ರಾಯ್ಬರೇಲಿಯಲ್ಲಿ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡ ಇರಾನಿ
Recommended Video

ರಾಯ್ಬರೇಲಿ, ಸೆಪ್ಟೆಂಬರ್ 08: ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಬೇಟಿ ನೀಡಿ ಅಲ್ಲಿನ ಸೇನಾ ಮುಖಂಡರನ್ನು ಅಪ್ಪಿಕೊಂಡಿದ್ದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ತರಾಟೆಗೆ ತೆಗೆದುಕೊಂಡರು.
'ನವಜೋತ್ ಸಿಂಗ್ ಸಿದ್ಧಿ ಅವರು ಪಾಕ್ ಸೇನಾ ಮುಖಂಡ ಖಾಮರ್ ಜಾವೇದ್ ಬಾಜ್ವಾ ಅವರನ್ನು ಅಪ್ಪಿಕೊಂಡು ಪೋಸ್ ನೀಡಿದರೂ ಕಾಂಗ್ರೆಸ್ ಮಾತ್ರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೌನದ ಅರ್ಥವೇನು?' ಎಂದು ಇರಾನಿ ಪ್ರಶ್ನಿಸಿದ್ದಾರೆ.

'ಪಾಕ್ ನ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಪಾಕಿಸ್ತಾನಕ್ಕೆ ಸಿಧು ತೆರಳಿದ್ದಾಗ ರಾಹುಲ್ ಗಾಂಧಿ ಮೌನವಾಗಿದ್ದರು. ಅವರು ವಾಪಸ್ಸಾಗುತ್ತಿದ್ದಂತೆಯೇ ಪಾಕಿಸ್ತಾನ ಭಾರತದ ವಿರುದ್ಧ ಮಾತನಾಡುತ್ತಿದೆ' ಎಂದು ಸ್ಮೃತಿ ಹೇಳಿದ್ದಾರೆ.
ಪಾಕಿಸ್ತಾನದ ಸೇನಾ ಮುಖಂಡ ಜ.ಬಾಜ್ವಾ, ಗಡಿಯಲ್ಲಿ ರಕ್ತಪಾತ ನಡೆಸಿ, ಪಾಕಿಸ್ತಾನಿ ಯೋಧರ ಸಾವಿಗೆ ಪ್ರತೀಕಾರ ತೀರರಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡುವಾಗ ಪ್ರಧಾನಿ ಇಮ್ರಾನ್ ಖಾನ್ ಸಹ ಅವರೊಟ್ಟಿಗೇ ಇದ್ದರು! ಇತ್ತೀಚೆಗಷ್ಟೆ ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡು, ಗಡಿಯಲ್ಲಿ ಸೌಹಾರ್ದತೆ ಉಂಟಾಡುವುದಾಗಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು. ಇಬ್ಬರು ನಾಯಕರ ಈ ವ್ಯತಿರಿಕ್ತ ಹೇಳಿಕೆ ಕುರಿತು ಸ್ಮೃತಿ ಇರಾನಿ ತಮ್ಮ ಪ್ರತಿಕ್ರಿಯೆ ನೀಡಿದರು.












Click it and Unblock the Notifications