'ಜಗನಾಥ ಮೋದಿ ಭಕ್ತ' ಹೇಳಿಕೆ: ಕೇಜ್ರಿವಾಲ್, ಖರ್ಗೆ ಹೇಳಿದ್ದೇನು? ಕ್ಷಮೆಕೇಳಿದ ಸಂಬಿತ್ ಪಾತ್ರ!
ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಹೇಳಿಕೆ ರಾಜಕೀಯ ಗದ್ದಲವನ್ನು ಸೃಷ್ಟಿಸಿದೆ. ಅವರು ಪ್ರಧಾನಿ ಮತ್ತು ಭಗವಾನ್ ಜಗನ್ನಾಥನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದು, ಭಗವಾನ್ ಜಗನ್ನಾಥ ಮೋದಿಯ ಭಕ್ತ ಎಂದು ಹೇಳಿದ್ದಾರೆ.
ಸಂಬಿತ್ ಪಾತ್ರ ಅವರ ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕರು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ''ಮಹಾಪ್ರಭು ಶ್ರೀ ಜಗನ್ನಾಥ ಅವರು ಇಡೀ ವಿಶ್ವದ ಪ್ರಭು ಎಂದು ಹೇಳಿದರು. ಅವರನ್ನು ಯಾವುದೇ ಒಬ್ಬ ವ್ಯಕ್ತಿಯ ಭಕ್ತ ಎಂದು ಕರೆಯುವುದು ಮಹಾಪ್ರಭುವಿಗೆ ಮಾಡಿದ ಅವಮಾನ. ಇದು ಜಗತ್ತಿನ ಕೋಟಿ ಕೋಟಿ ಜಗನ್ನಾಥ ಭಕ್ತರಿಗೆ ಮತ್ತು ಒಡಿಯಾ ಸಮುದಾಯಕ್ಕೆ ಮಾಡಿದ ಅವಮಾನ. ಇದರಿಂದ ಇಡೀ ಸಮಾಜವೇ ದುಃಖಿತವಾಗಿದೆ. ಮಹಾಪ್ರಭು ಜಗನಾಥ ದೇವ ಒಡಿಯಾ ಗುರುತಿನ ದೊಡ್ಡ ಸಂಕೇತ'' ಎಂದು ಕಿಡಿ ಕಾರಿದ್ದಾರೆ.

ಸಂಬಿತ್ ಪಾತ್ರ ಹೇಳಿದ್ದೇನು?
ತಮ್ಮ ಹೇಳಿಕೆ ವೈರಲ್ ಆದ ಬಳಿಕ ಬಿಜೆಪಿ ನಾಯಕ ಸಂಬಿತ್ ಪಾತ್ರಾ ಪ್ರತಿಕ್ರಿಯಿಸಿದ್ದಾರೆ. "ಇಂದು ಪುರಿಯಲ್ಲಿ ನರೇಂದ್ರ ಮೋದಿ ಜಿಯವರ ರೋಡ್ಶೋನ ಅಗಾಧ ಯಶಸ್ಸಿನ ನಂತರ, ನಾನು ಹಲವಾರು ಮಾಧ್ಯಮಗಳಿಗೆ ಹಲವಾರು ಬೈಟ್ಗಳನ್ನು ನೀಡಿದ್ದೇನೆ. ಎಲ್ಲೆಡೆ ನಾನು ಮೋದಿ ಜಿ ಶ್ರೀ ಜಗನ್ನಾಥ ಮಹಾಪ್ರಭುಗಳ ಕಟ್ಟಾ ಭಕ್ತ ಎಂದು ಉಲ್ಲೇಖಿಸಿದ್ದೇನೆ. ಒಂದು ಬೈಟ್ನಲ್ಲಿ, ತಪ್ಪಾಗಿ ಇದು ಇದಕ್ಕೆ ತದ್ವಿರುದ್ಧವಾಗಿ ಹೇಳಿದ್ದೇನೆ. ಇದು ತಿಳಿಯದೇ ಬಂದಿರುವ ಮಾತು'' ಎಂದು ಕ್ಷಮೆ ಕೇಳಿದ್ದಾರೆ.
ವಿರೋಧ ಪಕ್ಷದ ನಾಯಕರಿಗೆ ಅಸ್ತ್ರವಾದ ಹೇಳಿಕೆ:-
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 'ಅಧಿಕಾರದ ಅಮಲಿನಲ್ಲಿರುವ ಬಿಜೆಪಿ ನಮ್ಮ ದೇವರನ್ನೂ ಬಿಡುವುದಿಲ್ಲ, ಭಾರತದ ಜನರನ್ನು ಬಿಡುವುದಿಲ್ಲ' ಎಂದು ಕಿಡಿ ಕಾರಿದ್ದಾರೆ.
"ಬಿಜೆಪಿಯ ಪುರಿ ಅಭ್ಯರ್ಥಿ ಮಾಡಿದ ಟೀಕೆಗಳು ಕೋಟ್ಯಂತರ ಜನರಿಂದ ಪೂಜಿಸಲ್ಪಡುವ ಮಹಾಪ್ರಭು ಶ್ರೀ ಜಗನ್ನಾಥನಿಗೆ ಮಾಡಿದ ಅವಮಾನವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಜೂನ್ 4ರಂದು 'ಜನರ ಇಚ್ಛೆ'ಯಿಂದ ಈ ಅಹಂಕಾರ ನಾಶವಾಗಲಿದೆ'' ಎಂದು ಮಲ್ಲಿಕಾರ್ಜುನ ಖರ್ಗೆ ಎಕ್ಸ್ನಲ್ಲಿ ಬರೆದಿದ್ದಾರೆ.
'ದುರಹಂಕಾರವೇ ಅವರ ವಿನಾಶಕ್ಕೆ ಕಾರಣ' ರಾಹುಲ್
ಈ ಹೇಳಿಕೆಯನ್ನು ಟೀಕಿಸಿದ ರಾಹುಲ್ ಗಾಂಧಿ, "ಪ್ರಧಾನಿ ತನ್ನನ್ನು ತಾನು ಚಕ್ರವರ್ತಿ ಎಂದು ಪರಿಗಣಿಸಲು ಪ್ರಾರಂಭಿಸಿದಾಗ ಮತ್ತು ಆಸ್ಥಾನಿಕರು ಅವರನ್ನು ದೇವರೆಂದು ಪರಿಗಣಿಸಲು ಪ್ರಾರಂಭಿಸಿದಾಗ, ಪಾಪದ ಲಂಕೆಯ ಅವನತಿ ಹತ್ತಿರದಲ್ಲಿದೆ ಎಂದು ಅರ್ಥಮಾಡಿಕೊಳ್ಳಿ. ಬೆರಳೆಣಿಕೆಯಷ್ಟು ಬಿಜೆಪಿಯವರಿಗೆ ಬಲ ನೀಡಿದವರು ಯಾರು? ಈ ದುರಹಂಕಾರವೇ ಅವರ ವಿನಾಶಕ್ಕೆ ಕಾರಣವಾಗುತ್ತಿದೆ'' ಎಂದಿದ್ದಾರೆ.
ಇನ್ನೂ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿ, 'ದೆಹಲಿ ಮುಖ್ಯಮಂತ್ರಿ ಸಂಬಿತ್ ಪಾತ್ರ ಅವರ ಹೇಳಿಕೆಗಳು ಬಿಜೆಪಿ ನಾಯಕರ ಅಹಂಕಾರವನ್ನು ಪ್ರತಿಬಿಂಬಿಸುತ್ತವೆ.ಬಿಜೆಪಿಯ ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರು ದೇವರಿಗಿಂತ ಮೇಲಿನವರು ಎಂದು ಭಾವಿಸಲು ಪ್ರಾರಂಭಿಸಿದ್ದಾರೆ. ಇದು ದುರಹಂಕಾರದ ಪರಮಾವಧಿ. ದೇವರು ಮೋದಿ ಅವರನ್ನು ಭಕ್ತ ಎಂದು ಕರೆಯುವುದು ದೇವರಿಗೆ ಮಾಡಿದ ಅವಮಾನ' ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಸಂಬಿತ್ ಪಾತ್ರಾ ಕ್ಷಮೆ
ಆದರೆ, ಸಂಬಿತ್ ಪಾತ್ರಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ, 'ಅರಿವಿಲ್ಲದೆ ಮಾಡಿದ ತಪ್ಪುಗಳನ್ನು ದೇವರು ಕೂಡ ಕ್ಷಮಿಸುತ್ತಾನೆ. ನನ್ನ ಹೇಳಿಕೆಗಾಗಿ ನಾನು ಕ್ಷಮೆಯಾಚಿಸುತ್ತೇನೆ' ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
ಸಂಬಿತ್ ಪಾತ್ರ ಬರೆದು, "ಮೋದಿ ಜಿ ಅವರು ಜಗನ್ನಾಥನ ನಿಜವಾದ ಭಕ್ತ ಎಂದು ನಾನು ನನ್ನ ಹೇಳಿಕೆಯಲ್ಲಿ ಹೇಳಿದ್ದೇನೆ. ಈ ಅನುಕ್ರಮದಲ್ಲಿ, ಒಮ್ಮೆ ನನ್ನ ನಾಲಿಗೆ ಜಾರಿ ನಾನು ವಿರುದ್ಧವಾಗಿ ಮಾತನಾಡಿದೆ. ಅಂತಹ ತಪ್ಪು ಯಾರಿಗಾದರೂ ಆಗಬಹುದು. ಇದು ಸುಳ್ಳಲ್ಲ. ಅದನ್ನು ಗಾಳಿಗೆ ತೂರಬೇಕು ಮತ್ತು ಅನಗತ್ಯವಾಗಿ ಸಮಸ್ಯೆಯನ್ನು ಮಾಡಬಾರದು'' ಎಂದಿದ್ದಾರೆ.
Xನಲ್ಲಿನ ಪೋಸ್ಟ್ನಲ್ಲಿ ಪಟ್ನಾಯಕ್, "ಮಹಾಪ್ರಭು ಶ್ರೀ ಜಗನ್ನಾಥ ಬ್ರಹ್ಮಾಂಡದ ಪ್ರಭು. ಮಹಾಪ್ರಭುವನ್ನು ಇನ್ನೊಬ್ಬರ ಭಕ್ತ ಎಂದು ಕರೆಯುವುದು ಭಗವಂತನಿಗೆ ಮಾಡಿದ ಅವಮಾನ. ಇದು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರು ಮತ್ತು ಒಡಿಯಸ್ನ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಅವಮಾನ ಮಾಡಿದೆ'' ಎಂದು ಖಂಡಿಸಿದ್ದಾರೆ''
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications