ನಟಿ ಪ್ರಿಯಾಂಕಾ ಚೋಪ್ರಾ 'ದತ್ತು ಪುತ್ರಿ' ಇನ್ನಿಲ್ಲ
ರಾಂಚಿ, ಡಿ.17: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ದತ್ತು ಪುತ್ರಿ ಕಳೆದುಕೊಂಡ ದುಃಖದಲ್ಲಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಆಕೆಯನ್ನು ನೋಡಲು ಹೋಗುತ್ತಿದ್ದರು, ಅದರೆ, ಈಗ ತಮ್ಮ ದತ್ತು ಪುತ್ರಿ ದುರ್ಗಾ ಸಾವಿನ ನೋವಿನಲ್ಲಿದ್ದಾರೆ. ಪ್ರಿಯಾಂಕಾ ಪುತ್ರಿ ಮರಣ ಭಾರತಕ್ಕೂ ಶೋಕದಾಯಕವಾಗಿದೆ.
ರಾಂಚಿಯ ಬಿರ್ಸಾ ಮುಂಡಾ ಮೃಗಾಲಯದಲ್ಲಿದ್ದ ಪ್ರಿಯಾಂಕಾ ಚೋಪ್ರಾ ಅವರು ದತ್ತು ಪಡೆದಿದ್ದ ದುರ್ಗಾ ಹೆಸರಿನ ಹೆಣ್ಣು ಅಕಾಲಿಕ ಮರಣ ಹೊಂದಿದೆ. ಹುಲಿ ಸಂತತಿ ಕಡಿಮೆಯಾಗುತ್ತಿರುವ ಆತಂಕದದ ನಡುವೆ ಈ ಹುಲಿ ನಂಜು ರೋಗ(Toxaemia)ದಿಂದ ಸಾವನ್ನಪ್ಪಿರುವುದು ಎಚ್ಚರಿಕೆ ಗಂಟೆಯಾಗಿದೆ ಎಂದು ಮೃಗಾಲಯದ ಪಾಲಕರು ಹೇಳಿದ್ದಾರೆ. [ಮೈಸೂರು ಮೃಗಾಲಯಕ್ಕೆ ಟ್ರಿಪ್ ಅಡ್ವೈಸರ್ ಪ್ರಶಸ್ತಿ]

ಕಳೆದ ಏಳು ವರ್ಷಗಳಲ್ಲಿ ಸುಮಾರು 8 ಹುಲಿಗಳು ಇಲ್ಲಿ ಸಾವನ್ನಪ್ಪಿವೆ. 2010 ಮೂರು ಹುಲಿ ಮರಿಗಳು ಸಾವನ್ನಪ್ಪಿದ್ದವು, ಸದ್ಯಕ್ಕೆ ಹೆಣ್ಣು ಹುಲಿ ದಿಕ್ಕಿಲ್ಲದ ಈ ಮೃಗಾಲಯದಲ್ಲಿ ಶಿವ, ಸುರ್ಗೀವ ಹಾಗೂ ತೇಜಸ್ವಿ ಮಾತ್ರವಿದೆ ಎಂದು ಬಿರ್ಸಾ ಜೈವಿಕ್ ಉದ್ಯಾನ್ ನಿರ್ದೇಶಕ ಪಿಕೆ ವರ್ಮ ಹೇಳಿದ್ದಾರೆ.
2007ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪ ಧಾಮದಲ್ಲಿದ್ದ 11 ವರ್ಷ ವಯಸ್ಸಿನ ಹೆಣ್ಣು ಹುಲಿ ದುರ್ಗಾಳನ್ನು ಪ್ರಿಯಾಂಕ ಚೋಪ್ರಾ ದತ್ತು ಪಡೆದಿದ್ದರು. ನಂತರ ಹುಲಿಯನ್ನು ಶಿವಮೊಗ್ಗದಿಂದ ರಾಂಚಿ ಮೃಗಾಲಯಕ್ಕೆ ರವಾನಿಸಲಾಗಿತ್ತು. [ಮೃಗಾಲಯದ ಟಿಕೆಟ್ ಸುಲಭವಾಗಿ ಪಡೆಯಿರಿ]
ದತ್ತು ಪಡೆದಿದ್ದಕ್ಕಾಗಿ ಆರಂಭಿಕ ಮೊತ್ತವಾಗಿ ಪ್ರಿಯಾಂಕಾ ಚೋಪ್ರಾ ಅವರು 2 ಲಕ್ಷ ರು ಚೆಕ್ ನೀಡಿದ್ದರು. ಅದರೆ, ಇತ್ತೀಚೆಗೆ ಇದೇ ಹುಲಿಯನ್ನು ಕೇಂದ್ರ ಕಲ್ಲಿದ್ದಲು ನಿಗಮ ದತ್ತು ಪಡೆದುಕೊಂಡಿತ್ತು.
ಈ ಹಿಂದೆ ಮೈಸೂರು ಮೃಗಾಲಯದಿಂದ ಜಾವಗಲ್ ಶ್ರೀನಾಥ್-ಚಿರತೆ, ಅನಿಲ್ ಕುಂಬ್ಳೆ-ಜಿರಾಫೆ, ಜಹೀರ್ ಖಾನ್ -ಬ್ರಹ್ಮ ಹೆಸರಿನ ಹುಲಿ, ಎಂಎಸ್ ಧೋನಿ ಅವರು ಅಗಸ್ತ್ಯ ಹೆಸರಿನ ಹುಲಿಯನ್ನು ದತ್ತು ಪಡೆದುಕೊಂಡಿದ್ದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications