'ನೀಟ್' ಪರೀಕ್ಷೆಯಲ್ಲಿ ಗೆದ್ದ ತರಕಾರಿ, ದಿನಗೂಲಿ ಕಾರ್ಮಿಕರ ಮಕ್ಕಳು!
ನವದೆಹಲಿ, ಸೆಪ್ಟೆಂಬರ್ 10: ವಿದ್ಯೆಗೆ ಬಡತನದ ಅಡ್ಡಿಯಿಲ್ಲ ಎಂಬುದನ್ನು ಒಡಿಶಾದ ವಿದ್ಯಾರ್ಥಿಗಳು ಪ್ರೂವ್ ಮಾಡಿದ್ದಾರೆ. ಒಬ್ಬರ ತಂದೆ ದಿನಗೂಲಿ ಕಾರ್ಮಿಕ, ಇನ್ನೊಬ್ಬ ವಿದ್ಯಾರ್ಥಿನಿ ತಂದೆ ತರಕಾರಿ ಮಾರುವವರು. ಇಂಥ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿಗಳು ಇಂದು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅನ್ನು ಪಾಸ್ ಮಾಡಿದ್ದಾರೆ.
ಗಂಜಾಂ ಜಿಲ್ಲೆಯ ಪೊಲಸರ ಬ್ಲಾಕ್ನ ನಿವಾಸಿ ಸಂತಾನು ದಲೈ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಅಖಿಲ ಭಾರತ 19,678 ರಾಂಕ್ ಗಳಿಸಿದ್ದಾರೆ.
ಅದೇ ರೀತಿ ಗಜಪತಿ ಜಿಲ್ಲೆಯ ಅದಾವ್ ಗ್ರಾಮದ ಮತ್ತೋರ್ವ ವಿದ್ಯಾರ್ಥಿನಿ ಇಸ್ರಿತಾ ಪಾಂಡಾ 720 ಅಂಕಗಳಲ್ಲಿ 622 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ 11,895ರ ರಾಂಕ್ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿನಿಯ ತಂದೆ ಅದಾವ್ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿ ಆಗಿದ್ದರು ಎಂದು ತಿಳಿದು ಬಂದಿದೆ.

ನೀಟ್ ಪರೀಕ್ಷೆ ಎರಡನೇ ಬಾರಿ ಪಾಸ್
ಕಲಿಕೆಗೆ ನನ್ನ ಬಡತನವಾಗಲಿ, ಆರ್ಥಿಕ ಸಮಸ್ಯೆಗಳಾಗಲಿ ಯಾವುದೂ ಅಡ್ಡಿಯಾಗಲಿಲ್ಲ. ಬಡತನವು ನನ್ನ ಜೀವನದಲ್ಲಿನ ಯಶಸ್ಸನ್ನು ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಕಳೆದ ವರ್ಷ ಮೊದಲ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಆಗುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಎರಡನೇ ಅವಕಾಶದಲ್ಲಿ ಇಬ್ಬರೂ ವಿದ್ಯಾರ್ಥಿಗಳು ತಾವು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಹೇಳಿದರು.

ಇಸ್ರಿತಾ ಪಾಂಡಾ ಯಶಸ್ಸಿನ ಕಥೆ
ತಮ್ಮ ಶೈಕ್ಷಣಿಕ ಹಾದಿ ಮತ್ತು ಗೆಲುವಿನ ಬಗ್ಗೆ ಇಸ್ರಿತಾ ಪಾಂಡಾ ಸಂತಸ ವ್ಯಕ್ತಪಡಿಸಿದರು. ಇದಕ್ಕಾಗಿ ತಾನು ಶ್ರಮಿಸಿದ್ದೇನೆ ಮತ್ತು ತನ್ನ ಅಂಕಗಳಿಂದ ಸಂತೋಷವಾಗಿದೆ. ಕಟಕ್ ಅಥವಾ ಬರ್ಹಾಂಪುರದ ಪ್ರಧಾನ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಸೀಟು ಪಡೆಯುವ ಭರವಸೆ ಇದೆ ಎಂದು ಇಶ್ರಿತಾ ಪಾಂಡಾ ಹೇಳಿದ್ದಾರೆ.

ದಿನಗೂಲಿ ಕಾರ್ಮಿಕನ ಮಗ ಸಂತನು ದಲೈ ಗೆಲುವಿನ ಹಾದಿ
ಗಂಜಾಂ ಜಿಲ್ಲೆಯ ಪೊಲಸರ ಬ್ಲಾಕ್ನ ನಿವಾಸಿ ಸಂತಾನು ದಲೈ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಅಖಿಲ ಭಾರತ 19,678 ರಾಂಕ್ ಗಳಿಸಿದ್ದಾರೆ. ದಲೈ ಕೂಡ ದಿನಗೂಲಿ ಕಾರ್ಮಿಕನ ಪುತ್ರನಾಗಿದ್ದು, ರಾಜ್ಯದ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸುವುದಾಗಿ ಹೇಳಿದರು. ಶಿಕ್ಷಣ ತಜ್ಞ ಸುಧೀರ್ ರೌತ್ ನಡೆಸುತ್ತಿರುವ ಆರ್ಯಭಟ್ಟ ಎಂಬ ಖಾಸಗಿ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ಪಡೆಯುತ್ತಿದ್ದೇನೆ ಎಂದು ದಲೈ ಉಲ್ಲೇಖಿಸಿದರು.

ಮಗಳ ಶ್ರಮಕ್ಕೆ ಹೆಗಲಾದ ತಂದೆ
ಕಳೆದ ಎರಡು ವರ್ಷಗಳಲ್ಲಿ ಕೊರೊನಾವರೈಸ್ ಸಾಂಕ್ರಾಮಿಕ ಪಿಡುಗಿನಿಂದ ಸರಿಯಾಗಿ ವ್ಯಾಪಾರವಿರಲಿಲ್ಲ. ಉತ್ತಮ ಆದಾಯವನ್ನೂ ಗಳಿಸುವುದಕ್ಕೆ ಸಾಧ್ಯವಾಗದ ತಂದೆಯು ಮಗಳ ಕನಸಿಗೆ ಮಾತ್ರ ಅಡ್ಡಿ ಆಗಿರಲಿಲ್ಲ. ತಮ್ಮ ವ್ಯಾಪಾರದಲ್ಲಿನ ನಷ್ಟದ ಮಧ್ಯೆಯೂ ತಂದೆ ತನ್ನ ಅಧ್ಯಯನವನ್ನು ನಿರ್ಲಕ್ಷಿಸಿರಲಿಲ್ಲ ಎಂದು ಇಸ್ರಿತಾ ಪಾಂಡಾ ಹೇಳಿದರು. "ನನ್ನ ಮಗಳು ವೈದ್ಯೆ ಆಗಬೇಕು ಎಂಬುದೊಂದೇ ನನ್ನ ಬಯಕೆ ಆಗಿದೆ. ಅದಕ್ಕೆ ಅನುಗುಣವಾಗಿ ನಾನು ಅವಳ ಶ್ರಮಕ್ಕೆ ಹೆಗಲು ನೀಡುತ್ತೇನೆ," ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.
-
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
KEA Recruitment: ವಾಯುವ್ಯ ಸಾರಿಗೆ ಸಂಸ್ಥೆ ನೇಮಕಾತಿ ಪರೀಕ್ಷೆಗಳ ದಿನಾಂಕ ಬದಲಾವಣೆ -
CBSE 12ನೇ ತರಗತಿಯ ಜೀವಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ: ತಜ್ಞರು ಮತ್ತು ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ಮಾಹಿತಿ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications