ಒಡಿಶಾ: ಕಾಲಿಗೆ ಕ್ಯಾಮೆರಾ ಕಟ್ಟಿದ ಪತ್ತೇದಾರಿ ಪಾರಿವಾಳ ಪತ್ತೆ
ಒಡಿಶಾದ ಕರಾವಳಿಯಲ್ಲಿ ಪತ್ತೆದಾರಿ ಪಾರಿವಾಳವೊಂದು ಕಂಡುಬಂದಿದೆ. ಈ ಪಾರಿವಾಳ ಕ್ಯಾಮೆರಾ ಮತ್ತು ಮೈಕ್ರೊಚಿಪ್ ಸೇರಿದಂತೆ ಇತರ ಸಾಧನಗಳನ್ನು ಹೊಂದಿದೆ.
ಭುವನೇಶ್ವರ ಮಾರ್ಚ್ 9: ಒಡಿಶಾದ ಕರಾವಳಿಯಲ್ಲಿ ಪತ್ತೆದಾರಿ ಪಾರಿವಾಳವೊಂದು ಕಂಡುಬಂದಿದೆ. ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಪಾರಾದೀಪ್ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯಿಂದ ಕ್ಯಾಮೆರಾ ಮತ್ತು ಮೈಕ್ರೊಚಿಪ್ ಸೇರಿದಂತೆ ಸಾಧನಗಳನ್ನು ಹೊಂದಿದ್ದ ಪತ್ತೇದಾರಿ ಪಾರಿವಾಳವೊಂದು ಸೆರೆ ಸಿಕ್ಕಿದೆ. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ಜಗತ್ಸಿಂಗ್ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಅವರು, "ಪಾರಿವಾಳದ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ನಾವು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯವನ್ನು ಪಡೆಯುತ್ತೇವೆ. ಸಾಧನಗಳು ಕ್ಯಾಮೆರಾ ಮತ್ತು ಮೈಕ್ರೋಚಿಪ್ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪ್ರಯೋಗಾಲಯದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ" ಎಂದು ಹೇಳಿದರು.

ಸ್ಥಳೀಯ ಪೊಲೀಸರಿಗೆ ತಿಳಿಯದ ಭಾಷೆಯಲ್ಲಿ ಹಕ್ಕಿಯ ರೆಕ್ಕೆಗಳ ಮೇಲೆ ಏನೋ ಗೀಚಿದಂತಿದೆ. "ಏನು ಬರೆಯಲಾಗಿದೆ ಎಂಬುದನ್ನು ಕಂಡುಹಿಡಿಯಲು ತಜ್ಞರ ಸಹಾಯವನ್ನು ಸಹ ಪಡೆಯಲಾಗುವುದು" ಎಂದು ಎಸ್ಪಿ ಹೇಳಿದರು.
'ಸಾರಥಿ' ಎಂಬ ಮೀನುಗಾರಿಕಾ ಟ್ರಾಲರ್ನ ಉದ್ಯೋಗಿ ಪಿತಾಂಬರ ಬೆಹೆರಾ ಅವರು ಪಾರಿವಾಳವನ್ನು ದೋಣಿಯ ಮೇಲೆ ಕುಳಿತಿರುವುದನ್ನು ನೋಡಿರುವುದಾಗಿ ಹೇಳಿದರು. ಬೆಹೆರಾ ಅವರು ಕಳೆದ ಹಲವು ದಿನಗಳಿಂದ ಹಕ್ಕಿಗೆ ಆಹಾರವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
"ಹಕ್ಕಿಯ ಕಾಲುಗಳಿಗೆ ಕೆಲವು ವಸ್ತುಗಳನ್ನು ಹಾಕಿರುವುದನ್ನು ನಾನು ಇದ್ದಕ್ಕಿದ್ದಂತೆ ಗಮನಿಸಿದೆ. ಅದರ ರೆಕ್ಕೆಗಳ ಮೇಲೆ ಏನೋ ಬರೆದಿರುವುದನ್ನು ನಾನು ಕಂಡುಕೊಂಡೆ. ಅದು ಒಡಿಯಾದಲ್ಲಿ ಇಲ್ಲದ ಕಾರಣ ನನಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ'' ಎಂದು ಬೆಹೆರಾ ಮಾಧ್ಯಮದವರಿಗೆ ತಿಳಿಸಿದರು.

ಹತ್ತಿರ ಬರುತ್ತಿದ್ದಂತೆ ಅವರು ಹಕ್ಕಿಯನ್ನು ಹಿಡಿದಿದ್ದಾರೆ. ಅದಕ್ಕೆ ಏನೋ ಆಗಿದೆ ಎನ್ನುವ ಅನುಮಾನದಲ್ಲಿ ಅವರು ಅದನ್ನು ಪಶುವೈದ್ಯರ ಬಳಿ ಪರೀಕ್ಷಿಸಲು ಕರೆದುಕೊಂಡು ಹೋಗಿದ್ದಾರೆ. ಬಳಿಕ ಅನುಮಾನ ಹೆಚ್ಚಾದಲ್ಲಿ ಪೊಲೀಸರಿಗೆ ಮಾಃಇತಿ ನೀಡಿದ್ದಾರೆ. ಸದ್ಯ ಪೊಲೀಸರು ಪಾರಿವಾಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸುಮಾರು 10 ದಿನಗಳ ಹಿಂದೆ ಕೋನಾರ್ಕ್ ಕರಾವಳಿಯಿಂದ 35 ಕಿಮೀ ದೂರದಲ್ಲಿ ಟ್ರಾಲರ್ನಲ್ಲಿ ಶಂಕಿತ ಪಾರಿವಾಳ ಪತ್ತೆಯಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications