ತಾಯಿಯನ್ನು ಕೊಂದು, ಆಕೆ ಹೃದಯಕ್ಕೆ ಚಟ್ನಿ, ಮೆಣಸುಪುಡಿ ಹಚ್ಚಿ ತಿಂದ ಮಗ
ಪುಣೆ, ಆಗಸ್ಟ್ 29: ಕುಡಿತ ಹಾಗೂ ಹಸಿವು ಜತೆಗೆ ಸೇರಿದರೆ ಮನುಷ್ಯತ್ವವನ್ನೇ ಕಸಿದು ಬಿಡುತ್ತದೆಯೇ ಎಂದು ಪ್ರಶ್ನೆ ಮೂಡಿಸುವಂಥ ಘಟನೆಯಿದು. ಕೊಲ್ಲಾಪುರದಲ್ಲಿ ಸೋಮವಾರ ಮಧ್ಯಾಹ್ನ ಪಾನಮತ್ತನಾದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕೊಂದು, ಆಕೆಯ ಹೃದಯವನ್ನು ಕತ್ತರಿಸಿ, ಚಟ್ನಿ ಹಾಗೂ ಮೆಣಸಿನ ಪುಡಿಯೊಂದಿಗೆ ಸ್ವಲ್ಪ ಭಾಗವನ್ನು ತಿಂದಿದ್ದಾನೆ.
ಆ ನಂತರ ಮನೆಯಿಂದ ಆಚೆ ಬಂದ ಆತನ ಕೈಗಳಿಂದ ರಕ್ತ ಸೋರುತ್ತಿರುವುದನ್ನು ಕಂಡು ಯಾರು ದೂರು ನೀಡಿದರೋ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಕುಂಚಕರ್ಣಿ ಬಂಧಿತ. ಈತ ತಾರಾರಾಣಿ ಚೌಕದ ಮಹಾವಾಲ ವಸತ್ ನ ನಿವಾಸಿ. ತನ್ನ ತಾಯಿ ಎಳವ ಎಂಬಾಕೆಯನ್ನು ಕೊಂದಿದ್ದಾನೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

Recommended Video

ಸುನೀಲ್ ನಿರ್ಮಾಣ ಕಾರ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ. ಆತನಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿವೆ. ಆದರೆ ಪತ್ನಿಯು ಮಕ್ಕಳ ಜತೆಗೆ ಮುಂಬೈನ ತವರುಮನೆಯಲ್ಲಿ ಇದ್ದಾರೆ.
ಕೊಲೆ ನಡೆದ ದಿನ ಸುನೀಲ್ ವಿಪರೀತ ಕುಡಿದಿದ್ದ. ಮೊದಲಿಗೆ ನೆರೆಮನೆಗೆ ಹೋಗಿ ಊಟ ಕೇಳಿದ್ದಾನೆ. ಅವರು ಕೊಡದಿದ್ದಾಗ ತನ್ನ ಮನೆಗೆ ಹೋಗಿದ್ದಾನೆ. ಹೋದಹೋದವನೇ ತನ್ನ ತಾಯಿ ಜತೆಗೆ ಹೊಡೆದಾಟ ನಡೆಸಿದ್ದಾನೆ. ಆ ನಂತರ ಆಕೆಯನ್ನು ತಿವಿದು ಕೊಂದಿದ್ದಾನೆ. ಹೃದಯವನ್ನು ಬಗೆದು ಅದಕ್ಕೆ ಚಟ್ನಿ ಹಚ್ಚಿ, ಮೆಣಸು ಪುಡಿ ಸವರಿ ಸ್ವಲ್ಪ ಭಾಗ ತಿಂದಿದ್ದಾನೆ.
ಸದ್ಯಕ್ಕೆ ಸುನೀಲ್ ನನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications