ್ಳುತ್ತಾರೆ.

ಇಂದಿನ ವಿಧಾನಸಭಾ ಅಧಿವೇಶನಕ್ಕೂ ಮುನ್ನ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಕೆಲವು ಶಾಸಕರು ನನ್ನ ಕೋಣೆಯಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಅವರು ನನಗೆ ಈಗಾಗಲೇ ಕಳುಹಿಸಿರುವ ನಾಲ್ಕು ಪತ್ರಗಳನ್ನು ನನಗೆ ನೀಡಿದರು. ಅದೇ ಸಮಯದಲ್ಲಿ ಎಐಎಡಿಎಂಕೆ ಚುನಾವಣಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಪಿಎಸ್ ಮತ್ತು ಒಪಿಎಸ್ ಇಬ್ಬರೂ ನನ್ನ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಹಾಗಾಗಿ ಸಭಾಧ್ಯಕ್ಷರಿಗೆ ಮಾತ್ರ ನಿರ್ಧರಿಸುವ ಹಕ್ಕು ಇದೆ ಎಂದು ಅಪ್ಪಾವು ಹೇಳಿದರು.

ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಪಿಎಸ್, "ಎಐಎಡಿಎಂಕೆಯ 60ಕ್ಕೂ ಹೆಚ್ಚು ಶಾಸಕರು ಒಪಿಎಸ್ ಪ್ರತಿಪಕ್ಷದ ಉಪನಾಯಕರಾಗಲು ಬಯಸುವುದಿಲ್ಲ. ನಾವು ಸ್ಪೀಕರ್‌ಗೆ ಈ ಬಗ್ಗೆ ಪತ್ರ ನೀಡಿದ್ದೇವೆ. ಈ ಬಗ್ಗೆ ನಾವು ಸ್ಪೀಕರ್‌ಗೆ ಮನವಿ ಸಲ್ಲಿಸಿ ಎರಡು ತಿಂಗಳಾಗಿದೆ. ಒಪಿಎಸ್‌ ಅನ್ನು ಸ್ಥಾನದಿಂದ ತೆಗೆದುಹಾಕಿ ಆದರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಒಪಿಎಸ್‌ ಅವರು ವಿರೋಧ ಪಕ್ಷದ ಉಪನಾಯಕರಾಗಿ ಮುಂದುವರೆದಿದ್ದಾರೆ," ಎಂದರು.

 ಡಿಎಂಕೆ ಸಲಹೆಯಂತೆ ಸ್ಪೀಕರ್ ನಡವಳಿಕೆ

ಡಿಎಂಕೆ ಸಲಹೆಯಂತೆ ಸ್ಪೀಕರ್ ನಡವಳಿಕೆ

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಲು ನಮಗೆ ಅವಕಾಶ ನೀಡುತ್ತಿಲ್ಲ, ಡಿಎಂಕೆ ಸಲಹೆಯಂತೆ ಸ್ಪೀಕರ್ ನಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಒಪಿಎಸ್ ಅವರನ್ನು ಎಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು ಇಪಿಎಸ್ ಆರೋಪಿಸಿದ್ದಾರೆ. ಈ ಹಿಂದೆ ಅಕ್ಟೋಬರ್ 17 ರಂದು ತಮಿಳುನಾಡು ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾದಾಗ, ಇಪಿಎಸ್ ಗೈರುಹಾಜರಾಗಿದ್ದರು. ಮೂಲಗಳ ಪ್ರಕಾರ, ಪ್ರತಿಸ್ಪರ್ಧಿ ಬಣದ ನಾಯಕ ಒಪಿಎಸ್‌ ಅವರನ್ನು ವಿಧಾನಸಭೆಯ ಉಪ ವಿರೋಧ ಪಕ್ಷದ ನಾಯಕನ ಅಧ್ಯಕ್ಷರಾಗಿ ಕೂರಿಸಿದ್ದರಿಂದ ಅವರು ವಿಧಾನಸಭೆಯ ಅಧಿವೇಶನವನ್ನು ಬಹಿಷ್ಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.

 ನೀವು ಇಪಿಎಸ್ ಬಣವನ್ನು ಕೇಳಿ

ನೀವು ಇಪಿಎಸ್ ಬಣವನ್ನು ಕೇಳಿ

ಎಐಎಡಿಎಂಕೆ ಉಪ ನಾಯಕರ ಕುರ್ಚಿಯಲ್ಲಿ ಮಾಜಿ ಮುಖ್ಯಮಂತ್ರಿ ಒಪಿಎಸ್ ಅವರು ಸದನದ ಕಲಾಪದಲ್ಲಿ ಪಾಲ್ಗೊಂಡಿದ್ದರು. ಅಧಿವೇಶನದ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಒಪಿಎಸ್ ಅವರು, ನಾವು ಎಐಎಡಿಎಂಕೆ ಶಾಸಕರಾಗಿ ಇಂದು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುತ್ತಿದ್ದೇವೆ, ಅವರು ವಿಧಾನಸಭೆ ಅಧಿವೇಶನಕ್ಕೆ ಏಕೆ ಹಾಜರಾಗಲಿಲ್ಲ ಎಂದು ನೀವು ಇಪಿಎಸ್ ಬಣವನ್ನು ಕೇಳಬೇಕು ಎಂದಿದ್ದರು.

 ಪ್ರಧಾನ ಕಚೇರಿಯ ಹೊರಗೆ ಘರ್ಷಣೆ

ಪ್ರಧಾನ ಕಚೇರಿಯ ಹೊರಗೆ ಘರ್ಷಣೆ

ಇದಕ್ಕೂ ಮುನ್ನ ಜುಲೈ 11ರಂದು ಕರೆದಿದ್ದ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಇಪಿಎಸ್ ಅವರನ್ನು ಆಯ್ಕೆ ಮಾಡಲಾಗಿತ್ತು. ಸಭೆಗೂ ಮುನ್ನ ಎರಡೂ ಬಣಗಳ ಬೆಂಬಲಿಗರು ಪಕ್ಷದ ಪ್ರಧಾನ ಕಚೇರಿಯ ಹೊರಗೆ ಘರ್ಷಣೆ ನಡೆಸಿದರು. ಹಿಂಸಾತ್ಮಕ ಘರ್ಷಣೆಯ ನಂತರ, ಪ್ರಧಾನ ಕಚೇರಿಯನ್ನು ಕಂದಾಯ ವಿಭಾಗೀಯ ಅಧಿಕಾರಿ ಮುಚ್ಚಿದ್ದರು.

 ಆಗಸ್ಟ್ 17ರಂದು ಜಿ ಜಯಚಂದ್ರನ್‌ ಪೀಠ ತೀರ್ಪು

ಆಗಸ್ಟ್ 17ರಂದು ಜಿ ಜಯಚಂದ್ರನ್‌ ಪೀಠ ತೀರ್ಪು

ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರ ಏಕ ಪೀಠದ ಆಗಸ್ಟ್ 17 ರ ತೀರ್ಪು ನೀಡಿ ಜುಲೈ 11 ರ ಸಭೆಯನ್ನು ಅನೂರ್ಜಿತಗೊಳಿಸಿತ್ತು. ನಂತರ ಜುಲೈ 11ರ ಮೊದಲು ಯಥಾಸ್ಥಿತಿಗೆ ಆದೇಶಿಸಿತು. ಇಪಿಎಸ್ ಕ್ಯಾಂಪ್ ನಂತರ ಏಕ ಪೀಠದ ತೀರ್ಪನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಪ್ರಶ್ನಿಸಿ ಅದು ಇಪಿಎಸ್ ಪರವಾಗಿ ತೀರ್ಪು ನೀಡಿತು. ಎಐಎಡಿಎಂಕೆಯ ಎರಡೂ ಬಣಗಳು ತಮಿಳುನಾಡು ವಿಧಾನಸಭಾ ಸ್ಪೀಕರ್ ಎಂ ಅಪ್ಪಾವು ಅವರನ್ನು ನಿಜವಾದ ಎಐಎಡಿಎಂಕೆ ಯಾರೆಂದು ಗುರುತಿಸುವಂತೆ ಒತ್ತಾಯಿಸಿವೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+