ಕೆಂಪು ಡೈರಿ ಒಪನ್ ಆದ್ರೆ ದೊಡ್ಡವರ ಹೆಸರುಗಳು ಹೊರಬರಲಿವೆ : ರಾಜಸ್ಥಾನದಲ್ಲಿ ಮೋದಿ ವಾಗ್ದಾಳಿ

ಜೈಪುರ, ಜುಲೈ 27: ಕೆಂಪು ಡೈರಿಯು ಕಾಂಗ್ರೆಸ್‌ನ ಕರಾಳ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಂಪು ಡೈರಿಯಲ್ಲಿರುವ ರಹಸ್ಯಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅನ್ನು ಹಾಳು ಮಾಡಲಿದೆ. ಇದು ಮುಖ್ಯಮಂತ್ರಿ ಗೆಹ್ಲೋಟ್ ಅವರ ಬಗ್ಗೆ ಖಂಡನೀಯ ಮಾಹಿತಿಯನ್ನು ಹೊಂದಿದೆ. ಈ ಕೆಂಪು ಡೈರಿಯಲ್ಲಿ ಕಾಂಗ್ರೆಸ್ ಸರ್ಕಾರದ ಕರಾಳ ಕೃತ್ಯಗಳ ದಾಖಲೆಗಳಿವೆ ಎಂದು ಹೇಳಲಾಗುತ್ತದೆ. 'ಕೆಂಪು ಡೈರಿ'ಯ ಪುಟಗಳನ್ನು ತೆರೆದರೆ, ಹಲವು ದೊಡ್ಡ ಹೆಸರುಗಳು ಹೊರಬರಲಿವೆ ಎಂದು ಪ್ರಧಾನಿ ಹೇಳಿದರು.

pm-modi-hits-out-at-congress

ಈ 'ಕೆಂಪು ಡೈರಿ'ಯ ಪ್ರಸ್ತಾಪ ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರನ್ನೂ ಮೌನವಾಗಿಸಿದೆ. ಈ ಜನರು ತಮ್ಮ ತುಟಿಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಬಹುದಾದರೂ, ಈ 'ಕೆಂಪು ಡೈರಿ' ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ನ 'ಲೂಟಿ ಕಿ ದುಕಾನ್, ಜೂಟ್‌ ಕಿ ದುಕಾನ್' (ಲೂಟಿ ಮತ್ತು ಸುಳ್ಳಿನ ಅಂಗಡಿ)ಯ ಇತ್ತೀಚಿನ ಉತ್ಪನ್ನ ಕೆಂಪು ಡೈರಿಯಾಗಿದೆ. ಇದು ಕಾಂಗ್ರೆಸ್‌ನ ಭ್ರಷ್ಟಾಚಾರದ ರಹಸ್ಯಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಕೆಂಪು ಡೈರಿಯು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಾಶ ಮಾಡುತ್ತದೆ ಎಂದೂ ಪ್ರಧಾನಿ ಮೋದಿ ಟೀಕೆ ಮಾಡಿದ್ದಾರೆ.

ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಇಂದು ರಾಜಸ್ಥಾನದಲ್ಲಿ ಒಂದೇ ಧ್ವನಿ, ಒಂದೇ ಘೋಷಣೆ - ಕಮಲ ಗೆಲ್ಲುತ್ತದೆ, ಕಮಲ ಅರಳುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

pm-modi-hits-out-at-congress

ಯಾವುದೇ ಕಾರಣಕ್ಕೂ ಇಲ್ಲಿನ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ ಎಂದು ರಾಜ್ಯದ ಜನರೇ ಹೇಳುತ್ತಿದ್ದಾರೆ. ಈ ಭ್ರಷ್ಟ ಸರ್ಕಾರ ತೊಲಗಬೇಕು. ಕಮಲ ಅರಳಬೇಕು ಎಂದು ಒಂದೇ ಒಂದು ಘೋಷಣೆ ಜನರಿಂದ ಕೇಳಿ ಬರುತ್ತಿದೆ. ಅದು ಈ ಬಾರಿ ಈಡೇರಲಿದೆ ಎಂದು ಅಶೋಕ್ ಗೆಹೋಟ್ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

ಕೆಂಪು ಡೈರಿ ಪ್ರಸ್ತಾಪಿಸಿದ ಮೋದಿ ವಿರುದ್ದ ಗೆಹ್ಲೋಟ್‌ ಕಿಡಿ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಕೆಂಪು ಡೈರಿ"ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಕೆಲವೇ ಗಂಟೆಗಳ ನಂತರ, ರಾಜಸ್ಥಾನ ಮುಖ್ಯಮಂತ್ರಿ ಗುರುವಾರ ಬಿಜೆಪಿಯು ಕಾಲ್ಪನಿಕ ಡೈರಿಯಲ್ಲಿ ರಾಜಕೀಯವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಕೇಂದ್ರೀಯ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರ ತನಿಖಾ ದಳ (ಸಿಬಿಐ) ಏಕೆ ಈ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲವೇ ಎಂದು ಹೇಳಿದ್ದಾರೆ.

ಪ್ರಧಾನಿ ಹುದ್ದೆಗೆ ಘನತೆ ಇದೆ. ಅವರು ಐ-ಟಿ, ಇಡಿ, ಸಿಬಿಐ ಅನ್ನು ಹೊಂದಿದ್ದಾರೆ, ಅವರು ಇಡೀ ದೇಶದಲ್ಲಿ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜಸ್ಥಾನ ದೇಶದಲ್ಲೇ ಅತಿ ಹೆಚ್ಚು ದಾಳಿಗಳನ್ನು ಕಂಡಿದೆ. ಈ ಜನರು (ಬಿಜೆಪಿ) ಚುನಾವಣೆಗೆ ಮುನ್ನ ಭಯಭೀತರಾಗಿದ್ದಾರೆ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಇನ್ನೂ ಮೋದಿ ಅವರು ಕೆಂಪು ಸಿಲಿಂಡರ್ ಬಗ್ಗೆ ಮಾತನಾಡಬೇಕು,ಜನರು ಅವರಿಗೆ (ಬಿಜೆಪಿ) ಕೆಂಪು ಬಾವುಟವನ್ನು ತೋರಿಸುತ್ತಾರೆ. ಕೆಂಪು ಡೈರಿ ಬಗ್ಗೆ ಮಾತನಾಡುವ ಮೂಲಕ ಅವರು ಸರ್ಕಾರದ ವಿರುದ್ಧ ಪಿತೂರಿ ನಡೆಸಿದ್ದಾರೆ, ವಿಧಾನಸಭೆಯಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+