ನಟ ಚಿರಂಜೀವಿಗೆ ಮುಖ್ಯಮಂತ್ರಿಯಾಗುವ ಯೋಗ!

ಇಂತಹ ಒಂದು ಸುಸಂದರ್ಭ ತಮಗೆ ಒದಗಿಬರಲಿದೆ ಎಂಬುದನ್ನು ಸೂಕ್ಷ್ಮವಾಗಿ ಅರಿತ ನಟ ಚಿರಂಜೀವಿ ಅವರು ಕಾಂಗ್ರೆಸ್ ಜತೆಗಿನ ತಮ್ಮ ಮೈತ್ರಿಯನ್ನು ಜಾರಿಯಲ್ಲಿಟ್ಟಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ಉದಯಿಸಿದ ಮೇಲೆ ಉಳಿದ ಆಂಧ್ರಕ್ಕೆ ತಾವೇ ಮುಖ್ಯಮಂತ್ರಿಯಾಗಬಹುದು ಎಂಬುದು ಚಿರಂಜೀವಿ ಕಿವಿಗೆ ಬಿದ್ದಿದೆ. ಕಾಪು-ಹಿಂದುಳಿದ ವರ್ಗ-ದಲಿತ ಜಾತಿ ಸಂಯೋಜನೆ ತಮ್ಮ ಕೈಹಿಡಿಯಲಿದೆ ಎಂಬುದು ನಟ ಚಿರಂಜೀವಿ ಅವರ ಎಣಿಕೆಯಾಗಿದೆ. ( ಕರ್ನಾಟಕಕ್ಕೆ ಕಾದಿದೆ ಮತ್ತೊಂದು ಗಡಿ ತಂಟೆ !)
ಹಾಗಾಗಿ, 2009ರ ಚುನಾವನೆಯಲ್ಲಿ ತಮ್ಮ ಪ್ರಜಾರಾಜ್ಯಂ ಪಾರ್ಟಿ ನೆಲೆಯಲ್ಲಿ ಗೆದ್ದುಬಂದ ಶಾಸಕರು/ಸಂಸದರ ಜತೆ ಮತ್ತೆ ನಿಕಟ ಸಂಪರ್ಕ ಸಾಧಿಸಿರುವ ನಟ ಚಿರಂಜೀವಿ ಅವರು ಈಗಿನ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಕೈ ಬಿಟ್ಟುಹೋಗದಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಏಕೆಂದರೆ ಪ್ರಜಾರಾಜ್ಯಂ ಪಾರ್ಟಿಯು ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾದ ಬಳಿಕ ಚಿರಂಜೀವಿ ಪಾರ್ಟಿಯಿಂದ ಗೆದ್ದುಬಂದವರು ಹಸಿರು ಹುಲ್ಲುಗಾವಲುಗಳನ್ನು ಅರಸಿಕೊಂಡು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಈ ವಾರಾತ್ಯದಲ್ಲಿ ಇಂತಹ ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಿರುವ ಚಿರಂಜೀವಿ ಅವರು ತಮ್ಮ ಕೈಬಿಡದಂತೆ ಮನವಿ ಮಾಡಿಕೊಂಡಿದ್ದಾರೆ. ಚಿರಂಜೀವಿಗೆ ಹತ್ತಿರವಾಗಿರುವ ಸಚಿವರಾದ ಗಂಟಾ ಶ್ರೀನಿವಾಸ ರಾವ್ (ಮೂಲತಃ ಟಿಡಿಪಿ ಪಕ್ಷಕ್ಕೆ ಸೇರಿದವರು), ಸಿ ರಾಮಚಂದ್ರಯ್ಯ ಅಲ್ಲದೆ ಕಾಂಗ್ರೆಸ್ ಶಾಸಕರಾದ ತೋಟಾ ತಿರುಮೂರ್ತಲು, ಶ್ರೀಧರ ಕೃಷ್ಣ ರೆಡ್ಡಿ, ಕನ್ನಬಾಬು, ವೇಲಂಪಲ್ಲಿ ಶ್ರೀನಿವಾಸ್, ವಂಗಾ ಗೀತಾ, ಯೆಲಮಂಚಿಲಿ ರವಿ, ಪಂಥಮ್ ಗಂಧಿ ಮೋಹನ್, ಆವಂತಿ ಶ್ರೀನಿವಾಸ್ ಮತ್ತು ಜಿ ವೆಂಕಟರಾಮಯ್ಯ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿ, ನಟ ಚಿರಂಜೀವಿ ಮಾತುಕತೆ ನಡೆಸಿದ್ದಾರೆ.
ತಮ್ಮದೇ ಕಾಪು ಜನಾಂಗದಿಂದ ಗೆದ್ದುಬಂದ ಈ ಶಾಸಕರು ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕೈಬಿಡುವುದು ಎಷ್ಟರಮಟ್ಟಿಗೆ ಸರಿ? ಎಂದು ಅಸಮಾಧಾನ ವ್ಯಕ್ತಪಡಿಸಿದ ಚಿರು, ತಮ್ಮ ಕೈಬಿಡಬಾರದು ಎಂದು ಅಲವತ್ತುಕೊಂಡರು ಎಂದು ಮೂಲಗಳು ಹೇಳಿವೆ. 2009ರಲ್ಲಿ ತನ್ನ PRP ಟಿಕೆಟಿನಿಂದ ಗೆದ್ದುಬಂದ ಈ ಜನನಾಯಕರು ಈಗ ತಮ್ಮ ಕೈಬಿಡುವುದು ಸರ್ವತಾಸಾಧುವಲ್ಲ ಎಂಬುದನ್ನು ಚಿರು ಮನದಟ್ಟು ಪಡಿಸಿದ್ದಾರೆ. ( ತೆಲಂಗಾಣ ತಳಮಳ: 72 ಶಾಸಕರಿಂದ ರಾಜೀನಾಮೆ )
ಏಕೆಂದರೆ AICC ನಾಯಕರ ಜತೆ ತಾವು ಸತತ ಸಂಪರ್ಕದಲ್ಲಿದ್ದು, ಆಂಧ್ರ ವಿಭಜನೆಗೆ ತಾವು ಸಮ್ಮತಿ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂದೆ ಆಂಧ್ರ ಇಬ್ಭಾಗವಾದಾಗ ತಾವೇ ಮುಖ್ಯಮಂತ್ರಿಯಾಗುವುದನ್ನು ಚಿರು ಖಾತ್ರಿ ಪಡಿಸಿಕೊಂಡಿದ್ದಾರೆ. ಹಾಗಾಗಿಯೇ ಕಾಪು ಶಾಸಕರಾದಿಯಾಗಿ ಪಕ್ಷದಿಂದ ಗೆದ್ದುಬಂದವರಾರೂ ತಮ್ಮ ಕೈಬಿಡಬಾರದು ಎಂದು ಚಿರು ಒತ್ತಿ ಒತ್ತಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications