ತ್ರಿವಳಿ ತಲಾಖ್ ಅಸಿಂಧು, ಸುಪ್ರಿಂನಿಂದ ಮಹತ್ವದ ತೀರ್ಪು
ನವದೆಹಲಿ, ಆಗಸ್ಟ್ 22: ತ್ರಿವಳಿ ತಲಾಖ್ ಅಸಿಂಧು ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಇಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಇದು ಅಸಂವಿಧಾನಿಕ ಎಂದು ತೀರ್ಪು ನೀಡಿದೆ.
ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?
ಸುಪ್ರಿಂ ಕೋರ್ಟ್ ತೀರ್ಪಿನೊಂದಿಗೆ ತ್ರಿವಳಿ ತಲಾಖ್ ಮಾನ್ಯತೆ ರದ್ದಾಗಿದೆ.
ಬೇರೆ ಬೇರೆ ಧರ್ಮಕ್ಕೆ ಸೇರಿದ ನ್ಯಾ. ಖೇಹರ್, ಕುರಿಯನ್ ಜೋಸೆಫ್, ರೋಹಿಂಗ್ಟನ್ ಎಫ್ ನಾರಿಮನ್, ಉದಯ್ ಲಲಿತ್, ಎಸ್ ಅಬ್ದುಲ್ ನಜೀರ್ ನ್ಯಾಯಪೀಠ ಈ ತೀರ್ಪು ನೀಡಿದೆ.
ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಂಪುಟದ ಸಭೆಯಲ್ಲಿ ಅಂಗೀಕಾರ
ಈ ಹಿಂದೆ ತ್ರಿವಳಿ ತಲಾಖ್ ವಿಚಾರದಲ್ಲಿ ಕೋರ್ಟ್ ಮಧ್ಯೆ ಪ್ರವೇಶಕ್ಕೆ ಆಕ್ಷೇಪ ಎತ್ತಿದ್ದ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ನಮಗೂ ತಲಾಖ್ ಬೇಕಾಗಿಲ್ಲ. ತಲಾಖ್ ನೀಡದಂತೆ 'ನಿಖಾನಾಮ' (ಮದುವೆ) ಸಂದರ್ಭದಲ್ಲೇ ಸಲಹೆ ನೀಡುತ್ತೇವೆ. ಈ ಕ್ಷೇತ್ರದ ಸುಧಾರಣೆಗೆ ನಾವೂ ಶ್ರಮಿಸುತ್ತಿದ್ದೇವೆ ಎಂದು ಹೇಳಿತ್ತು.
ಈ ಹಿಂದೆ ಮಂಡಳಿ ಇದೊಂದು ಪಾಪದ ಕೃತ್ಯ ಮತ್ತು ಅನಪೇಕ್ಷಿತ ಎಂದು ಹೇಳಿತ್ತಾದರೂ ಕಳೆದ 1400 ವರ್ಷಗಳಿಂದ ಇದು ನಡೆದು ಬಂದಿದೆ ಎಂದು ತಲಾಖ್ ಪರವಾಗಿಯೇ ವಾದಿಸಿತ್ತು.