ಮಣ್ಣಿನ ಮನೆಯಲ್ಲಿದ್ದವನಿಗೆ ಮೊದಲ ಲಾಟರಿಯಲ್ಲೇ ಕೋಟಿ ರುಪಾಯಿ
ಪಂಜಾಬ್, ಫೆಬ್ರವರಿ 22: ಲಾಟರಿ ಹೊಡೆಯೋದು ಅನ್ನೋದರ ನಿಜವಾದ ಅರ್ಥ ಇದೇನಾ? ಈ ವರದಿಯನ್ನು ಪೂರ್ತಿ ಓದಿದ ಮೇಲೆ ನೀವೇ ಹೇಳಿ. ಆತನ ಹೆಸರು ಆಜಾದ್ ಸಿಂಗ್. ವಯಸ್ಸು 24. ಆತ ಮೊದಲನೇ ಸಲ ಲಾಟರಿ ಟಿಕೆಟ್ ತೆಗೆದುಕೊಂಡಿದ್ದ. ಅದೇ ಅವನ ಪಾಲಿಗೆ ಅದೃಷ್ಟ ಖುಲಾಯಿಸಿದೆ. 1.5ಕೋಟಿ ರುಪಾಯಿ ಬಹುಮಾನ ಬಂದಿದೆ.
ಪಂಜಾಬ್ ನ ಫತೇಬಾದ್ ಜಿಲ್ಲೆಯ ದಯ್ಯಾರ್ ಎಂಬ ಹಳ್ಳಿಯವನು ಈ ಆಜಾದ್ ಸಿಂಗ್. ಒಂದು ಮಣ್ಣಿನ ಮನೆಯಲ್ಲಿದ್ದ ಈತ, ಹಳ್ಳಿಯ ಬಸ್ ಸ್ಟಾಪ್ ಹತ್ತಿರ ಸಣ್ಣದೊಂದು ಅಂಗಡಿ ಇದೆ. ಕಳೆದ ಡಿಸೆಂಬರ್ ನಲ್ಲಿ ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ನ ಖರೀದಿ ಮಾಡಿದ್ದ. ಅದು ಪಂಜಾಬ್ ಸರಕಾರದ ಲಾಟರಿ ಟಿಕೆಟ್.[ಅಮೆರಿಕಾ ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಶಿಕ್ಷಕಿ]

"ನನಗೆ 400 ರುಪಾಯಿ ಬಹುಮಾನ ಬರಬಹುದು ಅಂದುಕೊಂಡು ಲಾಟರಿ ತಗೊಂಡಿದ್ದೆ. ಆದರೆ ಕೋಟ್ಯಧಿಪತಿ ಆಗ್ತೀನಿ ಅಂತಾಗಲಿ, ನನ್ನ ಹಳ್ಳೀಲಿ ತುಂಬ ಹೆಸರುವಾಸಿಯಾಗ್ತೀನಿ ಅಂತ ಖಂಡಿತಾ ಗೊತ್ತಿರಲಿಲ್ಲ" ಎನ್ನುತ್ತಾನೆ ಆಜಾದ್ ಸಿಂಗ್. "ನಾನು ಲಾಟರಿ ಟಿಕೆಟ್ ಗೆದ್ದ ಸಂಖ್ಯೆ ನೋಡುತ್ತಿದ್ದೆ. ಮೊದಲ ಬಹುಮಾನ ನನಗೇ ಬಂದುಬಿಟ್ಟಿದೆ
"ನನ್ನ ಕಣ್ಣುಗಳನ್ನ ನಾನೇ ನಂಬೋಕೆ ಆಗಲಿಲ್ಲ. ಹತ್ತು ಸಲ ಖಾತ್ರಿ ಮಾಡಿಕೊಂಡೆ" ಎನ್ನುತ್ತಾನೆ ಸಿಂಗ್. ತನಗೆ ಬಂದ ಲಾಟರಿ ಬಗ್ಗೆ ಸಂಬಂಧಿಕರು, ಸ್ನೇಹಿತರು ಬಳಿ ಖುಷಿ ಹಂಚಿಕೊಂಡಿದ್ದಾನೆ. ರಾಜ್ಯ ಲಾಟರಿ ಇಲಾಖೆಯಿಂದ ಹಳ್ಳಿಗೆ ಬಂದ ಅಧಿಕಾರಿಗಳು ಬಹುಮಾನ ಬಮ್ದಿರುವುದನು ಖಚಿತಪಡಿಸಿದ್ದಾರೆ.['ಸುಡೊಕು'ದಲ್ಲಿ ಬೆಳ್ಳಿಪದಕ ಗೆದ್ದು, ಮಿಂಚಿದ ಬೆಂಗಳೂರು ಬಾಲಕಿ]
ಅರ್ಧಕ್ಕೆ ಶಾಲೆ ಬಿಟ್ಟ ಆಜಾದ್ ಬಂದ ಹಣದಲ್ಲಿ ತನಗೊಂದು ಮನೆ ಕಟ್ಟಿಕೊಳ್ಳಬೇಕು ಮತ್ತು ಹೊಸದೊಂದು ವ್ಯಾಪಾರ ಆರಂಭಿಸಬೇಕು ಎಂಬ ಲೆಕ್ಕಾಚಾರದಲ್ಲಿದ್ದಾನೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications