ನಟಿ ಪ್ರಿಯಾಂಕಾ ಚೋಪ್ರಾ 'ದತ್ತು ಪುತ್ರಿ' ಇನ್ನಿಲ್ಲ
ರಾಂಚಿ, ಡಿ.17: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ದತ್ತು ಪುತ್ರಿ ಕಳೆದುಕೊಂಡ ದುಃಖದಲ್ಲಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಆಕೆಯನ್ನು ನೋಡಲು ಹೋಗುತ್ತಿದ್ದರು, ಅದರೆ, ಈಗ ತಮ್ಮ ದತ್ತು ಪುತ್ರಿ ದುರ್ಗಾ ಸಾವಿನ ನೋವಿನಲ್ಲಿದ್ದಾರೆ. ಪ್ರಿಯಾಂಕಾ ಪುತ್ರಿ ಮರಣ ಭಾರತಕ್ಕೂ ಶೋಕದಾಯಕವಾಗಿದೆ.
ರಾಂಚಿಯ ಬಿರ್ಸಾ ಮುಂಡಾ ಮೃಗಾಲಯದಲ್ಲಿದ್ದ ಪ್ರಿಯಾಂಕಾ ಚೋಪ್ರಾ ಅವರು ದತ್ತು ಪಡೆದಿದ್ದ ದುರ್ಗಾ ಹೆಸರಿನ ಹೆಣ್ಣು ಅಕಾಲಿಕ ಮರಣ ಹೊಂದಿದೆ. ಹುಲಿ ಸಂತತಿ ಕಡಿಮೆಯಾಗುತ್ತಿರುವ ಆತಂಕದದ ನಡುವೆ ಈ ಹುಲಿ ನಂಜು ರೋಗ(Toxaemia)ದಿಂದ ಸಾವನ್ನಪ್ಪಿರುವುದು ಎಚ್ಚರಿಕೆ ಗಂಟೆಯಾಗಿದೆ ಎಂದು ಮೃಗಾಲಯದ ಪಾಲಕರು ಹೇಳಿದ್ದಾರೆ. [ಮೈಸೂರು ಮೃಗಾಲಯಕ್ಕೆ ಟ್ರಿಪ್ ಅಡ್ವೈಸರ್ ಪ್ರಶಸ್ತಿ]

ಕಳೆದ ಏಳು ವರ್ಷಗಳಲ್ಲಿ ಸುಮಾರು 8 ಹುಲಿಗಳು ಇಲ್ಲಿ ಸಾವನ್ನಪ್ಪಿವೆ. 2010 ಮೂರು ಹುಲಿ ಮರಿಗಳು ಸಾವನ್ನಪ್ಪಿದ್ದವು, ಸದ್ಯಕ್ಕೆ ಹೆಣ್ಣು ಹುಲಿ ದಿಕ್ಕಿಲ್ಲದ ಈ ಮೃಗಾಲಯದಲ್ಲಿ ಶಿವ, ಸುರ್ಗೀವ ಹಾಗೂ ತೇಜಸ್ವಿ ಮಾತ್ರವಿದೆ ಎಂದು ಬಿರ್ಸಾ ಜೈವಿಕ್ ಉದ್ಯಾನ್ ನಿರ್ದೇಶಕ ಪಿಕೆ ವರ್ಮ ಹೇಳಿದ್ದಾರೆ.
2007ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಧಾಮದಲ್ಲಿದ್ದ 11 ವರ್ಷ ವಯಸ್ಸಿನ ಹೆಣ್ಣು ಹುಲಿ ದುರ್ಗಾಳನ್ನು ಪ್ರಿಯಾಂಕ ಚೋಪ್ರಾ ದತ್ತು ಪಡೆದಿದ್ದರು. ನಂತರ ಹುಲಿಯನ್ನು ಶಿವಮೊಗ್ಗದಿಂದ ರಾಂಚಿ ಮೃಗಾಲಯಕ್ಕೆ ರವಾನಿಸಲಾಗಿತ್ತು. [ಮೃಗಾಲಯದ ಟಿಕೆಟ್ ಸುಲಭವಾಗಿ ಪಡೆಯಿರಿ]
ದತ್ತು ಪಡೆದಿದ್ದಕ್ಕಾಗಿ ಆರಂಭಿಕ ಮೊತ್ತವಾಗಿ ಪ್ರಿಯಾಂಕಾ ಚೋಪ್ರಾ ಅವರು 2 ಲಕ್ಷ ರು ಚೆಕ್ ನೀಡಿದ್ದರು. ಅದರೆ, ಇತ್ತೀಚೆಗೆ ಇದೇ ಹುಲಿಯನ್ನು ಕೇಂದ್ರ ಕಲ್ಲಿದ್ದಲು ನಿಗಮ ದತ್ತು ಪಡೆದುಕೊಂಡಿತ್ತು.
ಈ ಹಿಂದೆ ಮೈಸೂರು ಮೃಗಾಲಯದಿಂದ ಜಾವಗಲ್ ಶ್ರೀನಾಥ್-ಚಿರತೆ, ಅನಿಲ್ ಕುಂಬ್ಳೆ-ಜಿರಾಫೆ, ಜಹೀರ್ ಖಾನ್ -ಬ್ರಹ್ಮ ಹೆಸರಿನ ಹುಲಿ, ಎಂಎಸ್ ಧೋನಿ ಅವರು ಅಗಸ್ತ್ಯ ಹೆಸರಿನ ಹುಲಿಯನ್ನು ದತ್ತು ಪಡೆದುಕೊಂಡಿದ್ದರು.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications